Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏಪ್ರಿಲ್ನಲ್ಲಿ ತೆರೆಗೆ ಬರಲಿದೆ ಕನ್ನಡದ ಒನ್, ಟು, ಥ್ರೀ..
ಭಾರೀ ತಾರಾಗಣವಿದ್ದರೂ, ಹೆಚ್ಚಾಗಿ ಸುದ್ದಿ ಮಾಡದ, 'ಒನ್ಟುಥ್ರೀ" ಏಪ್ರಿಲ್ ತಿಂಗಳಿನಲ್ಲಿ ಸದ್ದುಗದ್ದಲವಿಲ್ಲದೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದಕ್ಕಾಗಿ ಭರದ ಸಿದ್ಧತೆಗಳೂ ಸಾಗಿವೆ.
ನೃತ್ಯ ಸಂಯೋಜನೆಯಲ್ಲಿ ಪ್ರಖ್ಯಾತರಾಗಿರುವ ಮೂಗೂರು ಸುಂದರ್ ಅವರ ಪುತ್ರರಾದ ಪ್ರಭುದೇವ್, ರಾಜು ಸುಂದರಂ ಹಾಗೂ ಪ್ರಸಾದ್ ಅವರ ಜೊತೆ 'ನಾಗರಹಾವು" ಚಿತ್ರದಲ್ಲಿ ನಟಿಸುತ್ತಿರುವ ತಮಿಳಿನ ನಂ.1 ನಾಯಕಿ ಜ್ಯೋತಿಕಾ ಕೂಡ ಇದ್ದಾರೆ.
ಇಷ್ಟು ಭಾರೀ ತಾರಾಗಣವಿದ್ದರೂ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ 123, ಹೆಚ್ಚಾಗಿ ಸುದ್ದಿ ಮಾಡಲಿಲ್ಲ ಎಂಬುದು ವಿಶೇಷ. ಈಗ ಏಕಾಏಕಿ '123" ತೆರೆಗೆ ಬರಲು ತವಕಿಸುತ್ತಿದೆ. ಈ ಚಿತ್ರವನ್ನು ಸಿದ್ದೇಶ್ ಫಿಲಂಸ್ ಬ್ಯಾನರ್ನಲ್ಲಿ ಬಿ. ಕುಮಾರ್ ನಿರ್ಮಿಸುತ್ತಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಈ ಚಿತ್ರದ ವಿತರಣೆಯ ಹಕ್ಕನ್ನು ಪಡೆದಿರುವ ಆಕಾಶ್ ಆಡಿಯೋ ಈ ಚಿತ್ರದ ಧ್ವನಿಸುರುಳಿಯನ್ನು ವೈಭವದ ಹಾಗೂ ವಿಭಿನ್ನ ರೀತಿಯ ಸಮಾರಂಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಅಂದಹಾಗೆ ಈ ಚಿತ್ರವನ್ನು ಸುಭಾಷ್ ನಿರ್ದೇಶಿಸುತ್ತಿದ್ದು, ಮೂಗೂರು ಸುಂದರ್ ನೃತ್ಯ ಸಂಯೋಜಿಸಿದ್ದಾರೆ. ಕೆ. ಕಲ್ಯಾಣ್ ಸಾಹಿತ್ಯ, ದೇವಾ ಸಂಗೀತ, ವೈ.ಎನ್. ಮುರುಳಿ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರೀಕರಣಕ್ಕಾಗಿ ಈ ಚಿತ್ರತಂಡ ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ವಿದೇಶಗಳನ್ನೂ ಸುತ್ತಿ ಬಂದಿದೆ.
ವಾರ್ತಾ
ಸಂಚಯ
ಮಲೇಷಿಯಾಕ್ಕೆ
ಮೂಗೂರು
ಸುಂದರಂ
ಸಂಸಾರದ'ಮನಸ್ಸೆಲ್ಲಾ
ನೀನೇ
ಮುಖಪುಟ / ಸ್ಯಾಂಡಲ್ವುಡ್