Don't Miss!
- News Namma Metro Service Extend: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಕ್ತಿಧಾಮಕ್ಕೆ ಭೇಟಿ ನೀಡಿದ ಶಿವಣ್ಣ ದಂಪತಿ: ಟ್ರಸ್ಟಿಗಳೊಟ್ಟಿಗೆ ಸಭೆ
ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಮೊದಲ ಬಾರಿಗೆ ಶಿವರಾಜ್ ಕುಮಾರ್ ದಂಪತಿ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದರು.
ಶಕ್ತಿಧಾಮದ ಟ್ರಸ್ಟಿಗಳ ಸಭೆಯನ್ನು ಇಂದು ನಡೆಸಲಾಯಿತು. ಟ್ರಸ್ಟ್ ಅಧ್ಯಕ್ಷೆ ಗೀತಾ ಶಿವರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಟ್ರಸ್ಟ್ ಉಪಾಧ್ಯಕ್ಷ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ, ಮ್ಯಾನೇಂಜಿಂಗ್ ಟ್ರಸ್ಟಿ ಜಯದೇವ್, ಖಜಾಂಚಿ ಸುಮನ ಸೇರಿದಂತೆ ಇತರೆ ಟ್ರಸ್ಟ್ ಪದಾಧಿಕಾರಿಗಳು ಭಾಗಿಯಾಗಿದ್ದರು.
ಶಕ್ತಿಧಾಮಕ್ಕೆ ಪುನೀತ್ ರಾಜ್ಕುಮಾರ್ ದೊಡ್ಡ ಬೆನ್ನೆಲುಬಾಗಿದ್ದರು, ಆದರೆ ಈಗ ಪುನೀತ್ ಅಗಲಿರುವ ಕಾರಣ ಅವರ ಗೌರವಾರ್ಥ ಹಾಗೂ ಶಕ್ತಿಧಾಮದ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಚರ್ಚಿಸಲು ಈ ಸಭೆಯನ್ನು ಕರೆಯಲಾಗಿತ್ತು.
ಇದರ ನಡುವೆ ಶಕ್ತಿಧಾಮದ ಮಕ್ಕಳ ಜವಾಬ್ದಾರಿಯನ್ನು ತಮಗೆ ನೀಡುವಂತೆ ನಟ ವಿಶಾಲ್ ಸಹ ದೊಡ್ಮನೆ ಕುಟುಂಬದವರ ಬಳಿ ಮನವಿ ಮಾಡಿದ್ದರು. ಹಾಗಾಗಿ ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಪಾರ್ವತಮ್ಮ ರಾಜ್ಕುಮಾರ್-ರಾಜ್ಕುಮಾರ್ ಒತ್ತಾಸೆಯಿಂದ ಪ್ರಾರಂಭವಾದ ಶಕ್ತಿಧಾಮವನ್ನು ಪಾರ್ವತಮ್ಮ ರಾಜ್ಕುಮಾರ್ ಅವರು ವಿಶೇಷ ಆಸಕ್ತಿಯಿಂದ ಬೆಳೆಸಿಕೊಂಡು ಬಂದರು. ಸಾವಿರಾರು ಹೆಣ್ಣುಮಕ್ಕಳಿಗೆ, ಶಿಕ್ಷಣ ಒಳ್ಳೆಯ ಜೀವನ ರೂಪಿಸಿಕೊಳ್ಳುವ ಅವಕಾಶವನ್ನು ಶಕ್ತಿಧಾಮ ಮಾಡಿಕೊಟ್ಟಿದೆ. ಪಾರ್ವತಮ್ಮ ರಾಜ್ಕುಮಾರ್ ಕಾಲಾನಂತರ ದೊಡ್ಮನೆ ಕುಟುಂಬ ಶಕ್ತಿಧಾಮವನ್ನು ಮುನ್ನಡೆಸಿಕೊಂಡು ಹೋಗುತ್ತಿದೆ. ಶಕ್ತಿಧಾಮಕ್ಕೆ ಪುನೀತ್ ರಾಜ್ಕುಮಾರ್ ದೊಡ್ಡ ಬೆನ್ನೆಲುಬಾಗಿ ನಿಂತಿದ್ದರು. ಆದರೆ ಈಗ ಅವರು ಮರೆಯಾಗಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ''ಯಾರೊ ಕೇಳಿದರು ಅಣ್ಣ-ತಮ್ಮಂದಿರು ನೀವು ಯಾವಾಗಲೂ ಜಗಳ ಆಡಿದ್ದೀರ? ಎಂದು. ಆದರೆ ನನ್ನ ತಾಯಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾವೆಂದೂ ಜಗಳವಾಡಿಲ್ಲ. ಅವನ ಪ್ರತಿಭೆ ನೋಡಿ, ಬೆಳವಣಿಗೆ ನೋಡಿ ನಾವು ಖುಷಿ ಪಟ್ಟಿದ್ದೇವೆ. ಖುಷಿಯಿಂದ ಕಣ್ಣೀರಿಟ್ಟಿದ್ದೇವೆ, ಆದರೆ ತಮ್ಮಂದಿರೊಂದಿಗೆ ಜಗಳವಾಡಿದ್ದು ನನಗೆ ನೆನಪೇ ಇಲ್ಲ'' ಎಂದರು ಶಿವರಾಜ್ ಕುಮಾರ್.
''ನಾವೆಲ್ಲ ಎಷ್ಟೋ ವರ್ಷಗಳಾದ ಮೇಲೆ ಸ್ಟಾರ್ಗಳಾದೆವು, ಆದರೆ ನಾವು ಈಗ ಸಾಧಿಸಿರುವುದನ್ನು ಅಪ್ಪು ಸಣ್ಣ ವಯಸ್ಸಿನಲ್ಲಿಯೇ ಸಾಧಿಸಿಬಿಟ್ಟ. ಅವನು ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸ್ಟಾರ್. ನನಗೂ ಅವನಿಗೂ ಹದಿಮೂರು ವರ್ಷ ಅಂತರ, ನಾನು ಅವನನ್ನು ಮಗುವಿನಂತೆ ತೋಳಲ್ಲಿ ಎತ್ತಿಕೊಂಡು ಓಡಾಡಿದ್ದೇನೆ. ಅವನು ನನ್ನ ತಮ್ಮನಲ್ಲ, ಅವನು ನನ್ನ ಮಗ'' ಎಂದಿದ್ದಾರೆ ಶಿವಣ್ಣ.