Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರ್ನಾಟಕಕ್ಕೆ ಹೆಮ್ಮೆ ತಂದ ರಾಮ್ ಗೋಪಾಲ್ ವರ್ಮಾ
ಸದಾ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಲ್ಲಿರುವ ರಾಮ್ ಗೋಪಾಲ್ ವರ್ಮಾ ಈಗ ಕರ್ನಾಟಕ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹಲವು ಬಾರಿ ಕನ್ನಡಿಗರ ಕೆಂಗಣ್ಣಿಗೂ ಗುರಿಯಾಗಿರುವ ಆರ್.ಜಿ.ವಿ ಈ ಸಲ ಇಷ್ಟವಾಗುವ ಕೆಲಸ ಮಾಡಿದ್ದಾರೆ.
ಏನಪ್ಪಾ ವಿವಾದಾತ್ಮಕ ನಿರ್ದೇಶಕನಿಂದ ಅಂತಹ ಖುಷಿಯ ವಿಚಾರ ಅಂದ್ರಾ.! ಇದೇ ರೀ. ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ಅಭಿನಯಿಸಿ, ವರ್ಮಾ ನಿರ್ದೇಶನ ಮಾಡಿರುವ 'ಆಫೀಸರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಟ್ರೈಲರ್ ಮತ್ತು ಪೋಸ್ಟರ್ ಗಳಿಂದ ಹೆಚ್ಚು ಗಮನ ಸೆಳೆಯುತ್ತಿದೆ.
ಇಷ್ಟು ದಿನ ಇದು ಆರ್.ಜಿ.ವಿ ಸಿನಿಮಾ, ನಾಗಾರ್ಜುನ ಸಿನಿಮಾ ಎನ್ನುತ್ತಿದ್ದವರು, ಇದು ಕರ್ನಾಟಕ್ಕೂ ಸಂಬಂಧ ಹೊಂದಿರುವ ಸಿನಿಮಾ ಎನ್ನಬೇಕಿದೆ. ಅಷ್ಟಕ್ಕೂ, ವರ್ಮಾ ಅವರ ಆಫೀಸರ್ ಗೂ ಕರ್ನಾಟಕಕ್ಕೂ ಏನ್ ಸಂಬಂಧ. ಇದರಿಂದ ಕನ್ನಡಿಗರು ಯಾಕೆ ಹೆಮ್ಮೆ ಪಡಬೇಕು.? ಮುಂದೆ ಓದಿ....
'ಆಫೀಸರ್' ಸಿನಿಮಾ ಯಾರ ಕಥೆ ಗೊತ್ತಾ.?
ನಾಗಾರ್ಜುನ ಅಭಿನಯದ 'ಆಫೀಸರ್' ನೈಜಕಥೆಯಾಧರಿತ ಸಿನಿಮಾ. ಮುಂಬೈನಲ್ಲಿ ನಡೆಯುವ ಕಥೆ ಇದಾಗಿದ್ದು, ಮುಂಬೈ ಎಸ್.ಐ.ಟಿ ಅಧಿಕಾರೊಯೊಬ್ಬರ ನಿಜಜೀವನದ ಕಥೆ. ಈ ಅಧಿಕಾರಿ ಮೂಲತಃ ಕರ್ನಾಟಕದವರು ಎನ್ನುವುದು ಹೆಮ್ಮೆಯ ವಿಚಾರ. ಈ ವಿಷ್ಯವನ್ನ ಸ್ವತಃ ರಾಮ್ ಗೋಪಾಲ್ ವರ್ಮಾ ಅವರೇ ಬಹಿರಂಗಪಡಿಸಿದ್ದಾರೆ.
ಯಾರು ಆ ಅಧಿಕಾರಿ.?
