Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಲ್ಲದ ಕೊರೊನಾ ಹಾವಳಿ: ದೊಡ್ಡ ಚಿತ್ರಗಳಿಗೆ ಹೆಚ್ಚಿದ ತಲೆನೋವು
ಕೊರೊನಾ ವೈರಸ್ ಸಂಕಷ್ಟ ಮುಗಿತು, ನಿಧಾನವಾಗಿ ಎಲ್ಲವೂ ಮೊದಲಿನಂತೆ ಆಗುತ್ತದೆ. ಚಿತ್ರಮಂದಿರಗಳು ಮತ್ತೆ ಹೌಸ್ಫುಲ್ ಪ್ರದರ್ಶನ ಕಾಣಲಿದೆ ಎಂಬ ಭರವಸೆಯಿಂದ ದೊಡ್ಡ ಚಿತ್ರಗಳ ಬಿಡುಗಡೆಗೆ ಸಿದ್ದತೆ ನಡೆಸುತ್ತಿರುವಾಗಲೇ ಎರಡನೇ ಅಲೆ ಅಪ್ಪಳಿಸಿ ಎಲ್ಲ ಯೋಜನೆಗಳನ್ನು ತಲೆಕೆಳಗಾಗಿಸಿದೆ.
ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕೆಲವು ಸಿನಿಮಾಗಳು ಚಿತ್ರಮಂದಿರದಲ್ಲಿ ರಿಲೀಸ್ ಆಗಿದ್ದೇ ಅದೃಷ್ಟ. ಅದಾದ ಬಳಿಕ ರಾಜ್ಯಗಳು ಮತ್ತೆ ಲಾಕ್ಡೌನ್ ಮೊರೆ ಹೋಗಿದೆ. ಥಿಯೇಟರ್ಗಳು ಮತ್ತೆ ಮುಚ್ಚಿವೆ, ಶೂಟಿಂಗ್ ರದ್ದುಗೊಂಡಿದೆ. ಸಹಜ ಸ್ಥಿತಿಗೆ ಬಂದಿದ್ದ ಹಿನ್ನೆಲೆ ಸ್ಟಾರ್ ನಟರ ಚಿತ್ರಗಳು ರಿಲೀಸ್ ದಿನಾಂಕ ಪ್ರಕಟಿಸಿ ಡೇಟ್ ಲಾಕ್ ಮಾಡಿದ್ದರು. ಆದ್ರೀಗ, ಈ ಹಿಂದೆ ನಿರ್ಧರಿಸಿದ ದಿನಾಂಕಕ್ಕೆ ಚಿತ್ರಗಳು ಬರುವುದು ಬಹುತೇಕ ಅನುಮಾನ ಆಗಿದೆ. ಮತ್ತೆ ಮುಂದೂಡಿಕೆಯಾಗುತ್ತಾ ದೊಡ್ಡ ಸಿನಿಮಾಗಳು? ಮುಂದೆ ಓದಿ...
ಆಚಾರ್ಯ, ತಲೈವಿ ಮುಂದಕ್ಕೆ ಹೋಗಿದೆ
ಈ ಹಿಂದೆ ನಿರ್ಧರಿಸಿದಂತೆ ಆಗಿದ್ದರೆ ಮೇ 13 ರಂದು ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾ ಹರಡುವಿಕೆ ಹೆಚ್ಚಾದ ಕಾರಣ ರಿಲೀಸ್ ಮುಂದೂಡಿಕೆಯಾಗಿದೆ. ಅದಕ್ಕೂ ಮುಂಚೆ ಏಪ್ರಿಲ್ 23 ರಂದು ತಲೈವಿ ಬರಬೇಕಿತ್ತು. ಆ ಚಿತ್ರವೂ ಮುಂದಕ್ಕೆ ಹೋಗಿತ್ತು. ಈಗ ಈ ಸಿನಿಮಾಗಳ ಬಿಡುಗಡೆ ಯಾವಾಗ ಎನ್ನುವುದು ಸ್ವತಃ ಚಿತ್ರತಂಡಕ್ಕೂ ತಲೆಬಿಸಿ ಉಂಟು ಮಾಡಿದೆ.
