ಸಂಗೊಳ್ಳಿ ರಾಯಣ್ಣ ಬಿಡುಗಡೆ ದಿನ ದರ್ಶನ್ ಎಲ್ಲಿದ್ದರು?
ಅದಿರಲಿ, ಆ ಚಿತ್ರ ಬಿಡುಗಡೆಯಾದ ದಿನ ಚಿತ್ರದ ನಾಯಕ ನಟ, 'ರಾಯಣ್ಣ' ಪಾತ್ರಧಾರಿ ದರ್ಶನ್ ಎಲ್ಲಿದ್ದರು ಗೊತ್ತೇ? ಅವರ ತೋಟದ ಮನೆಯಲ್ಲಿದ್ದರು. ಮೈಸೂರಿನ ಅವರ ಫಾರ್ಮ್ ಹೌಸ್ ನಲ್ಲಿ ಖುಷಿಯಾಗಿ ಓಡಾಡಿಕೊಂಡಿದ್ದ ದರ್ಶನ್ ಅವರಿಗೆ ಚಿತ್ರ ನೋಡಿದ ಅಭಿಮಾನಿಗಳು ಹಾಗೂ ಪರಿಚಿತರು ಸತತವಾಗಿ ಫೋನ್ ಕಾಲ್ ಮಾಡುತ್ತಿದ್ದರು. 125ಕ್ಕೂ ಹೆಚ್ಚು ಫೋನ್ ಕಾಲಗಳು ಹಾಗೂ ಅಸಂಖ್ಯಾತ ಎಸ್ ಎಂಎಸ್ ಗಳು ಅಂದು ದರ್ಶನ್ ಮೊಬೈಲ್ ತಲುಪಿದ್ದವು.
ತಮ್ಮ ಮೊಬೈಲ್ ಅನ್ನು ಇಡೀ ದಿನವೂ ಚಾರ್ಜ್ ಹಾಕಿಯೇ ಇಟ್ಟಿದ್ದರಂತೆ ದರ್ಶನ್. ಕಾರಣ, ಅಂದು ಮೊಬೈಲ್ ಮೂಲಕ ಬಂದ ಅಸಂಖ್ಯಾತ ಪ್ರತಿಕ್ರಿಯೆಗಳಿಗೆ ದರ್ಶನ್, ಸ್ವತಃ ಉತ್ತರ ನೀಡಿದರು. ಸಾಕಷ್ಟು ಜನರ ಜೊತೆ ಫೋನಿನಲ್ಲಿ ಮಾತನಾಡಿದರು. ಎಸ್ಎಂಎಸ್ ಗಳಿಗೆ ಉತ್ತರ ನೀಡಿದರು. ಎಲ್ಲರಿಂದಲೂ ಬಂದ ಪ್ರತಿಕ್ರಿಯೆ ಮಾತ್ರ ಒಂದೇ ಆಗಿತ್ತಂತೆ. ಅದು "ಸಂಗೊಳ್ಳಿ ರಾಯಣ್ಣ' ಚಿತ್ರ ಚೆನ್ನಾಗಿದೆ. ಜೊತೆಗೆ ನಿಮ್ಮ ಅಭಿನಯವೂ ಸೂಪರ್..."
ತಮ್ಮ ಮೊಬೈಲಿಗೆ ಹರಿದುಬಂದ ಸಂದೇಶಗಳು ಹಾಗೂ ಕಾಲ್ ಗಳನ್ನು ಸ್ವತಃ ಅಟೆಂಡ್ ಮಾಡಿದ ದರ್ಶನ್, ಈ ಬಗ್ಗೆ ನೇರವಾಗಿ ತಮಗೇ ತಲುಪಿರುವ ಮಾಹಿತಿಯಿಂದ ಖುಷಿಯಾದರಂತೆ. ಸಾಕಷ್ಟು ಕಾಲ್ ಗಳು ಹಾಗೂ ಸಂದೇಶಗಳ ಮೂಲಕ ಚಿತ್ರ ಚೆನ್ನಾಗಿದೆ ಎಂಬ ಅಭಿಪ್ರಾಯ ಬಂದಿದ್ದರಿಂದ ಸಹಜವಾಗಿಯೇ ಮೊದಲೇ ಇದ್ದ ಆತ್ಮವಿಶ್ವಾಸ ಇನ್ನೂ ಹೆಚ್ಚಾಗಿದ್ದನ್ನು ದರ್ಶನ್ ಹೇಳಿಕೊಂಡಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












