Don't Miss!
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- News Karnataka Lok Sabha Election 2024: ಮೊದಲ ದಿನ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶ್ರೀಕಂಠ'ನ ರುದ್ರನರ್ತನಕ್ಕೆ ಬಾಕ್ಸ್ ಆಫೀಸ್ ಉಡೀಸ್!
ಸ್ಯಾಂಡಲ್ ವುಡ್ ಚಿತ್ರಗಳಿಗೀಗ ಒಳ್ಳೆಯ ದಿನಗಳು. ಯಾಕಂದ್ರೆ, ಒಂದಕ್ಕಿಂತ ಮತ್ತೊಂದು ಸಿನಿಮಾ ಅದ್ಭುತವಾಗಿ ಮೂಡಿಬರುತ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಎಲ್ಲರ ಹುಬ್ಬೇರುವಂತೆ ಮಾಡಿದೆ. ರಮೇಶ್ ಅರವಿಂದ್ ಅವರ 'ಪುಷ್ಪಕ ವಿಮಾನ' ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ.
ಇವೆರೆಡು ಚಿತ್ರಗಳ ಜೊತೆಯಲ್ಲಿ ಬಂದ 'ಶ್ರೀಕಂಠ' ಬಾಕ್ಸ್ ಆಫೀಸ್ ಮೇಲೆ ಸವಾರಿ ಮಾಡುತ್ತಿದೆ. ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಶ್ರೀಕಂಠ' ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಮೊದಲ ವಾರದಲ್ಲಿ ಅತ್ಯುತ್ತಮ ಗಳಿಕೆ ಕಂಡಿದೆ.[ವಿಮರ್ಶೆ: ಪ್ರೀತಿಗೆ ನೆಂಟ, ದುಷ್ಟರಿಗೆ ಒರಟ ಈ ಕಾಮನ್ ಮ್ಯಾನ್ 'ಶ್ರೀಕಂಠ']
ಅಷ್ಟೇ ಅಲ್ಲ, 'ಶ್ರೀಕಂಠ' ಚಿತ್ರದ ಸ್ಯಾಟ್ ಲೈಟ್ ಹಕ್ಕು ಭರ್ಜರಿ ಮೊತ್ತಕ್ಕೆ ಮಾರಟವಾಗಿದೆ. ಹಾಗಾದ್ರೆ, ಶಿವಣ್ಣನ ಮೊದಲ ವಾರದ ಭೇಟೆ ಹೇಗಿತ್ತು ಅಂತ ಇಲ್ಲಿದೆ ನೋಡಿ....
ಬಾಕ್ಸ್ ಆಫೀಸ್ ನಲ್ಲಿ 'ಶ್ರೀಕಂಠ' ಸವಾರಿ
ಮಂಜು ಸ್ವಾರಾಜ್ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬಂದ 'ಶ್ರೀಕಂಠ' ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ, ಗಲ್ಲಾಪೆಟ್ಟಿಗೆಯಲ್ಲೂ 'ಶ್ರೀಕಂಠ' ರುದ್ರನರ್ತನ ಮಾಡಿದ್ದಾನೆ.[ಸೆಂಚುರಿ ಸ್ಟಾರ್ ಶಿವಣ್ಣ 'ಶ್ರೀಕಂಠ' ನಾಗಿ ಮಿಂಚಿಂಗ್]
ಮೊದಲ ವಾರಾಂತ್ಯಕ್ಕೆ ಗಳಿಸಿದ್ದೇಷ್ಟು?
ರಾಜ್ಯಾದ್ಯಂತ ಸುಮಾರು 220ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ 'ಶ್ರೀಕಂಠ' ಮೊದಲ ಮೂರು ದಿನಗಳಿಗೆ ಸುಮಾರು 7 ಕೋಟಿ ಗಳಿಸಿದ್ದಾನಂತೆ.[ಕಾಮನ್ ಮ್ಯಾನ್ 'ಶ್ರೀಕಂಠ'ನಿಗೆ ವಿಮರ್ಶಕರಿಂದ ಬಂದ ಕಾಮೆಂಟ್ ಗಳೇನು!]
ಭರ್ಜರಿ ಮೊತ್ತಕ್ಕೆ ಟಿವಿ ಹಕ್ಕು ಮಾರಾಟ!
ಇನ್ನೂ 'ಶ್ರೀಕಂಠ' ಚಿತ್ರದ ಟಿವಿ ರೈಟ್ಸ್ ಖರೀದಿಯಾಗಿದ್ದು, 2.2೦ ಕೋಟಿಗೆ ಖಾಸಗಿ ವಾಹಿನಿ ಪಡೆದುಕೊಂಡಿದೆಯಂತೆ.
ಗಾಂಧಿನಗದರಲ್ಲಿ 'ಕಾಮನ್ ಮ್ಯಾನ್' ಅಬ್ಬರ!
'ಕಾಮನ್ ಮ್ಯಾನ್' ಕಥೆಯುಳ್ಳ 'ಶ್ರೀಕಂಠ' ಸಾಮಾಜಿಕ ಸಂದೇಶದ ಜೊತೆಗೆ ಉತ್ತಮ ಮನರಂಜನೆ ಕೂಡ ನೀಡಿದೆ. ಮಂಜು ಸ್ವರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಇನ್ನೂ ಸೆಂಚುರಿ ಸ್ಟಾರ್ ಗೆ ಚಾಂದಿನಿ ಶ್ರೀಧರನ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಮನು ಗೌಡ ನಿರ್ಮಾಣ ಮಾಡಿದ್ದಾರೆ.[ಶಿವಣ್ಣನ 'ಶ್ರೀಕಂಠ' ಯಾಕೆ ನೋಡ್ಬೇಕು? ಇಲ್ಲಿದೆ 6 ಕಾರಣ!]