Don't Miss!
- News ಐಯ್ಯಯ್ಯೋ.. ಶುರುವಾಯ್ತು ಗುರೂ ಮತ್ತೊಂದು ಮಹಾಯುದ್ಧ!
- Lifestyle ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Sports GT vs DC: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೃಜನ್ ಮಾಡ್ತಿರೋ ಒಳ್ಳೆ ಕೆಲಸ ನಿಮ್ಗೂ ಗೊತ್ತಿರಲಿ
Recommended Video
ಸೃಜನ್ ಲೋಕೇಶ್ ಅಂದ ತಕ್ಷಣ ಮೊದಲಿಗೆ ನೆನಪಾಗುವುದು ಮಜಾ ಟಾಕೀಸ್, ವಾರದ ಅಂತ್ಯದಲ್ಲಿ ಮನೆ ಮಂದಿ ಎಲ್ಲರೂ ಕೂತು ನೋಡುವಂತ ಕಾರ್ಯಕ್ರಮವನ್ನ ನೆಡಿಸಿಕೊಡುವ ಸೃಜನ್ ಸಾಕಷ್ಟು ವರ್ಷಗಳಿಂದ ಕನ್ನಡ ಸಿನಿಮಾರಂಗಕ್ಕೂ ಹಾಗೂ ಅಭಿಮಾನಿಗಳಿಗೂ ಚಿರಪರಿಚಿತರು. ಸುಬ್ಬಯ್ಯ ನಾಯ್ಡು ಕುಟುಂಬದ ಕುಡಿಯಾಗಿರುವ ಸೃಜನ್ ದಿವಂಗತ ನಟ ಲೋಕೇಶ್ ಅವರ ಪುತ್ರ.
ಕಿರು ತೆರೆಯಲ್ಲಿ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲೂ ಅಭಿನಯಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಪಡೆದುಕೊಂಡಿರುವ ಸೃಜನ್ ಅಪ್ಪನ ಹೆಸರಿನಲ್ಲಿ ಮಾಡುತ್ತಿರುವ ಕೆಲಸಗಳು ಅದೆಷ್ಟೋ ಜನರಿಗೆ ಗೊತ್ತಿಲ್ಲ. ಟಾಕಿಂಗ್ ಸ್ಟಾರ್ ಅಂತಾನೇ ಪೇಮಸ್ ಆಗಿರುವ ಸೃಜನ್ ಯಾರಿಗೂ ತಿಳಿಯದಂತೆ ಮುಂದಿನ ಯುವ ಪೀಳಿಗೆಗೆ ಅನುಕೂಲವಾಗುವಂತಹ ಕೆಲಸವನ್ನು ಮಾಡುತ್ತಿದ್ದಾರೆ.
ಈ ಬಾರಿಯಾದ್ರೂ ಸೃಜನ್ ಮನೆ ಹೊಸಿಲು ತುಳಿಯುತ್ತಾರಾ 3 ಬಿಗ್ ಸ್ಟಾರ್ ಗಳು ?
ಸದಾ ಬ್ಯುಸಿ ಆಗಿರುತ್ತೇನೆ ಎನ್ನುವ ಕೆಲಸಗಳ ಮಧ್ಯೆ ಸೃಜ ನೂರಾರು ಜನರಿಗೆ ಮಾದರಿ ಆಗಿ ನಿಲ್ಲುತ್ತಾರೆ. ಮನಸ್ಸಿನಿಂದ ಮಾಡುವ ಕೆಲಸಕ್ಕೆ ಬಿಡುವೇಕೆ ಎನ್ನುವ ಸೃಜನ್ ಮಾಡುತ್ತಿರುವ ಕೆಲಸವಾದರೂ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ
ಲೋಕೇಶ್ ಹೆಸರು ಸೃಜನ್ ರಿಂದ ಹಸಿರು
ಅಪ್ಪನ ಹೆಸರು ಬಳಸುವವನು ಮಗ ನಲ್ಲ, ಅಪ್ಪನ ಹೆಸರು ಉಳಿಸುವವನು ಮಗ ಎನ್ನುವ ಮಾತಿದೆ. ಅದಕ್ಕೆ ತಕ್ಕ ಉದಾಹರಣೆ ಸೃಜನ್ ಲೋಕೇಶ್, ಸೃಜನ್ ಇಲ್ಲಿವರೆಗೂ ಎಂದಿಗೂ ನಾನು ಇಂತವರ ಮೊಮ್ಮಗ ಅಥವಾ ಲೋಕೇಶ್ ಅವರ ಮಗ ಎನ್ನುವುದನ್ನ ಎಲ್ಲಿಯೂ ತೋರ್ಪಡಿಸಿಕೊಂಡಿಲ್ಲ. ಇಡೀ ಚಿತ್ರಗವೇ ಒಂದು ಕಡೆ ಈಜುತ್ತಿದ್ದರೆ ಸೃಜ ಮಾತ್ರ ಬೇರೆಯದ್ದೇ ದಾರಿ ತುಳಿದು ಅಭಿಮಾನಿಗಳನ್ನ ಪಡೆದುಕೊಂಡವರು.
ಕಾರ್ಯಕ್ರಮದ ಜೊತೆ ಪರಿಸರ ಕಾಳಜಿ
ಲೋಕೇಶ್ ಅವರ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ ನಟ ಸೃಜನ್ ಅಂದೇ ಒಳ್ಳೆ ಕೆಲಸಕ್ಕೆ ಚಾಲನೆ ನೀಡಿದರು. ನಿರ್ಮಾಣ ಸಂಸ್ಥೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರು ಅಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಗಿಡಗಳನ್ನ ಉಡುಗೊರೆಯಾಗಿ ಕೊಡಲು ಆರಂಭಿಸಿದರು.
ಕಲಾವಿದರಲ್ಲಿ ಪರಿಸರ ಕಾಳಜಿ
ಮಜಾ ಟಾಕೀಸ್ ಒಂದರಲ್ಲೇ ಸೃಜನ್ ಸುಮಾರು 1500 ಕ್ಕೂ ಹೆಚ್ಚು ಗಿಡಗಳನ್ನ ವಿತರಣೆ ಮಾಡಿದ್ದಾರೆ. ಔಷಧಿಗೆ ಉಪಯೋಗ ಆಗುವಂತಹ, ಹೂ ಮತ್ತು ಹಣ್ಣುಗಳನ್ನ ಬಿಡುವ ಸಸಿಗಳನ್ನ ನೀಡಲಾಗುತ್ತಿದೆ. ಈ ಮೂಲಕ ಪ್ರೇಕ್ಷಕರ ಹಾಗೂ ಕಲಾವಿದರಿಗೆ ಪರಿಸರದ ಬಗ್ಗೆ ಕಾಳಜಿ ಉಂಟು ಮಾಡುವಂತಾಗುತ್ತದೆ.
ಪ್ರೇರೇಪಿರಾದ ನೋಡುಗರು
ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ತಮ್ಮ ಮನೆಯ ಮದುವೆ, ಸಮಾರಂಭಗಳಲ್ಲಿ ತೆಂಗಿನ ಕಾಯಿಯ ಬದಲು ಗಿಡಗಳನ್ನ ನೀಡುವ ಅಭ್ಯಾಸ ಮಾಡಿಕೊಂಡಿರುವುದ ಸೃಜನ್ ಅವರಿಗೆ ಖುಷಿ ತಂದಿದೆ.