Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣ್ಣಾವ್ರ ಜೀವನ ಪುಟದ ಕಹಿ ಸತ್ಯ ಬಿಚ್ಚಿಟ್ಟ ರಾಘಣ್ಣ
ಕನ್ನಡಿಗರ ಆರಾಧ್ಯಧೈವ, ಕನ್ನಡ ಕಲಾರತ್ನ, ವರನಟ ಡಾ.ರಾಜ್ ಕುಮಾರ್ ಸ್ಮಾರಕ ಇಂದು (ನವೆಂಬರ್ 29) ಲೋಕಾರ್ಪಣೆಯಾಗಿದೆ. ಕನ್ನಡಾಭಿಮಾನಿಗಳಿಗೆ ಇಂದು ಅಕ್ಷರಶಃ ಕನ್ನಡ ಹಬ್ಬ. ಡಾ.ರಾಜ್ ಕುಮಾರ್ ಹೆಸರಲ್ಲೇ ಇಡೀ ಕನ್ನಡ ಚಿತ್ರರಂಗ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ ಜೀವನ ಪುಟದ ಕಹಿ ಸತ್ಯವೊಂದು ಬೆಳಕಿಗೆ ಬಂದಿದೆ.
ವೀರಪ್ಪನ್ ಅಪಹರಣ ಪ್ರಕರಣದ ನಂತರ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದ ರಾಜ್ ಕುಮಾರ್ ಗೆ ಸಾಯುವ ಮನಸ್ಸಿತ್ತಾ? ರಾಜಣ್ಣ ಯಮಧರ್ಮನನ್ನ ಆಹ್ವಾನಿಸಿದ್ದರಾ? ಮಣ್ಣಲ್ಲಿ ಮಣ್ಣಾಗುವುದಕ್ಕೆ ರಾಜ್ ಹಪಹಪಿಸುತ್ತಿದ್ದರಾ? ಈ ಎಲ್ಲಾ ಪ್ರಶ್ನೆಗಳು ಮೂಡೋಕೆ ಕಾರಣ ಇಂದು ಸ್ಮಾರಕ ಲೋಕಾರ್ಪಣೆ ಸಮಾರಂಭದಲ್ಲಿ ಅಣ್ಣಾವ್ರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಆಡಿದ ಮಾತುಗಳು. [ಅಣ್ಣಾವ್ರ ಸ್ಮಾರಕ ಅನಾವರಣದ ಅಪೂರ್ವ ಕ್ಷಣಗಳು]
''ಅಪ್ಪಾಜಿ ಕಾಡಿನಿಂದ ಬಂದಮೇಲೆ ಎಲ್ಲಾ ದೇವಸ್ಥಾನಗಳಿಗೆ ಹೋಗ್ಬೇಕು ಅಂದುಕೊಂಡಿದ್ದರಂತೆ. ಅದರಂತೆ ಎಷ್ಟೋ ದೇವಸ್ಥಾನಗಳಿಗೆ ಹೋಗಿಬಂದ್ರು. ಆದ್ರೆ ಮಂತ್ರಾಲಯಕ್ಕೆ ಮಾತ್ರ ಹೋಗೋಕೆ ಆಗ್ಲಿಲ್ಲ. ಗುರು ರಾಯರ ಫೋಟೋವೊಂದನ್ನ ರಜನಿಕಾಂತ್ ಕಳುಹಿಸಿಕೊಟ್ಟಿದ್ದರು. ಆಗ ರಾಯರೇ ನನ್ನ ನೋಡೋಕೆ ಬಂದಿದ್ದಾರೆ ಅಂತ ಹೇಳುತ್ತಿದ್ದರು. ಆದ್ರೆ ಅಲ್ಲಿಗೆ ಹೋಗೋಕೆ ಆಗ್ತಾನೇ ಇರ್ಲಿಲ್ಲ. ಅಮ್ಮನನ್ನೂ ತುಂಬಾ ಸಲಿ ಕೇಳ್ತಿದ್ರು-'ನನ್ನ ಕರ್ಕೊಂಡು ಹೋಗು ಮಂತ್ರಾಲಯಕ್ಕೆ'', ಅಂತ ಆದ್ರೆ ಅಲ್ಲಿ ಸೆಕ್ಯೂರಿಟಿ ಪ್ರಾಬ್ಲಂ ಆಗುತ್ತೆ ಅಂತ ತಡ ಮಾಡುತ್ತಿದ್ವಿ''.
