Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸತೀಶ್ ಜಾರಕಿಹೊಳಿಯ ಗ್ರಹಚಾರ ಬಿಡಿಸ್ತೀನಿ ಎಂದ ಒಳ್ಳೆ ಹುಡ್ಗ ಪ್ರಥಮ್
ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ 'ಹಿಂದೂ' ಪದದ ಬಗ್ಗೆ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.
ಪರ್ಷಿಯನ್ ಭಾಷೆಯಲ್ಲಿ 'ಹಿಂದೂ' ಪದಕ್ಕೆ ಅಶ್ಲೀಲ ಅರ್ಥವಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು. ಹಲವರು ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದ್ದಾರೆ. ಕಾಂಗ್ರೆಸ್ನ ವಿಧಾನಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಸತೀಶ್ ಹೇಳಿಕೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸತೀಶ್ ಅವರಿಂದ ಸ್ಪಷ್ಟನೆ ಪಡೆಯುತ್ತೇವೆ ಎಂದಿದ್ದಾರೆ. ಇನ್ನು ಮುಖ್ಯಮಂತ್ರಿಯಾದಿಯಾಗಿ ಬಿಜೆಪಿಯ ನಾಯಕರು ಸತೀಶ್ರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕೆಲವು ಸಿನಿಮಾ ನಟ-ನಟಿಯರು ಸಹ ಸತೀಶ್ ಜಾರಕಿಹೊಳಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಟ ಚೇತನ್ ಅಹಿಂಸ, ನಟ ಒಳ್ಳೆ ಹುಡ್ಗ ಪ್ರಥಮ್, ನಟಿ ಮಾಳವಿಕಾ ಅವಿನಾಶ್ ಇನ್ನೂ ಕೆಲವರು ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದರಲ್ಲಿ ಪ್ರಥಮ್ ನೀಡಿರುವ ಪ್ರತಿಕ್ರಿಯೆ ವೈರಲ್ ಆಗುತ್ತಿದೆ.
ಸತೀಶ್ ಜಾರಕಿಹೊಳಿಯ ಗ್ರಹಚಾರ ಬಿಡಿಸ್ತೀನಿ ಎಂದ ಪ್ರಥಮ್
ಟ್ವಿಟ್ಟರ್ ಹಾಗೂ ಫೇಸ್ಬುಕ್ ಎರಡರಲ್ಲೂ ಸತೀಶ್ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಥಮ್, ''ಇದೆಲ್ಲಾ ನೋಡಿಕೊಂಡು ಸುಮ್ಮನಿರೋಕಾಗಲ್ಲ, ನನ್ನ ಸಿನಿಮಾ ಸೋತರೂ ನಾನೊಬ್ಬ ಭಾರತೀಯ, ಹಿಂದು, ಹೆಮ್ಮೆಯ ಕನ್ನಡಿಗ, ನಾಲಿಗೆ ಮೇಲೆ ನಿಗಾ ಇರಲಿ ಸತೀಶ್ ಜಾರಕಿಹೊಳ್ಳಿ, ಯಾವುದಾದ್ರೂ ವೇದಿಕೆ ಕಾರ್ಯಕ್ರಮದಲ್ಲಿ ನನ್ನ ಜೊತೆ ನೇರವಾಗಿ ಸಿಕ್ಕಿ. ನಿಮ್ಗೆ ಗ್ರಹಚಾರ ಬಿಡಿಸಲಿಲ್ಲ ಅಂದ್ರೆ ನೋಡಿ'' ಎಂದು ಆಕ್ರೋಶ ಹೊರಹಾಕಿದ್ದಾರೆ ಪ್ರಥಮ್.
ರಮೇಶ್ ಜಾರಕಿಹೊಳಿಯ ವಿಡಿಯೋ ನೆನಪಿಸಿದ ಪ್ರಥಮ್!
