Don't Miss!
- News Rain Alert: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಈ ಜಿಲ್ಲೆಗಳಲ್ಲಿ ಭಾರಿ ಬಿಸಿಲು
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಜಿಎಫ್ 2 ಮುಹೂರ್ತ : ಪೂಜೆ ಮಾಡಿದ ಪುರೋಹಿತರೂ ಬಿಟ್ಟಿದ್ದರು 'ಗಡ್ಡ'
'ಕೆಜಿಎಫ್' ಸಿನಿಮಾ ಸಾಕಷ್ಟು ವಿಶೇಷಗಳನ್ನು ಹೊಂದಿದೆ. ಅದರಲ್ಲಿ 'ಗಡ್ಡ' ಕೂಡ ಒಂದು. ಸಿನಿಮಾದ ಬಹುತೇಕ ಪಾತ್ರಗಳು ಗಮನ ಸೆಳೆದಿದ್ದು 'ಗಡ್ಡ'ದ ಮೂಲಕವೇ.
ಯಾವ ದೇವಸ್ಥಾನದಲ್ಲಿ ನಡೆಯಿತು 'ಕೆಜಿಎಫ್ ಚಾಪ್ಟರ್ 2' ಮುಹೂರ್ತ
'ಕೆಜಿಎಫ್' ಸಿನಿಮಾದಲ್ಲಿ ನಟ ಯಶ್ ಜೊತೆಗೆ ನಟಿಸಿದ್ದ ಬಹುತೇಕ ಎಲ್ಲ ವಿಲನ್ ಗಳು ಗಡ್ಡ ಬಿಟ್ಟಿದ್ದರು. ಯಶ್ ಎಲ್ಲಿಯೇ ಹೋದರು ಗಡ್ಡದ ಬಗ್ಗೆ ಚರ್ಚೆ ಆಗುತ್ತಿತ್ತು. ಆದರೆ, ಇದೀಗ ಆ ಗಡ್ಡದ ಎಫೆಕ್ಟ್ ಮತ್ತೊಂದು ಹಂತಕ್ಕೆ ಹೋಗಿದೆ.
'ಕೆಜಿಎಫ್'ಗೆ ಸಂಬಂಧಿಸಿದಂತೆ ಇಂದು ಎರಡು ಘಟನೆ ನಡೆಯಿತು
ಇಂದು 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಮುಹೂರ್ತ ಕಾರ್ಯಕ್ರಮ ವಿಜಯನಗರದ ಕೋದಂಡರಾಮ ದೇವಾಲಯದಲ್ಲಿ ನೆರವೇರಿದೆ. ಮುಹೂರ್ತದ ಫೋಟೋಗಳನ್ನು ಗಮನಿಸಿದರೆ ಅಲ್ಲಿನ ದೇವಸ್ಥಾನದ ಪುರೋಹಿತರೂ ಸಹ ಗಡ್ಡ ಬಿಟ್ಟಿರುವುದು ಕಾಣುತ್ತದೆ.
ಇದನ್ನು ಗಮನಿಸಿರುವ ಪ್ರೇಕ್ಷಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಮಾಷೆ ಮಾಡಿದ್ದಾರೆ. ಪ್ರತಾಪ್ ಹೆಗ್ಡೆ ಎಂಬುವವರು 'ಈ ಸಿನಿಮಾದವ್ರದ್ದದು ಏನ್ ಕಥೆ... ಪೂಜಾರಿನಾ ಕೂಡ ಗಡ್ಡ ಇರೋರ್ನೆ ಹುಡ್ಕವ್ರೆ..' ಎಂಬ ಫನ್ನಿ ಬರಹವನ್ನು ಹಾಕಿದ್ದಾರೆ. ಪ್ರತಾಪ್ ಹೆಗ್ಡೆ ಅವರ ಸ್ಪೇಟಸ್ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಅಂದಹಾಗೆ, 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಇಂದಿನಿಂದ ಶುಭಾರಂಭವಾಗಿದೆ. ನಟ ಯಶ್, ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ಮಾಪಕ ವಿಜಯ ಕಿರಗಂದರು, ನಿರ್ದೇಶಕ ಪ್ರಶಾಂತ್ ನೀಲ್, ಸಿನಿಮಾಟೋಗ್ರಾಫರ್ ಭುವನ್ ಗೌಡ ಇಂದಿನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.