'ಆಫೀಸರ್' ಸಿನಿಮಾ ಹಿಂದಿನ ರಿಯಲ್ ಹೀರೋ ಐಪಿಎಸ್ ಅಧಿಕಾರಿ ಕೆ.ಎಸ್ ಪ್ರಸನ್ನ. ಅಂದ್ಹಾಗೆ, ಪ್ರಸನ್ನ ಅವರು ಮೂಲತಃ ಕರ್ನಾಟಕದವರು. ಮುಂಬೈನಲ್ಲಿ ಎಸ್.ಐ.ಟಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಕೂಡ ಇವರನ್ನ ಹಲವು ಬಾರಿ ಭೇಟಿ ಮಾಡಿದ್ದಾರೆ. ಪ್ರಸ್ತುತ ಮುಂಬೈ ಕ್ರೈಂ ವಿಭಾಗದಲ್ಲಿ ಸಹಾಯಕ ಕಮೀಷನರ್ ಆಗಿ ಕೆಲಸ ಮಾಡುತ್ತಿದ್ದಾರೆ.
'ಬಾಹುಬಲಿ' ಚಿತ್ರವನ್ನ ಕೈಬಿಟ್ಟ ಶ್ರೀದೇವಿಯ ಅಸಲಿ ಕಾರಣ ಬಿಚ್ಚಿಟ್ಟ ವರ್ಮಾ
|
ನಾಗಾರ್ಜುನ ಸೂಕ್ತ ಆಯ್ಕೆ
'ಐಪಿಎಸ್ ಅಧಿಕಾರಿ ಕೆ.ಎಸ್ ಪ್ರಸನ್ನ ಮತ್ತು ನಟ ನಾಗಾರ್ಜುನ ಅವರ ನಡುವೆ ವಿಚಿತ್ರ ಹೋಲಿಕೆ ಇದೆ. ನನ್ನ ವೈಯಕ್ತಿಕ ದೃಷ್ಟಿಕೋನದಲ್ಲಿ ಇಬ್ಬರನ್ನ ಹೋಲಿಸಿದ್ದೇನೆ. ಮತ್ತು ಆಫೀಸರ್ ಚಿತ್ರದಲ್ಲಿ ಅದನ್ನ ಸೆರೆಹಿಡಿದಿದ್ದೇನೆ'' ಎಂದು ಆರ್.ಜಿ.ವಿ ಸರಣಿ ಟ್ವೀಟ್ ಮಾಡಿದ್ದಾರೆ.
ಪ್ರಸನ್ನ ಅವರೇ ಹೇಳಿದ ಕಥೆ
''ಕರ್ನಾಟಕ ಮೂಲದ ಕೆ ಎಂ ಪ್ರಸನ್ನ ಐಪಿಎಸ್ ಅಧಿಕಾರಿ. ಅವರನ್ನು ಮುಂಬೈನ ಓರ್ವ ಪೊಲೀಸ್ ಉನ್ನತಾಧಿಕಾರಿ ಪ್ರಕರಣದ ವಿಚಾರಣೆಗೆ ರಚಿಸಿದ್ದ ವಿಶೇಷ ತನಿಖಾ ತಂಡದ (ಎಸ್.ಐ.ಟಿ) ಮುಖ್ಯಸ್ಥರನ್ನಾಗಿ ನೇಮಿಸಿದ್ದರು. 2010ರಲ್ಲಿ ಅವರು ನನ್ನೊಂದಿಗೆ ಕೆಲವು ಸಂಗತಿಗಳನ್ನು ಹಂಚಿಕೊಂಡರು. ಅದರ ಆಧಾರವಾಗಿ ತೆರೆಗೆ ತಂದಿರುವ ಸಿನಿಮಾ 'ಆಫೀಸರ್' ಎಂದು ಟ್ವೀಟ್ ಮಾಡಿದ್ದಾರೆ.
ನಟಿ-ನಿರ್ಮಾಪಕನ ನಡುವಿನ 'ಕಾಸ್ಟಿಂಗ್ ಕೌಚ್' ಸಂಭಾಷಣೆ ಲೀಕ್ ಮಾಡಿದ ವರ್ಮಾ