Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೈಜ್ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಿದೆ ಪ್ರೇಮ್ ಅಡ್ಡ
ಚಿತ್ರದ ಶೀರ್ಷಿಕೆ ನೀಡುವಾಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (ಕೆಎಫ್ಸಿಸಿ) ವಿಧಿಸಿದ್ದ ಷರತ್ತಿನ ಪ್ರಕಾರ, ಶೀರ್ಷಿಕೆಯಲ್ಲಿ 'ಪ್ರೇಮ್ ಅಡ್ಡ' ಎನ್ನುವುದು ಒಂದೇ ಗಾತ್ರದಲ್ಲಿ ಹಾಗೂ ಒಂದೇ ಶೈಲಿಯಲ್ಲಿ ಮುದ್ರಣಗೊಳ್ಳಬೇಕು. 'ಪ್ರೇಮ್' ಎನ್ನುವುದನ್ನು ಚಿಕ್ಕದಾಗಿ ಮತ್ತು 'ಅಡ್ಡ' ಎನ್ನುವುದನ್ನು ದೊಡ್ಡದಾಗಿ ಮುದ್ರಿಸಬಾರದು. ಆದರೆ, ಮೊದಲು ಷರತ್ತಿಗೆ ಒಪ್ಪಿದ್ದ ಚಿತ್ರತಂಡ ಈಗ ತಿರುಗಿಬಿದ್ದಿದೆ.
ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಜಾಹೀರಾತುಗಳಲ್ಲಿ 'ಪ್ರೇಮ್ ಅಡ್ಡ' ಎನ್ನುವುದು ಬೇರೆ ಬೇರೆ ಸೈಜ್ ಶೈಲಿಯಲ್ಲಿ ಕಾಣಿಸಿಕೊಂಡಿದೆ. ಇದು ಕೆಎಫ್ಸಿಸಿ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ವಾಣಿಜ್ಯ ಮಂಡಳಿ, ಪ್ರೇಮ್ ಅಡ್ಡ ಚಿತ್ರದ ಯಾವುದೇ ಜಾಹೀರಾತುಗಳನ್ನು ಪ್ರಕಟಿಸಬಾರದೆಂದು ಎಲ್ಲಾ ಮಾಧ್ಯಮಗಳಿಗೆ ಸೂಚನೆ ರವಾನಿಸಿದೆ. ಇದು ಪ್ರೇಮ್ ಅಡ್ಡಕ್ಕೆ ನುಂಗಲಾರದ ತುತ್ತಾಗಿದೆ.
ಇದು ತಿಳಿಯುತ್ತಿದ್ದಂತೆ ಪತ್ರಿಕಾಗೋಷ್ಠಿ ನಡೆಸಿರುವ 'ಪ್ರೇಮ್ ಅಡ್ಡ' ಚಿತ್ರತಂಡ, "ನಾವು ಕೆಎಫ್ಸಿಸಿ ಸೂಚನೆಗಳಿಗೆ ಬಗ್ಗುವುದಿಲ್ಲ, ಶೀರ್ಷಿಕೆಯ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ನಾವು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಮೊರೆ ಹೋಗಿದ್ದೇವೆ. ಅಲ್ಲಿ ನಮಗೆ ನ್ಯಾಯ ಸಿಗುವ ಭರವಸೆಯಿದೆ. ಒಮ್ಮೆ ಸಿಗದಿದ್ದರೆ ಕೋರ್ಟ್ ಮೆಟ್ಟಿಲೇರುತ್ತೇವೆ" ಎಂದಿದೆ.
"ನಮ್ಮ ಚಿತ್ರ ಪ್ರೇಮ್ ಅಡ್ಡ ಶೀರ್ಷಿಕೆ ಹೀಗೆಯೇ ಇರಬೇಕೆನ್ನುವುದು ಜ್ಯೋತಿಷಿಗಳು ನೀಡಿರುವ ಸಲಹೆ. ನಾವು ಅದನ್ನು ಧಿಕ್ಕರಿಸುವ ಮನಸ್ಥಿತಿ ಹೊಂದಿಲ್ಲ. ಚಿತ್ರರಂಗದಲ್ಲಿ ಕ್ರಿಯಾಶೀಲತೆಗೆ ಯಾವುದೇ ಷರತ್ತು, ಅಡ್ಡಿ-ಆತಂಕಗಳು ಇರಬಾರದು" ಎಂಬುದು ನಿರ್ಮಾಪಕ ಮುರಳಿಕೃಷ್ಣ ಹಾಗೂ ನಿರ್ದೇಶಕ ಮಹೇಶ್ ಬಾಬು ಪ್ರತಿಕ್ರಿಯೆ. ಈ ಚಿತ್ರದ ನಟ, ನಿರ್ದೇಶಕ ಪ್ರೇಮ್ ಪ್ರತಿಕ್ರಿಯೆ ಏನೋ!
ಅಂದಹಾಗೆ, ಸದಾ ವಿವಾದಗಳಿಂದಲೇ ಪ್ರಚಾರದಲ್ಲಿರುವ ಈ ಪ್ರೇಮ್ ಅಡ್ಡ ಚಿತ್ರವು ತಮಿಳಿನ 'ಸುಬ್ರಮಣ್ಯಪುರಂ' ಚಿತ್ರದ ರಿಮೇಕ್. ನಿರ್ದೇಶಕ ಪ್ರೇಮ್ ನಾಯಕತ್ವದ ಈ ಚಿತ್ರಕ್ಕೆ ಕೃತಿ ಖರಬಂದ ನಾಯಕಿ. ಈ ಚಿತ್ರತಂಡಕ್ಕೆ ಬೇಕಾಗಿದ್ದ 'ಅಡ್ಡ' ಶೀರ್ಷಿಕೆ ನಿರ್ಮಾಪಕ ಬಿ.ಕೆ. ಶ್ರೀನಿವಾಸ್ (ಬೆಂಕೋಶ್ರೀ) ವಶದಲ್ಲಿದೆ. ಈಗ ನೋಡಿದರೆ 'ಪ್ರೇಮ್ ಅಡ್ಡ' ಎಂಬ ಹೆಸರಿಗೂ ಕುತ್ತು ಬರುವ ಸಂಭವವಿದೆ. ಮುಂದೇನಾಗುತ್ತೋ..! (ಒನ್ ಇಂಡಿಯಾ ಕನ್ನಡ)