Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡಕ್ಕೆ 'ಭಜರಂಗಿ' ಕೊಟ್ಟ ಹೊಸ ಖಳನಟ ಲೋಕೇಶ್
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 105 'ಭಜರಂಗಿ' ಚಿತ್ರಕ್ಕೆ ರಾಜ್ಯದಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರದಲ್ಲಿ ರಕ್ತಾಕ್ಷನಾಗಿ ಉಗಾಂಡಾದ ಈದಿ ಅಮೀನ್ ನೆನಪಿಸುವಂತೆ ಅಭಿನಯಿಸಿರುವ ನಟ ಸೌರವ್ ಲೋಕೇಶ್ ಈಗ ಎಲ್ಲರ ಗಮನಸೆಳೆಯುತ್ತಿದ್ದಾರೆ.
ರಂಗಭೂಮಿ ಹಿನ್ನೆಲೆಯಿಂದ ಬಂದ ಲೋಕೇಶ್ ಚಿತ್ರದಲ್ಲಿ ತಮ್ಮದೇ ಆದಂತಹ ಮ್ಯಾನರಿಸಂ ಮೂಲಕ ಕನ್ನಡಕ್ಕೆ ಹೊಸ ಖಳನಟನಾಗಿ ಪರಿಚಯವಾಗಿದ್ದಾರೆ. ಕೋರೆಹಲ್ಲುಗಳನ್ನು ತೋರಿಸುತ್ತಾ, ಹೆಂಗೆಳೆಯರ ಮೇಲೆ ಮೃಗದಂತೆ ಹಾರಿ ತನ್ನ ಬಯಕೆ ತೀರಿಸಿಕೊಳ್ಳುವ ಪಾತ್ರ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. [ಭಜರಂಗಿ ಚಿತ್ರ ವಿಮರ್ಶೆ]
'ಭಜರಂಗಿ' ಚಿತ್ರದಲ್ಲಿನ ಕುದುರೆ ಸವಾರಿ ಸನ್ನಿವೇಶಗಳ ಚಿತ್ರೀಕರಣ ವೇಳೆ ಲೋಕೇಶ್ ಗಾಯಗೊಂಡಿದ್ದರು. ಒಂದು ತಿಂಗಳು ಕಾಲ ಹಾಸಿಗೆ ಹಿಡಿಯುವಂತಾಗಿತ್ತು. ಮಧು ಗುರುಸ್ವಾಮಿ ಹಾಗೂ ಚೇತನ್ ಎಂಬ ಇನ್ನಿಬ್ಬರು ಕಲಾವಿದರೂ ಚಿತ್ರದಲ್ಲಿ ಮಿಂಚಿದ್ದಾರೆ. ಜೊತೆಗೆ ದೇವಕನ್ಯೆ ಕೃಷ್ಣೆಯಾಗಿ ರುಕ್ಮಿಣಿ ವಿಜಯ್ ಕುಮಾರ್ ಅವರದು ಮನಮಿಡಿಯುವ ಪಾತ್ರ. ಇಷ್ಟೆಲ್ಲಾ ಕಲಾವಿದರಿಗೆ 'ಭಜರಂಗಿ' ಚಿತ್ರ ಹೊಸ ಜೀವವನ್ನು ಪ್ರಸಾದಿಸಿದೆ. (ಏಜೆನ್ಸೀಸ್)