Don't Miss!
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಅಭಿಮಾನದ ಹೂಮಳೆಯಲ್ಲಿ ಮುಳುಗಿದ 'ಸಾಹಸಸಿಂಹ'!
ಕಳೆದ ಶುಕ್ರವಾರ ತೆರೆಕಂಡ 'ಸಾಹಸಸಿಂಹ' ಚಿತ್ರ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳಿಂದ ತುಂಬಿ ಹೋಗಿ ಯಶಸ್ವಿ ಪ್ರದರ್ಶನವಾಗುತ್ತಿರೋ ಸುದ್ದಿ ಮತ್ತು ಅಬಿಮಾನಿಗಳ ಕ್ರೇಜ್ನ ವಿಷಯವನ್ನು ನಿಮಗೆ ಹೇಳಿದ್ವಿ. ರಾಜಾಜಿನಗರದ ವಿಷ್ಣು ಅಭಿಮಾನಿಗಳು ಸಾಹಸಸಿಂಹ ಚಿತ್ರವನ್ನು 33 ವರ್ಷಗಳ ನಂತರ ಮತ್ತೆ ರೀರಿಲೀಸ್ನ ಹಬ್ಬವನ್ನು ಗ್ರ್ಯಾಂಡಾಗಿ ಆಚರಿಸಿದ್ದಾರೆ.
30 ವರ್ಷಗಳ ನಂತರ ಖೈದಿ ಸಿನಿಮಾ ರಿರಿಲೀಸ್ ಆದಾಗ ವಿಷ್ಣು ಅಭಿಮಾನಿಗಳು ಅತ್ಯಂತ ದೊಡ್ಡ ಹೂವಿನ ಹಾರವನ್ನು ತಮ್ಮ ನೆಚ್ಚಿನ ನಟನಿಗೆ ಹಾಕಿ ಲಿಮ್ಕಾ ದಾಖಲೆ ಬರೆದು ಅಭಿಮಾನ ಮೆರೆದಿದ್ದರು. ಅದೇ ಚಿತ್ರವನ್ನು ನೆನಪಿಸುವಂತೆ ಈಗ ಮತ್ತೆ ಹೂವಿನ ದೊಡ್ಡ ದೊಡ್ಡ ಹಾರವನ್ನು ವಿಷ್ಣುವರ್ಧನ್ ಅವರ 'ಸಾಹಸಸಿಂಹ' ಚಿತ್ರದ ಕಟೌಟ್ಗೆ ಹಾಕುವ ಮೂಲಕ ಮತ್ತೊಮ್ಮೆ ಹಳೆಯ ದಾಖಲೆಯನ್ನು ನೆನಪಿಸಿದ್ದಾರೆ. [ಕೋಡಿಶ್ರೀಗಳಿಗೆ ಅರಿವಿತ್ತೇ ವಿಷ್ಣುವರ್ಧನ್ ಸಾವಿನ ಮುನ್ಸೂಚನೆ?]
ಚಂದನವನ ಕಂಡ ಚೆಂದದ ನಾಯಕ ವಿಷ್ಣುವರ್ಧನ್ ಅವರ 'ಸಾಹಸಸಿಂಹ'ನಿಗೆ ಅಭಿಮಾನಿಗಳು ತೋರಿಸುತ್ತಿರುವ ಅಭಿಮಾನ ಇಷ್ಟಿದೆ. ಆದರೆ ಕಿಂಚಿತ್ತೂ ಅಭಿಮಾನ ಇಲ್ಲದಂತೆ ವರ್ತಿಸುತ್ತಿರುವ ಸರ್ಕಾರ ಮತ್ತು ಜನಪ್ರತಿನಿಧಿಗಳು ಚಿತ್ರರಂಗ ಕಂಡ ಶ್ರೇಷ್ಠ ನಾಯಕನಿಗೆ ಯಾವಾಗ ಸಮಾಧಿ ನಿರ್ಮಿಸಿ ಗೌರವ ಸಲ್ಲಿಸುತ್ತೋ?
ಇದರ ನಡುವೆ ನೆನಪಾಗಿದ್ದು ಇತ್ತೀಚೆಗೆ ಹುಚ್ಚ ವೆಂಕಟ್ ಹೇಳಿದ ಮಾತು "ಸಮಾಧಿ ನಿರ್ಮಿಸಿಲ್ಲ ಅಂದ್ರೆ ಅವರು ಇನ್ನೂ ಬದುಕಿದ್ದಾರೆ ಅಂತಾನೇ ಅರ್ಥ". ವಿಷ್ಣು ನಮ್ಮ ಜೊತೆಗೇ ಇದ್ದಾರೆ ಅನ್ನುವಂತೆ ಅವರ ಸಿನಿಮಾಗಳ ಜೊತೆ ನಿಂತಿರುವ ಅವರ ಅಭಿಮಾನಿಗಳಿಗೆ ನಮ್ಮದೊಂದು ಸೆಲ್ಯೂಟ್. [ಬದುಕಿದ್ದಾಗ, ಸತ್ತಮೇಲೂ ವಿಷ್ಣುಗೆ ಅನ್ಯಾಯ: ಅಂಬಿ ಬಾಂಬ್]