ಇನ್ನು ಟ್ವಿಟ್ಟರ್ನಲ್ಲಿ ಸತೀಶ್ರ ಸಹೋದರ ರಮೇಶ್ ಜಾರಕಿಹೊಳಿಯ ವಿಡಿಯೋ ಬಗ್ಗೆ ಪ್ರಸ್ತಾಪಿಸಿ ಬರೆದಿರುವ ಪ್ರಥಮ್, ''ಸತೀಶ್ ಜಾರಕಿಹೊಳ್ಳಿ ಅವ್ರೆ, ನೀವು ಹಿಂದು ಅಂದ್ರೆ ಅಶ್ಲೀಲ ಅಂದಿದ್ದೀರಾ ನಾನು ನಿಮ್ಗೆ ಕನ್ನಡದಲ್ಲಿ ತಿಳಿಸಿಕೊಡ್ತೀನಿ, ಅಶ್ಲೀಲ ಅಂದ್ರೆ ಹೋದ ವರ್ಷ CD ಬಂತಲ್ಲ? ಅದೇ ಎಗರಿ ಎಗರಿ ಬೀಳ್ತಿದ್ರಲ್ಲಾ? ಅದು ಅಶ್ಮೀಲ. ಹಿಂದು ಅನ್ನೋದಲ್ಲ. ನನ್ನ ಸಿನಿಮಾಸೋತರೂ ನಾನು ಹಿಂದು. ಮುಂದಿನ ಬಾರಿ ಲೈಟ್ ಆಫ್ ಮಾಡಿಕೊಂಡು ಎಗರೋಕೆ ಹೇಳಿ ಅಶ್ಲೀಲತೆ ಕಮ್ಮಿ ಆಗುತ್ತೆ ಎಂದು ಬರೆದುಕೊಂಡಿದ್ದಾರೆ ಪ್ರಥಮ್.
ನಟ ಚೇತನ್ ಅಹಿಂಸ ಹೇಳಿದ್ದೇನು?
ನಟ ಚೇತನ್ ಅಹಿಂಸ ಸಹ ಸತೀಶ್ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, 'ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಯು ಆರ್ಟಿಕಲ್-19 ರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿದೆ. ಪರ್ಷಿಯನ್ ಪದವಾದ 'ಹಿಂದೂ'ವಿನ ಪರ್ಯಾಯ ವ್ಯಾಖ್ಯಾನಗಳ ಕುರಿತು ಹೆಚ್ಚಿನ ಸಂಶೋಧನೆ ಮತ್ತು ಚರ್ಚೆಗಳ ಅಗತ್ಯವಿದೆ. ಭವಿಷ್ಯದಲ್ಲಿ ಜಾರಕಿಹೊಳಿ ಅವರು ರಾಜಕೀಯ ಲಾಭಕ್ಕಾಗಿ 'ಹಿಂದೂ' ಕಾಂಗ್ರೆಸ್ ಜೊತೆ ನಿಲ್ಲುವ ಬದಲು ಸಮಾನತಾವಾದಿಗಳಾದ ನಮ್ಮೊಂದಿಗೆ ಮತ್ತು ಸತ್ಯದೊಂದಿಗೆ ನಿಲ್ಲುತ್ತಾರೆ ಎಂದು ಭಾವಹಿಸುತ್ತೇನೆ'' ಎಂದಿದ್ದಾರೆ.
ಸತೀಶ್ ಜಾರಕಿಹೊಳಿ ಹೆಸರು ಉಲ್ಲೇಖಿಸದೆ ಟೀಕೆ
ಇನ್ನು ಬಿಜೆಪಿ ವಕ್ತಾರೆ ಹಾಗೂ ನಟಿಯೂ ಆಗಿರುವ ಮಾಳವಿಕಾ ಅವಿನಾಶ್ ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಪೋಸ್ಟ್ಗಳನ್ನು ಹಂಚಿಕೊಂಡಿದ್ದು, ''ಆಯ್ತು ನಾವು ಸನಾತನ ಧರ್ಮ ಅಂತಾನೇ ಹೇಳ್ತೀವಿ. ಅದರ ವಿಸ್ತಾರದಲ್ಲಿ ನಿಮ್ಮಂಥಹಾ ಚಾರ್ವಾಕರೂ ಸೇರ್ಯಾರೆ'' ಎಂದಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ, ''ಪರ್ಷಿಯಲ್ ಕಲಿಯುವುದರಲ್ಲಿ ಬ್ಯುಸಿ ಇರುವವರಿಗೆ ಈ ದೇಶದ ಹಿಂದೂವಿನ ಧ್ವನಿಯನ್ನು ಆಸಲಿಸಲೆಲ್ಲಿ ಸಮಯ?'' ಎಂದು ಸತೀಶ್ ಜಾರಕಿಹೊಳಿ ಹೆಸರು ಉಲ್ಲೇಖಿಸದೆ ಪ್ರಶ್ನೆ ಮಾಡಿದ್ದಾರೆ.