Just In
- 21 min ago
ಹಿಂದೂ ಭಾವನೆಗಳಿಗೆ ಧಕ್ಕೆ; ಸೈಫ್ ನಟನೆಯ 'ತಾಂಡವ್' ವೆಬ್ ಸರಣಿ ವಿರುದ್ಧ ಬಿಜೆಪಿ ನಾಯಕರ ದೂರು
- 1 hr ago
ಕಪಾಳಮೋಕ್ಷ ಆರೋಪ; ನಟ ಮಹೇಶ್ ಮಂಜ್ರೇಕರ್ ವಿರುದ್ಧ ದೂರು ದಾಖಲು
- 2 hrs ago
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- 14 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
Don't Miss!
- Finance
ವಿಶ್ವವೇ ಕಂಗಾಲು; ಚೀನಾ ಆರ್ಥಿಕತೆ 2020ರಲ್ಲಿ 2.3% ಬೆಳವಣಿಗೆ ದಾಖಲು
- News
2020ರಲ್ಲಿ ಚೀನಾ ಜಿಡಿಪಿ ಬೆಳವಣಿಗೆ 4 ದಶಕಗಳಲ್ಲೇ ಅತ್ಯಂತ ಕಡಿಮೆ
- Sports
ಸ್ಪಿನ್ ಮಾಂತ್ರಿಕ ಕನ್ನಡಿಗ ಬಿಎಸ್ ಚಂದ್ರಶೇಖರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು
- Lifestyle
ಅಂಡಾಣು ಶೈತ್ಯೀಕರಣ: ಮಗುವನ್ನು ಪಡೆಯಲು ಈ ವಿಧಾನ ಸುರಕ್ಷಿತವೇ?
- Automobiles
ಗ್ರಾಜಿಯಾ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಹೋಂಡಾ ಮೋಟಾರ್ಸೈಕಲ್
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಮ್ ಗೋಪಾಲ್ ವರ್ಮಾ ನನಗೆ ಮೋಸ ಮಾಡಿದ್ರು: ಷನ್ಮುಖಪ್ರಿಯ

ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಯಾವಾಗಲೂ ಬೇರೊಬ್ಬರ ಮೇಲೆ ಆರೋಪ, ದೂರು, ವಾಗ್ದಾಳಿ ಮಾಡುವ ವರ್ಮಾ ಈಗ ಯುವತಿಯೊಬ್ಬಳಿಂದ ಟಾರ್ಗೆಟ್ ಆಗಿದ್ದಾರೆ.
ಹೌದು, ದಕ್ಷಿಣ ಭಾರತವನ್ನ ನಡುಗಿಸಿದ್ದ ದಂತಚೋರ ವೀರಪ್ಪನ್ ಹತ್ಯೆ ವೇಳೆ ಪೊಲೀಸರಿಗೆ ನೆರವು ನೀಡಿದ್ದ ಷನ್ಮುಖಪ್ರಿಯ ಈಗ ಆರ್.ಜಿ.ವಿ ವಿರುದ್ಧ ಆರೋಪ ಮಾಡ್ತಿದ್ದಾರೆ.
ನಟಿ-ನಿರ್ಮಾಪಕನ ನಡುವಿನ 'ಕಾಸ್ಟಿಂಗ್ ಕೌಚ್' ಸಂಭಾಷಣೆ ಲೀಕ್ ಮಾಡಿದ ವರ್ಮಾ
ನಿರ್ದೇಶಕ ಆರ್.ಜಿ.ವಿಯಿಂದ ನನಗೆ ವಂಚನೆ ಆಗಿದೆ, ದಯವಿಟ್ಟು ನ್ಯಾಯ ಕೊಡಿಸಿ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಈ ಕಡೆ ರಾಮ್ ಗೋಪಾಲ್ ವರ್ಮಾ ಷನ್ಮುಖಪ್ರಿಯ ಕಡೆ ತಿರುಗಿ ಕೂಡ ನೋಡುತ್ತಿಲ್ಲ. ಅಷ್ಟಕ್ಕೂ, ವರ್ಮಾ ಮಾಡಿದ ವಂಚನೆ ಏನು.? ಷನ್ಮುಖ ಪ್ರಿಯ ಮಾಡುತ್ತಿರುವ ಆರೋಪವೇನು.? ಮುಂದೆ ಓದಿ....

