Don't Miss!
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾದಕ ವ್ಯಸನಿಗಳಲ್ಲದ ಸ್ಯಾಂಡಲ್ವುಡ್ ನಟರನ್ನು ಹೆಸರಿಸಿದ ರವಿ ಬೆಳಗೆರೆ
ಮಾದಕ ದ್ರವ್ಯ ತಡೆ ಘಟಕ (ಎನ್ಸಿಬಿ) ಬೆಂಗಳೂರಿನಲ್ಲಿ ದಾಳಿ ನಡೆಸಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಮಹಿಳೆ ಹಾಗೂ ಇನ್ನಿಬ್ಬರನ್ನು ಬಂಧಿಸಿದ ನಂತರ. ಸ್ಯಾಂಡಲ್ವುಡ್ ನಟ-ನಟಿಯರಿಗೆ ಮಾದಕ ವ್ಯಸನ ಇದೆ ಎಂಬ ಸುದ್ದಿ ಹೊರಬಿದ್ದಿದೆ.
Recommended Video
ಸ್ಯಾಂಡಲ್ವುಡ್ನ ಕೆಲವು ನಟ-ನಟಿಯರಿಗೆ ಮಾದಕ ವ್ಯಸನ ಇರುವುದು ಸತ್ಯ. ಭದ್ರತೆ ನೀಡುವುದಾದರೆ ಅಂಥಹವರ ಹೆಸರು ಬಹಿರಂಗಗೊಳಿಸುತ್ತೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ ಬಳಿಕವಂತೂ ಪ್ರಕರಣ ಮತ್ತೊಂದು ಮಜಲಿಗೆ ತಿರುಗಿದ್ದು, ಸಿನಿ ಲೋಕದ ಹಿರಿಯರು ವಿಷಯದ ಕುರಿತು ಹೇಳಿಕೆಗಳನ್ನು ನೀಡಲು ಇಳಿದಿದ್ದಾರೆ.
ಸಿನಿಮಾ ಲೋಕದೊಂದಿಗೆ ನಂಟು ಹೊಂದಿರುವ, ಹಿರಿಯ ಪತ್ರಕರ್ತರೂ ಆಗಿರುವ ರವಿ ಬೆಳಗೆರೆ ಇಂದು ಸುದ್ದಿಗೋಷ್ಟಿ ನಡೆಸಿ, ಸ್ಯಾಂಡಲ್ವುಡ್ ಜೊತೆಗೆ ಡ್ರಗ್ಸ್ ನಂಟಿನ ವಿಷಯದ ಬಗ್ಗೆ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತಾ, ಚಂದನವನಕ್ಕೆ ಡ್ರಗ್ ಮಾಫಿಯಾ ನಂಟಿದೆ ಎಂಬುದನ್ನು ನಿರಾಕರಿಸಿದ ರವಿ ಬೆಳಗೆರೆ. ಉಪೇಂದ್ರ, ಜಗ್ಗೇಶ್, ದುನಿಯಾ ವಿಜಯ್ ಅಂಥಹಾ ದೊಡ್ಡ-ದೊಡ್ಡ ನಟರ್ಯಾರೂ ಮಾದಕ ವ್ಯಸನಿಗಳಲ್ಲ ಎಂದರು.
ಡ್ರಗ್ಸ್ ಸೇವಿಸಿದವರಂತೆ ಮಾತನಾಡುತ್ತಾರೆ ಅಷ್ಟೆ: ಬೆಳಗೆರೆ
ಆದರೆ ಕೆಲವರು ಮಾದಕ ವಸ್ತು ಸೇವನೆ ಮಾಡಿದಂತೆ ಮಾತನಾಡುತ್ತಾರೆ ಅಷ್ಟೆ ಎಂದು ನಗೆ ಚಟಾಕಿ ಹಾರಿಸಿದರು ಬೆಳಗೆರೆ. ಅವರ ವ್ಯಂಗ್ಯದ ಮಾತಿನ ಗುರಿ ದುನಿಯಾ ವಿಜಯ್ ಎಂಬುದು ವಿಜಯ್-ರವಿ ಬೆಳಗೆರೆ ನಡುವೆ ನಡೆದಿದ್ದ ಜಗಳ ಗೊತ್ತಿದ್ದ ಯಾರಿಗಾದರೂ ಸುಲಭಕ್ಕೆ ಅರ್ಥವಾಗುತ್ತದೆ.
