Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ತಾಯಿಗೆ ತಕ್ಕ ಮಗ'ನಾಗಿ ಅಜೇಯ್ ರಾವ್
ಅಜೇಯ್ ರಾವ್ ಗೆ 'ಕೃಷ್ಣ' ಅಂತ ನಾಮಕರಣ ಮಾಡಿ, 'ಕೃಷ್ಣನ್ ಲವ್ ಸ್ಟೋರಿ' ಅಂತಹ ಸೂಪರ್ ಡ್ಯೂಪರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಶಶಾಂಕ್. ಈ ಇಬ್ಬರ ಕಾಂಬಿನೇಷನ್ ನಲ್ಲೇ ಇಂದು 'ಕೃಷ್ಣಲೀಲಾ' ಚಿತ್ರ ತೆರೆಗೆ ಬಂದಿದೆ.
'ಕೃಷ್ಣಲೀಲಾ' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರಂತೂ ಫುಲ್ ಖುಷ್ ಆಗಿದ್ದಾರೆ. ಇದೇ ಖುಷಿಯಲ್ಲಿ ನಿರ್ದೇಶಕ ಶಶಾಂಕ್ ತಮ್ಮ ಹೊಸ ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ. ಅದೇ 'ತಾಯಿಗೆ ತಕ್ಕ ಮಗ'.
'ತಾಯಿಗೆ ತಕ್ಕ ಮಗ'...ಡಾ.ರಾಜ್ ಕುಮಾರ್, ಪದ್ಮಪ್ರಿಯಾ, ಸಾಹುಕಾರ್ ಜಾನಕಿ ಅಭಿನಯದ ಈ ಚಿತ್ರ 1978ರಲ್ಲಿ ತೆರೆಕಂಡು ಅಭೂತ ಪೂರ್ವ ಯಶಸ್ವಿ ದಾಖಲಿಸಿತ್ತು.
ಈಗ ಇದೇ ಹೆಸರನ್ನಿಟ್ಟುಕೊಂಡು ಶಶಾಂಕ್ ಹೊಸ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಹೆಸರು ಒಂದೇ ಆಗಿದ್ದರೂ, ಅಣ್ಣಾವ್ರ ಸಿನಿಮಾಗೂ, ಈ ಚಿತ್ರಕ್ಕೂ ಸಂಬಂಧವಿಲ್ಲ. ಆದ್ರೆ, ತಾಯಿ ಮಗನ ಸೆಂಟಿಮೆಂಟ್ ಚಿತ್ರ ಅನ್ನುತ್ತಾರೆ ನಿರ್ದೇಶಕ ಶಶಾಂಕ್. ['ಕೃಷ್ಣಲೀಲಾ' ವಿಮರ್ಶೆ: ಗಿಮಿಕ್ ಇಲ್ಲ...ಎಲ್ಲೂ ಕೆಮ್ಮಂಗಿಲ್ಲ!]
ವಿಶೇಷ ಅಂದ್ರೆ, 'ತಾಯಿಗೆ ತಕ್ಕ ಮಗ' ಅಂತ ಅನಿಸಿಕೊಳ್ಳುವುದಕ್ಕೆ ಹೊರಟಿರುವುದು ಒನ್ಸ್ ಅಗೇನ್ 'ಕೃಷ್ಣ' ಅಜೇಯ್ ರಾವ್. ನಿಜಜೀವನದಲ್ಲೂ ಅಜೇಯ್ ರಾವ್, ತಾಯಿಗೆ ತಕ್ಕ ಮಗ. ಅಮ್ಮ ಹಾಕಿದ ಗೆರೆಯನ್ನ ಅಜೇಯ್ ಎಂದೂ ದಾಟೋಲ್ಲ.
ಇಬ್ಬರ ಸೆಂಟಿಮೆಂಟ್ ಕಹಾನಿನೇ 'ತಾಯಿಗೆ ತಕ್ಕ ಮಗ' ಚಿತ್ರಕ್ಕೆ ಸ್ಪೂರ್ತಿ ಅಂತ ಹೇಳುವ ಶಶಾಂಕ್, ಅದಾಗ್ಲೇ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಕೂಡ ಮಾಡಿಸಿದ್ದಾರೆ. ಸದ್ಯಕ್ಕೆ ಇನ್ನೂ ಪ್ಲಾನಿಂಗ್ ಹಂತದಲ್ಲಿರುವ ಈ ಚಿತ್ರ ಶಶಾಂಕ್ ರವರ 'ಮುಂಗಾರು ಮಳೆ-2' ಚಿತ್ರದ ನಂತರ ಸೆಟ್ಟೇರುವ ಸಾಧ್ಯತೆ ಇದೆ. (ಏಜೆನ್ಸೀಸ್)