ಶ್ರೀಲಂಕಾ ಬಾಂಬ್ ಸ್ಫೋಟದಿಂದ ನಟಿ ರಾಧಿಕಾ ಗ್ರೇಟ್ ಎಸ್ಕೇಪ್
ಏಪ್ರಿಲ್ 21, ಭಾನುವಾರ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಟೋಟದಲ್ಲಿ ಸುಮಾರು 290ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತೀಯರು ಸೇರಿ ಹಲವು ಜನ ಸಾರ್ವಜನಿಕರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರ ಏನಪ್ಪಾ ಅಂದ್ರೆ, ಈ ಬಾಂಬ್ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಬಹುಭಾಷ ನಟಿ ರಾಧಿಕಾ ಶರತ್ ಕುಮಾರ್ ಕೂಡ ಪಾರಾಗಿದ್ದಾರಂತೆ.

ಶ್ರೀಲಂಕಾ ಬಾಂಬ್ ಸ್ಫೋಟ: 5 ಮಂದಿ ಭಾರತೀಯರು ಸೇರಿ ಮೃತರ ಸಂಖ್ಯೆ 290ಕ್ಕೆ ಏರಿಕೆ
ಶ್ರೀಲಂಕಾದ ಸಿನ್ನಮೋನ್ ಗ್ರ್ಯಾಂಡ್ ಹೋಟೆಲ್ ನಲ್ಲಿದ್ದ ರಾಧಿಕಾ ಶರತ್ ಕುಮಾರ್ ಆಗ ತಾನೆ ಅಲ್ಲಿಂದ ತೆರಳಿದ್ದರಂತೆ. ಅವರು ತೆರೆಳಿದ ಕೆಲವೇ ಸಮಯದಲ್ಲಿ ಬಾಂಬ್ ಸ್ಫೋಟವಾಗಿದೆ. ಈ ಕುರಿತು ಸ್ವತಃ ರಾಧಿಕಾ ಅವರೇ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಭಾನುವಾರ ಈಸ್ಟರ್ ದಿನವಾಗಿದ್ದು, ಒಂದೇ ಸಮಯದಲ್ಲಿ ಹೋಟೆಲ್, ಚರ್ಚೆ ಸೇರಿದಂತೆ ಹಲವು ಕಡೆ ಬಾಂಬ್ ಸ್ಫೋಟವಾಗಿದೆ. ಈ ಘಟನೆಗೆ ರಾಧಿಕಾ ಅವರು ಕೂಡ ವಿಷಾದ ವ್ಯಕ್ತಪಡಿಸಿದ್ದಾರೆ. ಆ ದೇವರು ನಮ್ಮ ಜೊತೆ ಇದ್ದಾನೆ ಎಂದು ಬೇಸರ ಹಂಚಿಕೊಂಡಿದ್ದಾರೆ.
ಸದ್ಯ, ರಾಧಿಕಾ ಶರತ್ ಕುಮಾರ್ ಕನ್ನಡದ ಯುವರತ್ನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ನಾಯಕನಾಗಿರುವ ಈ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











