Don't Miss!
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್ ಚಂದ್ರು ಚಿತ್ರದಲ್ಲಿ ಆರಡಿ ಅಂದಗಾರ ರಾಣಾ ದಗ್ಗುಬಾಟಿ
ನಿರ್ದೇಶಕ ಆರ್.ಚಂದ್ರು 'ಚಾರ್ಮಿನಾರ್' ಕೃಪೆಯಿಂದ ಟಾಲಿವುಡ್ ಗೆ ಕಾಲಿಟ್ಟಿರುವ ವಿಷಯ ಒಂದು ವರ್ಷದಷ್ಟು ಹಳೆಯದ್ದು. ಇನ್ನೂ ಅದೇ 'ಚಾರ್ಮಿನಾರ್' ನ ಇಟ್ಟುಕೊಂಡು ಬಾಲಿವುಡ್ ನಲ್ಲೂ ಅದೃಷ್ಟ ಪರೀಕ್ಷೆಗೆ ಚಂದ್ರು ನಿಂತಿರುವ ಬ್ರೇಕಿಂಗ್ ನ್ಯೂಸ್ ನ ಮೊನ್ನೆಯಷ್ಟೇ ನೀವು ಕೇಳಿರಬೇಕು.
ಈ ಎಲ್ಲಾ ಸುದ್ದಿಗಳಿಗಿಂತ ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿಯನ್ನ ನಿಮಗಾಗಿ ನಾವು ತಂದಿದ್ದೀವಿ ನೋಡಿ. ನಿರ್ದೇಶಕ ಆರ್.ಚಂದ್ರು ಸದ್ದಿಲ್ಲದೇ ಟಾಲಿವುಡ್ ನ ಸ್ಮಾರ್ಟ್ ಹೀರೋ ರಾಣಾ ದಗ್ಗುಬಾಟಿಗೆ ಡೈರೆಕ್ಷನ್ ಮಾಡಿದ್ದಾರೆ!
ಅಂದ ಮಾತ್ರಕ್ಕೆ ಆರ್.ಚಂದ್ರು ತೆಲುಗಿನಲ್ಲಿ ಮತ್ತೊಂದು ಸಿನಿಮಾ ಮಾಡುತ್ತಿಲ್ಲ. ಈಗಾಗಲೇ ಆರ್.ಚಂದ್ರು ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಿದ್ದಾರೆ ಅಷ್ಟೆ.
ಕೆಲ ದಿನಗಳ ಹಿಂದೆಯಷ್ಟೇ, ಇದೇ ಆರ್.ಚಂದ್ರು ನಿರ್ದೇಶನದ 'ಚಾರ್ಮಿನಾರ್' ತೆಲುಗು ಅವತರಣಿಕೆ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರದಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟಿಸುತ್ತಾರೆ ಅಂತ ನಿಮ್ಮ ನೆಚ್ಚಿನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ. [ಪ್ರಿನ್ಸ್ ಮಹೇಶ್ ಗೆ 'ಚಾರ್ಮಿನಾರ್' ಚಂದ್ರು ಡೈರೆಕ್ಟರ್]
ಆರ್.ಚಂದ್ರು ಹೇಳಿದಂತೆ ಅಂದು ಪ್ರಿನ್ಸ್ ಮಹೇಶ್ ಬಾಬು ಚಿತ್ರದಲ್ಲಿ ಅತಿಥಿ ಪಾತ್ರಕ್ಕೆ ನಟಿಸುವುದಕ್ಕೆ ಒಪ್ಪಿಕೊಂಡಿದ್ರು. ಆದ್ರೀಗ ಅನಿವಾರ್ಯ ಕಾರಣಗಳಿಂದ ಮಹೇಶ್ ಬಾಬು, 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರದಿಂದ ಹಿಂದೆ ಸರಿದಿದ್ದಾರೆ.
ಮಹೇಶ್ ಬಾಬು ಕಾಲ್ ಶೀಟ್ ಗಾಗಿ ಇಷ್ಟು ದಿನ ಕಾದರೂ, ಅದು ಪ್ರಯೋಜನವಾಗದ ಕಾರಣ ಆರ್.ಚಂದ್ರು ಹೊಸ ಉಪಾಯ ಮಾಡಿದ್ದಾರೆ. ಮಹೇಶ್ ಬಾಬು ಬದಲಿಗೆ ರಾಣಾ ದಗ್ಗುಬಾಟಿಯನ್ನ ಚಿತ್ರಕ್ಕಾಗಿ ಕರೆತಂದಿದ್ದಾರೆ.
ಬರೀ ಕರೆತರುವುದು ಮಾತ್ರವಲ್ಲ, ಅದಾಗಲೇ ರಾಣಾ ದಗ್ಗುಬಾಟಿಗೆ ಆಕ್ಷನ್ ಕಟ್ ಹೇಳಿ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರಕ್ಕೆ ಕುಂಬಳಕಾಯಿ ಕೂಡ ಹೊಡೆದಿದ್ದಾರೆ.
ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಲೀಡಿಂಗ್ ನಲ್ಲಿರುವ ಹ್ಯಾಂಡ್ಸಮ್ ಹಂಕ್ ರಾಣಾ ದಗ್ಗುಬಾಟಿಗೆ ನಿರ್ದೇಶನ ಮಾಡುವುದು ಸಾಮಾನ್ಯದ ಸಂಗತಿ ಏನಲ್ಲ.
ಮಹೇಶ್ ಬಾಬು ಅಲ್ಲದೇ ಇದ್ದರೂ, ಅದೇ ಸ್ಟಾರ್ ವಾಲ್ಯೂ ಹೊತ್ತಿರುವ ನಟ ರಾಣಾ ದಗ್ಗುಬಾಟಿಗೆ ಆರ್.ಚಂದ್ರು ಆಕ್ಷನ್ ಕಟ್ ಹೇಳಿರುವುದು ಅವರ ಹಿರಿಮೆ ಮತ್ತೊಂದು ಗರಿ. (ಫಿಲ್ಮಿಬೀಟ್ ಕನ್ನಡ)