ಬಾಲಿವುಡ್ ಪ್ರಿಯರಿಗೆ ಈ ಸುದ್ದಿ: 2021ರಲ್ಲಿ ತೆರೆಗೆ ಬರಲಿರುವ ಚಿತ್ರಗಳ ಬಿಡುಗಡೆ ದಿನಾಂಕ
ಕೆಜಿಎಫ್ ಮತ್ತು ರಾಧೇ ಶ್ಯಾಮ್
ಎರಡನೇ ಅಲೆಯಿಂದಲೇ ಹೆಚ್ಚು ಸಾವು-ನೋವು ಸಂಭವಿಸಿದೆ. ಮೂರನೇ ಅಲೆಯ ಕೊರೊನಾ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ಕೊಡುತ್ತಿದ್ದಾರೆ. ಒಂದು ವೇಳೆ ಸೋಂಕು ಹರಡುವಿಕೆ ನಿಯಂತ್ರಣ ಕಷ್ಟವಾದಲ್ಲಿ ಬಹುನಿರೀಕ್ಷೆಯ ಕೆಜಿಎಫ್ (ಜುಲೈ 16) ಮತ್ತು ರಾಧೇ ಶ್ಯಾಮ್ (ಜುಲೈ 30) ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುವುದು ಅನುಮಾನ.
ಪುಷ್ಪ ಮತ್ತು ಆರ್ ಆರ್ ಆರ್
ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾಗಳಾದ ಪುಷ್ಪ ಮತ್ತು ಆರ್ಆರ್ಆರ್ ಚಿತ್ರಗಳು ಈಗಾಗಲೇ ರಿಲೀಸ್ ದಿನಾಂಕ ಘೋಷಿಸಿಕೊಂಡಿದೆ. ಆಗಸ್ಟ್ 13ಕ್ಕೆ ಪುಷ್ಪ ಹಾಗೂ ಅಕ್ಟೋಬರ್ 13ಕ್ಕೆ ಆರ್ಆರ್ಆರ್ ಚಿತ್ರ ಬರಲು ಸಜ್ಜಾಗಿದೆ. ಬಹುಶಃ ಈ ಚಿತ್ರಗಳ ಮೇಲೂ ಪರಿಣಾಮ ಬೀರಬಹುದು. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾ ನವೆಂಬರ್ 4ಕ್ಕೆ ಬರಲಿದೆ.
ಮಹಾರಾಷ್ಟ್ರದಲ್ಲಿ ಚಿತ್ರಮಂದಿರ ಬಂದ್: ಸಂಕಷ್ಟಕ್ಕೆ ಸಿಲುಕಿದ 14 ಸಿನಿಮಾಗಳು
ಕೋಟಿಗೊಬ್ಬ-ಸಲಗ-ಭಜರಂಗಿ
ರಾಬರ್ಟ್, ಪೊಗರು, ಯುವರತ್ನ ಚಿತ್ರಗಳು ಸಿಕ್ಕ ಅವಕಾಶದಲ್ಲಿ ಚಿತ್ರಮಂದಿರದಲ್ಲಿ ರಿಲೀಸ್ ಆಗುವ ಅದೃಷ್ಟ ಪಡೆದುಕೊಂಡಿತ್ತು. ಆದರೆ, ಕೋಟಿಗೊಬ್ಬ, ಸಲಗ, ಭಜರಂಗಿ 2 ಚಿತ್ರಗಳಿಗೆ ಆ ಅವಕಾಶ ಸಿಕ್ಕಿಲ್ಲ. ಈ ಚಿತ್ರಗಳು ಒಟಿಟಿಯಲ್ಲಿ ಬರಲು ಸಹ ಸಿದ್ದವಿಲ್ಲ. ಥಿಯೇಟರ್ ಓಪನ್ ಆಗಲಿ ಎಂದು ಕಾಯುತ್ತಿವೆ.
Recommended Video
ಒಟಿಟಿಗೆ ಒಲ್ಲದ ಮನಸ್ಸು
ಕೆಲವು ಸ್ಟಾರ್ ನಟರ ಚಿತ್ರಗಳು ಒಟಿಟಿಯಲ್ಲಿ ಬರುವ ಕಡೆ ಆಸಕ್ತಿ ತೋರುತ್ತಿವೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ಬಿಗ್ ಬಜೆಟ್ ಚಿತ್ರಗಳು ಚಿತ್ರಮಂದಿರಗಳಲ್ಲಿಯೇ ಬರುತ್ತೇವೆ ಎಂದು ಹಠಕ್ಕೆ ಬಿದ್ದಿವೆ. ಹಾಗಾಗಿ, ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಸ್ಟಾರ್ ನಟರ ಸಿನಿಮಾಗಳ ದರ್ಶನ ಸಿಗುವುದು ಡೌಟು.