ಯಾರು ಈ ಷನ್ಮುಖಪ್ರಿಯ.?
ಕಾಡುಗಳ್ಳ ವೀರಪ್ಪನ್ ಹತ್ಯೆಯ ವೇಳೆ ಟಾಸ್ಕ್ ಫೋರ್ಸ್ ಗೆ ಮಾಹಿತಿ ನೀಡಿದ್ದೇ ಈ ಷನ್ಮುಖಪ್ರಿಯ. ವೀರಪ್ಪನ್ ಸೆರೆಹಿಡಿಯಲು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರದಿಂದ ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಲಾಗಿತ್ತು. ವೀರಪ್ಪನ್ ಕಣ್ಣಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರ್ತಿದ್ದಾನೆ ಎಂದು ಮಾಹಿತಿ ನೀಡಿದ್ದು ಇದೇ ಷನ್ಮುಖಪ್ರಿಯ. ಈಕೆಯ ಮಾಹಿತಿಯ ಹಿನ್ನೆಲೆ ವೀರಪ್ಪನ್ ಎನ್ ಕೌಂಟರ್ ಮಾಡಲಾಗಿತ್ತು. ಈಕೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಸ್ನೇಹಿತೆ.
ರಾಮ್ ಗೋಪಾಲ್ ವರ್ಮಾಗೆ ಡಿಸ್ಟರ್ಬ್ ಮಾಡಿದ ನಟಿ: ಈಕೆ ಯಾರು.?

ಸರ್ಕಾರ ಬಹುಮಾನ ಕೊಡಲಿಲ್ಲ
''ವೀರಪ್ಪನ್ ಎನ್ ಕೌಂಟರ್ ನಡೆದಾಗ ನನಗೆ 21 ವರ್ಷ ವಯಸ್ಸು. ಆ ಸಮಯದಲ್ಲಿ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರ ನನಗೆ ಬಹುಮಾನ ಘೋಷಿಸಿತ್ತು. ಈವರೆಗೂ ಅವರು ನೀಡಬೇಕಿದ್ದ ಪಾರಿತೋಷಕ ನನಗೆ ದೊರೆತಿಲ್ಲ. ಇದರ ಜೊತೆ ರಾಮ್ ಗೋಪಾಲ್ ವರ್ಮಾ ಕೂಡ ನನಗೆ ವಂಚಿಸಿದ್ದಾನೆ'' ಎಂದು ಷನ್ಮುಖಪ್ರಿಯ ಆರೋಪಿಸಿದ್ದಾರೆ.
'ಬಾಹುಬಲಿ' ಚಿತ್ರವನ್ನ ಕೈಬಿಟ್ಟ ಶ್ರೀದೇವಿಯ ಅಸಲಿ ಕಾರಣ ಬಿಚ್ಚಿಟ್ಟ ವರ್ಮಾ

'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ವೇಳೆ
''ವೀರಪ್ಪನ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಸಿನಿಮಾ ಮಾಡುವ ವೇಳೆ ನನ್ನನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡರು. ಇದಕ್ಕಾಗಿ ನನಗೆ ದೊಡ್ಡ ಮೊತ್ತದ ಸಂಭಾವನೆ ನೀಡುವುದಾಗಿ ಹೇಳಿದರು. ಒಂದು ಲಕ್ಷ ಮುಂಗಡ ಹಣ ಕೂಡ ನೀಡಿದ್ದರು. ಆದ್ರೆ, ಬಾಕಿ ಹಣವನ್ನ ನೀಡಲಿಲ್ಲ. ಬ್ಯಾಲೆನ್ಸ್ ಹಣ ಕೇಳಿದ್ರು, ನಾಳೆ, ನಾಡಿದ್ದು ಅಂತ ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ'' ಎಂದು ಯುವತಿ ಹೇಳುತ್ತಿದ್ದಾರೆ.
ನಟಿಗೆ ಬೆಂಬಲ ನೀಡಲು ಹೋಗಿ ವಿವಾದಾತ್ಮಕ ಟ್ವೀಟ್ ಮಾಡಿದ ವರ್ಮಾ.!

ಕೋರ್ಟ್ ಮೊರೆ ಹೋದ ಷನ್ಮುಖಪ್ರಿಯ
''ರಾಮ್ ಗೋಪಾಲ್ ವರ್ಮಾ ಅವರಿಂದ ನನಗೆ ಬರಬೇಕಾದ ಬಾಕಿ ಮೊತ್ತ ಕೊಡಿಸಿ ಎಂದು ಕೋರ್ಟ್ ಗೆ ಹೋದೆ. ಅವರು ನೀಡಿದ್ದ ಅಗ್ರಿಮೆಂಟ್ ಆಧಾರವಾಗಿಟ್ಟುಕೊಂಡು ಪ್ರಕರಣ ದಾಖಲಿಸಿದೆ. ಸದ್ಯ, ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ'' ಎಂದು ಷನ್ಮುಖಪ್ರಿಯ ತಿಳಿಸಿದ್ದಾರೆ. ಅಂದು ಪ್ರಾಣದ ಭಯ ತೊರೆದು ಮಾಹಿತಿ ನೀಡಿದೆ. ಇಂದು ನಾನು ಕಷ್ಟದಲ್ಲಿದ್ದೇನೆ. ನನ್ನನ್ನು ಯಾರೂ ಕೂಡ ಗಮನಿಸುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.