twitter
    For Quick Alerts
    ALLOW NOTIFICATIONS  
    For Daily Alerts

    'ಕಿಚ್ಚ ಸುದೀಪ್ ಗೆ ನಾಚಿಕೆ ಜಾಸ್ತಿ': ಹಿರಿಯ ಪತ್ರಕರ್ತ ರವಿ ಬೆಳಗೆರೆ

    |

    Recommended Video

    Ravi belagere and Sudeep released a book | FILMIBEAT KANNADA

    ಅಭಿನಯ ಚಕ್ರವರ್ತಿ ಕಿಚ್ಟ ಸುದೀಪ್ ಮತ್ತು ರವಿ ಬೆಳಗೆರೆ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕಾರ್ಯಕ್ರಮದ ನಂತರ ಸುದೀಪ್ ಮತ್ತು ರವಿ ಬೆಳಗೆರೆ ಇಬ್ಬರು ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಕಿಚ್ಚ ಸುದೀಪ್ ಕಾಲೆಳೆದು ತಮಾಷೆ ಮಾಡಿದ್ದಾರೆ.

    ಇತ್ತೀಚಿಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಬರೆದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ರವಿಬೆಳಗೆರೆ, ಕಿಚ್ಚ ಸುದೀಪ್ ಮತ್ತು ನಟಿ ತಾರಾ ಗೆಸ್ಟ್ ಆಗಿ ಆಮಿಸಿದ್ದರು. ಈ ಸಮಯದಲ್ಲಿ ರವಿ ಬೆಳಗೆರೆ ಸುದೀಪ್ ಬಗ್ಗೆ ಮಾತನಾಡುತ್ತ "ಕಿಚ್ಚ ಸುದೀಪ್ ಗೆ ನಾಚಿಕೆ ಜಾಸ್ತಿ. ಅದರಲ್ಲೂ ಗಂಡಸರ ಮದ್ಯೆ ಇದರೆ ಜಾಸ್ತಿನೇ ನಾಚಿಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.

    ನಟಿ ಶ್ರುತಿ ಹರಿಹರನ್ ಹೊಗಳಿದ ಕಿಚ್ಚ ಸುದೀಪ್ನಟಿ ಶ್ರುತಿ ಹರಿಹರನ್ ಹೊಗಳಿದ ಕಿಚ್ಚ ಸುದೀಪ್

    ರವಿ ಬೆಳಗೆರೆ ಮಾತಿಗೆ ಪ್ರತಿಯಾಗಿ ಸುದೀಪ್ "ಹುಡುಗಿಯರ ಹತ್ತಿರ ನಾಚಿಕೆ ಮಾಡಿಕೊಂಡರೆ ಆಗೋ ಕೆಲಸ ಆಗುವುದಿಲ್ಲ. ಇದನ್ನ ರವಿ ಬೆಳಗೆರೆ ಅವರೆ ಚಿಕ್ಕ ವಯಸ್ಸಿನಲ್ಲಿ ಹೇಳಿಕೊಟ್ಟಿದ್ದಾರೆ" ಎಂದು ಹೇಳಿ ತಮಾಷೆ ಮಾಡಿದ್ರು. ನಂತರ ಪುಸ್ತಕದ ಬಗ್ಗೆ ಮಾತನಾಡಿದ ಸುದೀಪ್ ಬರವಣಿಗೆ ಒಂದು ಕಲೆಯಾದರೆ ಓದುವುದು ಕೂಡ ಕಲೆ ಎಂದು ಹೇಳಿದರು.

    Ravi Belagere And Sudeep Released Book Written By Ganesh Kasaragod

    ಸುದೀಪ್ ಸದ್ಯ ಕೋಟಿಗೊಬ್ಬ-3 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಮುಂದಿನ ತಿಂಗಳಿಂದ ಅನೂಪ್ ಭಂಡಾರಿ ನಿರ್ದೇಶನದ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ಎದುರು ವಿಲನ್ ಆಗಿ ಅಬ್ಬರಿಸಿರುವ ದಬಾಂಗ್-3 ಸಿನಿಮಾ ಮುಂದಿನ ತಿಂಗಳು 20ಕ್ಕೆ ತೆರೆಗೆ ಬರುತ್ತಿದೆ.

    English summary
    Senior journalist Ravi belagere and Sudeep released book written by Ganesh Kasaragod.
    Thursday, November 28, 2019, 11:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X