'ಅವರ್ಯಾರೂ ಡ್ರಗ್ಸ್ ಬಗ್ಗೆ ಮಾತನಾಡಿದ್ದು ನಾನು ಕೇಳಿಲ್ಲ'
ಮುಂದುವರೆದು ಮಾತನಾಡಿದ ರವಿ ಬೆಳಗೆರೆ, ವಿಷ್ಣುವರ್ಧನ್, ಅಂಬರೀಶ್ ಅಂಥಹಾ ಹಿರಿಯ ನಟರುನನಗೆ ಸ್ನೇಹಿತರಾಗಿದ್ದರು. ಈಗ ರಾಕ್ಲೈನ್ ವೆಂಕಟೇಶ್ ಇನ್ನೂ ಕೆಲವರು ಸ್ನೇಹಿತರೆ ಆದರೆ ಅವರುಗಳೆಂದೂ ಡ್ರಗ್ಸ್ ಬಗ್ಗೆ ಮಾತನಾಡಿದ್ದನ್ನು ನಾನು ಕೇಳಿಲ್ಲ ಎಂದರು ಬೆಳಗೆರೆ.
ಇಂದ್ರಜಿತ್ ಲಂಕೇಶ್ ಬಗ್ಗೆ ಖಾರದ ಪ್ರತಿಕ್ರಿಯೆ
ಭದ್ರತೆ ನೀಡಿದರೆ ಚಂದನವನದ ಮಾದಕ ವ್ಯಸನಿಗಳ ಮಾಹಿತಿ ನೀಡುತ್ತೇನೆ ಎಂದಿರುವ ಇಂದ್ರಜಿತ್ ಲಂಕೇಶ್ ಹೇಳಿಕೆ ಕುರಿತು ಖಾರದ ಪ್ರತಿಕ್ರಿಯೆ ನೀಡಿದ ರವಿ ಬೆಳಗೆರೆ, ಆತನ ಬಳಿ ಪೂರ್ಣ ಮಾಹಿತಿ ಇದ್ದರೆ ಮಾತನಾಡಬೇಕು. ಇಲ್ಲದೇ ಹೋದರೆ ಸುಮ್ಮನಿರಬೇಕು ಎಂದರು.
'ತಲೆಯ ಮೇಲೆ ಕೂದಲಿಲ್ಲ, ಒಳಗೆ ಬುದ್ಧಿಯೂ ಇಲ್ಲ'
'ತಲೆಯ ಮೇಲೆ ಕೂದಲಿಲ್ಲ. ತಲೆಯ ಒಳಗೆ ಬುದ್ಧಿಯೂ ಇಲ್ಲ. ಆತ ಯಾರೆಂಬುದು ಸಹ ನನಗೆ ಗೊತ್ತಿಲ್ಲ. ಆತನ ತಂದೆ ಗೊತ್ತು. ಆತ ಯಾರೆಂಬುದು ಗೊತ್ತಿಲ್ಲ. ಸುಮ್ಮನೆ ನಾನ್ಸೆನ್ಸ್ ಮಾತನಾಡುತ್ತಿದ್ದಾನೆ, ಆತನ ತಂದೆ ಯಾರೆಂಬುದು ಗೊತ್ತು, ಆದರೆ ಈತ ಯಾರೆಂಬುದು ನನಗೆ ಗೊತ್ತೇ ಇಲ್ಲ' ಎಂದು ವಾಗ್ದಾಳಿ ನಡೆಸಿದರು ಬೆಳಗೆರೆ.
'ಅನಿಕಾ ಸುಳ್ಳು ಮಾಹಿತಿ ನೀಡಿರಬಹುದು'
ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಅನಿಕಾ, ಪ್ರಕರಣದ ದಿಕ್ಕು ತಪ್ಪಿಸಲು ಚಂದನವನದ ಲಿಂಕ್ ಬಗ್ಗೆ ಸುಳ್ಳು ಹೇಳಿರಬಹುದು. ಆಕೆಗೆ ಡ್ರಗ್ಸ್ ಹೇಗೆ ಸಿಕ್ಕಿತು ಎಂಬುದು ತನಿಖೆ ಆಗಬೇಕು. ಆ ರಾಕೆಟ್ ನಲ್ಲಿ ಯಾರ್ಯಾರು ಇದ್ದಾರೆ ಎಂಬುದು ಗೊತ್ತಾಗಬೇಕು ಎಂದರು ರವಿ ಬೆಳಗೆರೆ.