Don't Miss!
- News 'ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತರಿ'- ನರೇಗಾ ಯೋಜನೆಯಡಿ ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ
- Automobiles ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- Sports ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪಾಕ್ ತಂಡದ ಮಾಜಿ ನಾಯಕಿ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದ್ಯಕ್ಕಿಲ್ಲ ಗ್ಲಾಮರ್ ರಾಣಿ ರಾಗಿಣಿ ದ್ವಿವೇದಿ 'ಕಹಾನಿ'
ಚಿತ್ರದ ಮುಹೂರ್ತ ಮುಂದಕ್ಕೆ ಹೋಗಿರುವ ವಿಷಯವನ್ನು ನಿರ್ಮಾಪಕರಾದ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. "ಈ ಮೊದಲು ಅಂದುಕೊಂಡಂತೆ ಚಿತ್ರದ ಮುಹೂರ್ತವು ನವೆಂಬರ್ ಮೊದಲ ವಾರದಲ್ಲಿ ನಡೆಯಬೇಕಿತ್ತು. ಆದರೆ ನಾವು ಚಿತ್ರೀಕರಣ ಮಾಡಲು ಆಯ್ಕೆಮಾಡಿಕೊಂಡಿರುವ ಶೂಟಿಂಗ್ ತಾಣದಲ್ಲಿ ಈಗ ಚಿತ್ರೀಕರಣ ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ಈ ಚಿತ್ರದ ಮಹೂರ್ತ ಮುಂದಕ್ಕೆ ಹೋಗಿದೆ" ಎಂದಿದ್ದಾರೆ.
ಇತ್ತೀಚಿಗಷ್ಟೇ 'ರಾಗಿಣಿ ಐಪಿಎಸ್' ಚಿತ್ರೀಕರಣ ಮುಗಿಸಿರುವ ರಾಗಿಣಿ, ಅದಕ್ಕೂ ಮೊದಲು ಲೂಸ್ ಮಾದ ಯೋಗೇಶ್ ನಾಯಕತ್ವದ 'ಬಂಗಾರಿ' ಮುಗಿಸಿದ್ದಾರೆ. ಶಿವರಾಜ್ ಕುಮಾರ್ ನಾಯಕತ್ವದ ಶಿವ ಚಿತ್ರದ ನಂತರ ರಾಗಿಣಿಯ ಯಾವುದೇ ಚಿತ್ರವು ಬಿಡುಗಡೆ ಆಗಿಲ್ಲ. ಸದ್ಯದಲ್ಲೇ ಬಂಗಾರಿ ತೆರೆಗೆ ಬರಲಿರುವ ಸಾಧ್ಯತೆ ದಟ್ಟವಾಗಿದೆ. ಅಷ್ಟರಲ್ಲಿಯೇ ಪ್ರರಂಭವಾಗಬೇಕಿದ್ದ ರೀಮೇಕ್ ಚಿತ್ರ 'ಕಹಾನಿ' ಮುಂದಕ್ಕೆ ಹೋಗಿದೆ.
ಇದೀಗ ರಾಗಿಣಿ 'ಫೇಸ್ ಟು ಫೇಸ್' ಮಲಯಾಳಂ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇತ್ತೀಚಿಗೆ 'ರಗಳೆ ವಿತ್ ರಿಷಿಕಾ ' ಕಾರ್ಯಕ್ರಮದಲ್ಲಿ ಕನ್ನಡದ ಗೋಲ್ಡನ್ ಗರ್ಲ್ ರಮ್ಯಾ ಬಗ್ಗೆ ರಾಗಿಣಿ ಏನೋನೋ ಬೈಯ್ದಿದ್ದಾರೆ (ರಮ್ಯಾ-ರಾಗಿಣಿ ವಿವಾದ) ಎನ್ನುವ ಮೂಲಕ ಭಾರಿ ಸುದ್ದಿ ಮಾಡಿದ್ದಾರೆ. ಒಟ್ಟಿನಲ್ಲಿ ಕನ್ನಡದಲ್ಲಿ ನಂ ಒನ್ ಪಟ್ಟಕ್ಕಾಗಿ ಕಿತ್ತಾಡುವಷ್ಟರ ಮಟ್ಟಿಗೆ ಈಗ ರಾಗಿಣಿ ಬೆಳೆದಿದ್ದಾರೆ. ಇನ್ನು 'ರಾಗಿಣಿ' ಕಹಾನಿ ಯಾವಾಗ ಬರಲಿದೆ ಎನ್ನುವುದಷ್ಟೇ ಸದ್ಯಕ್ಕಿರುವ ಕುತೂಹಲ. (ಒನ್ ಇಂಡಿಯಾ ಕನ್ನಡ)