''ಕೊನೆಯದಾಗಿ ಹೋಗಬಹುದು ಅಂತ ಆದಾಗ ಅವರು ಬರೋಕೆ ಒಪ್ಪಲಿಲ್ಲ. ''ದೇವರು ನನ್ನ ಮೇಲೆ ಕೋಪಿಸಿಕೊಂಡಿದ್ದಾನೆ. ಅವನಿರುವ ಜಾಗಕ್ಕೆ ನನ್ನನ್ನು ಕರೆಯಿಸಿಕೊಳ್ಳುತ್ತಿದ್ದಾನೆ. ಅಲ್ಲೇ ಹೋಗಿ ನೋಡುತ್ತೀನಿ''-ಅಂತ ಅಪ್ಪಾಜಿ ಹೇಳುತ್ತಿದ್ದರು. ಅದಕ್ಕೆ ಅಮ್ಮ-''ಹಾಗೆಲ್ಲಾ ಮಾತನಾಡಬೇಡಿ'' ಅಂದ್ರೆ ಅಪ್ಪ-''ಇದನ್ನೆಲ್ಲಾ ದೇವರೇ ಮಾತನಾಡಿಸುತ್ತಿದ್ದಾನೆ'' ಅಂತ ಹೇಳುತ್ತಿದ್ದರು.'' [ವೇದಿಕೆಯಲ್ಲಿ ಚಿರಂಜೀವಿ 'ಅನುರಾಗ ಅರಳಿದಾಗ']
''ನಿಮ್ಮ ತಂದೆಗೂ ನೀವು ಅದನ್ನ ಮಾಡಿದ್ದೀರಾ. ನಾವು ಮಾಡಿದರೇ ಏನು ತಪ್ಪು''ಅಂತ ನಾನು ಕೇಳ್ದೆ. ಅದಕ್ಕೆ ಅವರು-''ಇಲ್ಲಾ, ನನಗೆ ತುಂಬಾ ಬೇಜಾರಾಗಿದೆ ಕಂದ'' ಅಂದರು. ಅದಾದ ಎರಡು ತಿಂಗಳು ಅವರೇ ತಮ್ಮೆಲ್ಲಾ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು. ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಯಾರಿಗೂ ನೋವಾಗುವಂತೆ ನಡೆದುಕೊಳ್ಳುತ್ತಿರಲಿಲ್ಲ.'' [ನಟಸಾರ್ವಭೌಮ ರಾಜ್ ಬಗ್ಗೆ ರಜನಿ ಹೀಗಂದಿದ್ಯಾಕೆ?]
''ನಾನು ಹೋಗೋಕೆ ಮುಂಚೆ, ನಿಮ್ಗೆಲ್ಲಾ ಒಳ್ಳೆ ನೆನಪುಗಳನ್ನ ಕೊಟ್ಟು ಹೋಗ್ತೀನಿ. ನಾನು ಆರೋಗ್ಯವಾಗಿರುವುದನ್ನ ನೀವು ನೆನಪಿಸಿಕೊಳ್ಳಬೇಕು. ನಾನು ನರಳುವುದನ್ನು ನೀವು ನೋಡಬಾರದು'' ಅಂತ ಅಪ್ಪಾಜಿ ಖುಷಿಖುಷಿಯಾಗಿ ಹಾಡುಹಾಡುತ್ತಾ ಎರಡು ತಿಂಗಳು ಆರಾಮಾಗಿ ಇದ್ದರು.''
''ಕೊನೆಯ ದಿನ ಕೂಡ ಯೋಗ ಮಾಡಿ, ಸ್ನಾನ ಮಾಡಿ, ಹಾಡು ಹೇಳಿ, ಸಾಯುವುದಕ್ಕೂ ಒಂದು ಗಂಟೆ ಮುಂಚೆ 'ನ್ಯಾಯವೇ ದೇವರು' ಸಿನಿಮಾ ನೋಡುತ್ತಿದ್ದರು. ಅಮ್ಮ ಆಗಷ್ಟೇ ಆಸ್ಪತ್ರೆಯಿಂದ ಬಂದಿದ್ದನ್ನ ನೋಡಿ, ಅವರು ನಡೆದುಕೊಂಡು ಬರುತ್ತಿದ್ದ ಶೈಲಿಯನ್ನು ನೋಡಿ ಆಡಿಕೊಳ್ಳುತ್ತಿದ್ದರು. ಅದಾದ ಮೇಲೆ ಹತ್ತೇ ನಿಮಿಷ. ದೇವರ ಮನೆ ಹತ್ತಿರ ಸದ್ದೇ ಇಲ್ಲದಂತೆ ಕಣ್ಮುಚ್ಚಿ ಬಿಟ್ಟಿದ್ದರು''.
ದೇವರ ಮೇಲೆ ಅಪಾರ ಭಕ್ತಿ ಹೊಂದಿದ್ದ ರಾಜ್ ಗೆ ಬಹುಬೇಗ ದೇವರ ಪಾದ ಸೇರಿಕೊಳ್ಳಬೇಕು ಎನ್ನುವ ಅಭಿಲಾಶೆ ಇತ್ತೇನೋ.? ಅದಕ್ಕೆ ದೇವರು ಅಸ್ತು ಅಂದುಬಿಟ್ಟಿದ್ದಾನೆ. ಎಷ್ಟೇ ಆಗ್ಲಿ ಒಳ್ಳೆಯವರನ್ನ ದೇವರು ತನ್ನ ಬಳಿಗೆ ಬಹುಬೇಗ ಕರೆದುಕೊಳ್ಳುತ್ತಾನೆ ಅನ್ನುವ ಮಾತು ಸತ್ಯ ಅಲ್ಲವೇ. (ಫಿಲ್ಮಿಬೀಟ್ ಕನ್ನಡ)