Don't Miss!
- Technology Lava: ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್ ಬಗ್ಗೆ ತಿಳಿಯಿರಿ
- News Lok Sabha Election 2024: ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಕಾರಣ-ಎಚ್ಡಿಕೆ
- Sports IPL 2024: RCB ವಿರುದ್ಧ ಈ ಒಂದು ದಾಖಲೆಯನ್ನು ಯಾರು ಬೇಗ ನಿರ್ಮಿಸುತ್ತಾರೆ?
- Lifestyle ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
- Automobiles ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ಕಾರಣದಿಂದ ವಿದೇಶಕ್ಕೆ ಹೋಗಲೇಬೇಕಾದ ಪರಿಸ್ಥಿತಿಯಲ್ಲಿ ರಕ್ಷಿತ್ ಶೆಟ್ಟಿ
ಕರೊನಾ ವೈರಸ್ ನಿಂದಾಗಿ ವಿದೇಶದಲ್ಲಿ ಚಿತ್ರೀಕರಣ ಆಗಬೇಕಾಗಿದ್ದ ಚಿತ್ರಗಳೆಲ್ಲವೂ ದೇಶದಲ್ಲಿಯೇ ಚಿತ್ರೀಕರಣ ಮುಗಿಸಿದವು.
Recommended Video
ದರ್ಶನ್ ಅಭಿನಯದ ರಾಬರ್ಟ್ ಸಹ ವಿದೇಶ ಚಿತ್ರೀಕರಣವನ್ನು ರದ್ದು ಮಾಡಿ ಭಾರತದಲ್ಲಿಯೇ ಚಿತ್ರೀಕರಣ ಮಾಡಿತು. ವಿದೇಶದಲ್ಲಿ ನಡೆಯಬೇಕಿದ್ದ ಯುವರಾಜ ಸಿನಿಮಾದ ಚಿತ್ರೀಕರಣವೂ ಸಹ ಕೊರೊನಾ ಕಾರಣದಿಂದಾಗಿ ರದ್ದಾಯಿತು.
ಕೊರೊನಾ ಕಾರಣದಿಂದಾಗಿ ವಿದೇಶದಲ್ಲಿ ನಡೆಯುವ ಚಿತ್ರೀಕರಣವನ್ನು ರದ್ದು ಮಾಡಿದರೆ, ಚಾರ್ಲಿ 777 ಚಿತ್ರದ ರಕ್ಷಿತ್ ಶೆಟ್ಟಿ ಮತ್ತು ತಂದ ಕೊರೊನಾ ಬಂದ ಕಾರಣದಿಂದಲೇ ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಚಿತ್ರಿಸಲು ಉದ್ದೇಶಿಸಲಾಗಿತ್ತು
ಹೌದು, ಚಾರ್ಲಿ ಸಿನಿಮಾವನ್ನು ಭಾರತದ ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಿಸಲು ಯೋಜನೆ ರೂಪಿಸಲಾಗಿತ್ತು. ಇನ್ನೇನು ಚಿತ್ರತಂಡ ಹಿಮಾಚಲ ಪ್ರದೇಶಕ್ಕೆ ಹಾರಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಘೋಷಣೆ ಆಯಿತು.
ವಿದೇಶದಲ್ಲಿಯೇ ಚಿತ್ರೀಕರಿಸುವ ಅನಿವಾರ್ಯತೆ
ಆದರೆ ಇನ್ನೇನು ಲಾಕ್ಡೌನ್ ಕೊನೆಗೊಳ್ಳುವ ಸಮಯ ಸನಿಹವಾಗಿದೆ ಆದರೆ ಈಗ ಚಾರ್ಲಿ 777 ಚಿತ್ರತಂಡ ವಿದೇಶಕ್ಕೆ ಹೋಗಿ ಚಿತ್ರೀಕರಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಹಿಮ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬೇಕಿದೆ
ಚಾರ್ಲಿ 777 ಸಿನಿಮಾಕ್ಕೆ ಹಿಮ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬೇಕಾಗಿದೆ. ಹಾಗಾಗಿ ತಂಡವು ಹಿಮಾಚಲ ಪ್ರದೇಶ ಆರಿಸಿತ್ತು. ಆದರೆ ಕಾಲದಲ್ಲಿ ಅಲ್ಲಿ ಮಂಜು ಬೀಳುವುದು ಕಡಿಮೆ ಆಗಿಬಿಡುತ್ತದೆ. ಹಾಗಾಗಿ ವಿದೇಶಕ್ಕೆ ತೆರಳಿಯೇ ಚಿತ್ರೀಕರಣ ಮಾಡಬೇಕಿದೆ.
ನವೆಂಬರ್ ವರೆಗೂ ಕಾಯಬೇಕಾಗುತ್ತದೆ
ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಣ ಮಾಡಬೇಕೆಂದರೆ ನವೆಂಬರ್ ವರೆಗೂ ಕಾಯಬೇಕಾಗುತ್ತದೆ. ಹಾಗಾಗಿ ಹಿಮಚ್ಛಾಧಿತ ಪ್ರದೇಶವುಳ್ಳ ಯಾವುದಾದರೂ ದೇಶಕ್ಕೆ ತೆರಳಿ ಅಲ್ಲಿಯೇ ಚಿತ್ರೀಕರಣ ಮಾಡುವ ಉದ್ದೇಶವನ್ನು ಚಿತ್ರತಂಡ ವ್ಯಕ್ತಪಡಿಸಿದೆ.