twitter
    For Quick Alerts
    ALLOW NOTIFICATIONS  
    For Daily Alerts

    ರಮೇಶ್ ಅರವಿಂದ್ ಈಗ ಕೊರೊನಾ ವೈರಸ್ ಜಾಗೃತಿ ರಾಯಭಾರಿ

    |

    ಕೊರೊನಾ ವೈರಸ್ ಕುರಿತಾದ ನಿಖರ ಮಾಹಿತಿಗಳನ್ನು ಒದಗಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಟ, ನಿರ್ದೇಶಕ ರಮೇಶ್ ಅರವಿಂದ್ ಅವರನ್ನು ತನ್ನ ರಾಯಭಾರಿಯನ್ನಾಗಿ ನೇಮಕ ಮಾಡಿದೆ.

    Recommended Video

    ತಾಯಿಯನ್ನು ಕಳೆದುಕೊಂಡ ಜೋಗಿ ಪ್ರೇಮ್! | Filmibeat Kannada

    ಕೊರೊನಾ ವೈರಸ್ ಸಂಕಷ್ಟವನ್ನು ನಿಯಂತ್ರಿಸಲು ನೆರವಾಗುವಂತೆ ಅದರ ಕುರಿತು ಜನರಿಗೆ ಅಧಿಕೃತ ಮಾಹಿತಿ ಒದಗಿಸಲು ರಮೇಶ್ ಅರವಿಂದ್ ನೆರವಾಗಲಿದ್ದಾರೆ. ಬಿಬಿಎಂಪಿಗೆ ನೂತನವಾಗಿ ನೇಮಕಗೊಂಡಿರುವ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಸೋಮವಾರ ಬೆಳಿಗ್ಗೆ ರಮೇಶ್ ಅರವಿಂದ್ ಅವರಿಗೆ ಕರೆ ಮಾಡಿ ಈ ಹೊಸ ಜವಾಬ್ದಾರಿಯ ವಿವರ ನೀಡಿದ್ದಾರೆ.

    ಗಡಿದಾಟಿ ಹೋಗಲಿದೆ ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್'ಗಡಿದಾಟಿ ಹೋಗಲಿದೆ ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್'

    ಕೊರೊನಾ ವೈರಸ್ ಸಂಕಷ್ಟವನ್ನು ನಿಭಾಯಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಪರಿಣಾಮಕಾರಿ ಫಲಿತಾಂಶಕ್ಕಾಗಿ ಈ ಸಮಿತಿಗೆ ವಿವಿಧ ವಲಯಗಳ ಜನರನ್ನು ಸೇರಿಸಿಕೊಳ್ಳಲಾಗಿದೆ. ತಮ್ಮ ವೈಯಕ್ತಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಮಾಹಿತಿಗಳನ್ನು ಜನರಿಗೆ ತಲುಪಿಸುತ್ತಿರುವುದಾಗಿ ರಮೇಶ್ ಅರವಿಂದ್ ತಿಳಿಸಿದ್ದರು. ಈಗ ಸವಾಲು ಇನ್ನಷ್ಟು ದೊಡ್ಡದಾಗಿರುವುದರಿಂದ ರಾಜ್ಯ ಸರ್ಕಾರ ಅವರಿಗೆ ಈ ಜವಾಬ್ದಾರಿ ನೀಡಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

    Ramesh Aravind Appointed As BBMP Ambassador For COVID 19 Awareness

    ಜನರಲ್ಲಿ ವಿವಿಧ ಜಾಗೃತಿ ಮೂಡಿಸಲು ಹಾಗೂ ಅವರಿಗೆ ಮಾಹಿತಿ ಒದಗಿಸುವ ಕಾರ್ಯವನ್ನು ಬಿಬಿಎಂಪಿಯ ರಾಯಭಾರಿಯಾಗಿ ರಮೇಶ್ ಅರವಿಂದ್ ನಿಭಾಯಿಸಲಿದ್ದಾರೆ. ಕೋವಿಡ್ 19 ನಿಭಾಯಿಸುವ ಸಲುವಾಗಿ ರಚಿಸಲಾಗಿರುವ ಬಿಬಿಎಂಪಿ ಕೋವಿಡ್ 19 ಟಾಸ್ಕ್‌ ಫೋರ್ಸ್‌ನಲ್ಲಿಯೂ ರಮೇಶ್ ಅರವಿಂದ್ ಭಾಗಿಯಾಗಿದ್ದಾರೆ.

    English summary
    BBMP has appointed Actor Ramesh Aravind as brand ambassador for COVID 19 awareness programme.
    Tuesday, July 21, 2020, 15:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X