Don't Miss!
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪೇಟಾ' ಸುದ್ದಿಗೋಷ್ಠಿಯಲ್ಲಿ ಸುದೀಪ್-ಕಾರ್ತಿಕ್ ಬಗ್ಗೆ ಸರ್ಪ್ರೈಸ್ ಕೊಟ್ಟ ಜಾಕ್ ಮಂಜು
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪೇಟಾ' ಸಿನಿಮಾ ಇದೇ ವಾರ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಕಾರ್ತಿಕ್ ಸುಬ್ಬರಾಜು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಜನಿಯ ಕಂಬ್ಯಾಕ್ ಸಿನಿಮಾ ಇದಾಗಲಿದೆಯಂತೆ.
ಎಲ್ಲ ಅಂದುಕೊಂಡಂತೆ ಆದ್ರೆ, ಪೇಟಾ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಕನ್ನಡದ ವಿತರಕ ಜಾಕ್ ಮಂಜು.
ಹೇಗಿರುತ್ತೆ ಸುದೀಪ್ - ಅನೂಪ್ ಜೋಡಿಯ ಸಿನಿಮಾ?
ಹೌದು, ಪೇಟಾ ಚಿತ್ರವನ್ನ ಕರ್ನಾಟಕದಲ್ಲಿ ವಿತರಕ ಜಾಕ್ ಮಂಜು ಮತ್ತು ಸೈಯದ್ ಸಲಾಂ ವಿತರಣೆ ಮಾಡ್ತಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪೇಟಾ ನಿರ್ದೇಶಕ ಮತ್ತು ಜಾಕ್ ಮಂಜು ಈ ಬಗ್ಗೆ ಸುಳಿವು ನೀಡಿದ್ದಾರೆ. ಮುಂದೆ ಓದಿ....
ಕಥೆ ಮಾಡಿಸುವ ಆಸೆ
''ಕಾರ್ತಿಕ್ ಸುಬ್ಬರಾಜು ನಿರ್ದೇಶನದಲ್ಲಿ ನನಗೆ ನಂಬಿಕೆ ಇದೆ. ಅವರ ಚಿತ್ರಗಳನ್ನ ನೋಡಿದ್ದೇನೆ. ಕಾರ್ತಿಕ್ ಸುಬ್ಬರಾಜು ಮತ್ತು ಸುದೀಪ್ ಜೋಡಿಯಲ್ಲಿ ಒಂದು ಕಥೆ ಮಾಡಿ, ಸಿನಿಮಾ ಮಾಡ್ಬೇಕು ಎಂಬ ಆಸೆ ಇದೆ. ಅದು ಪ್ರಗತಿಯಲ್ಲಿದೆ, ನೋಡೋಣ'' ಎಂದು ಜಾಕ್ ಮಂಜು ತಿಳಿಸಿದರು.
'ಅರ್ಜುನ'ನಿಗೆ ಕೃಷ್ಣನ ದಾರಿ : ಜನ್ಯಗೆ ಜೀವ ನೀಡಿದ್ದ ಸುದೀಪ್
ಕಾರ್ತಿಕ್ ಚಿತ್ರಗಳು ಕನ್ನಡದಲ್ಲಿ ರೀಮೇಕ್ ಆಗಿದೆ
ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಫಿಜಾ, ಜಿಗರ್ ಥಂಡಾ ಚಿತ್ರಗಳು ಕನ್ನಡದಲ್ಲಿ ರೀಮೇಕ್ ಆಗಿ, ಸಕ್ಸಸ್ ಕಂಡಿದೆ. ಈ ಚಿತ್ರಗಳನ್ನ ವಿತರಣೆ ಮಾಡಿದ್ದು ಕೂಡ ಇದೇ ಜಾಕ್ ಮಂಜು. ಹಾಗಾಗಿ, ವಿತರಕ ಮಂಜು ಅವರಿಗೆ ಕಾರ್ತಿಕ್ ಮೇಲೆ ನಂಬಿಕೆ ಇದೆ.
ವಿಘ್ನಗಳನ್ನ ದಾಟಿ '50' ಮುಟ್ಟಿದ 'ದಿ ವಿಲನ್': ಸಂತಸದಲ್ಲೂ ಯಾಕೆ ಈ ನಿರ್ಲಕ್ಷ್ಯ.?
ಮೊದಲ ಸಲ ವಿತರಣೆ
ಜಾಕ್ ಮಂಜು ಇಷ್ಟು ದಿನ ಕನ್ನಡ ಸಿನಿಮಾಗಳನ್ನ ಮಾತ್ರ ವಿತರಣೆ ಮಾಡ್ತಿದ್ರು. ಇದೇ ಮೊದಲ ಬಾರಿಗೆ ಮೈಸೂರು ಟಾಕೀಸ್ ಮೂಲಕ ಪರಭಾಷೆ ಚಿತ್ರವೊಂದನ್ನ ಕರ್ನಾಟಕದಲ್ಲಿ ವಿತರಣೆ ಮಾಡ್ತಿದ್ದಾರೆ. ಅದು ರಜನಿಕಾಂತ್ ಸಿನಿಮಾ ಎನ್ನುವುದು ವಿಶೇಷ.
ಸುದೀಪ್ ಆಪ್ತ ಜಾಕ್ ಮಂಜು
ಅಂದ್ಹಾಗೆ, ಜಾಕ್ ಮಂಜು ಅವರು ಸುದೀಪ್ ಅವರ ಆಪ್ತ ವ್ಯಕ್ತಿ. ಬಹುತೇಕ ಸುದೀಪ್ ಸಿನಿಮಾಗಳಲ್ಲಿ ಜಾಕ್ ಮಂಜು ನಿರ್ಮಾಪಕರಾಗಿ, ವಿತರಕರಾಗಿ ಕೆಲಸ ಮಾಡ್ತಾರೆ. ಹಾಗಾಗಿ, ಸುದೀಪ್ ಗೆ ಕಾರ್ತಿಕ್ ಜೋಡಿಯಲ್ಲಿ ಸಿನಿಮಾ ಮಾಡುವ ಪ್ಲಾನ್ ಮಾಡ್ತಿದ್ದಾರೆ. ಬಹುಶಃ ಕಥೆ ಓಕೆ ಆದ್ರೆ, ಖಂಡಿತಾ ಈ ಸಿನಿಮಾ ಬರೋದು ಪಕ್ಕಾ.