Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತದಾನ ಮಾಡಿದ ಕಿಚ್ಚನಿಗೆ ಸಿಕ್ಕಿತು ಉಡುಗೊರೆ
ರಾಜ್ಯದ ಎಲ್ಲೆಡೆ ಮತದಾನ ನಡೆಯುತ್ತಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ಈ ಸಲ ಜನರು ಮನೆಯಿಂದ ಹೊರಬಂದು ವೋಟ್ ಮಾಡಲು ಹಿಂದೆಟು ಹಾಕುತ್ತಿದ್ದಾರೆ. ಆದರೆ ಸಿನಿಮಾ ಕಲಾವಿದರು ಮಾತ್ರ ತಮ್ಮ ಹಕ್ಕನ್ನು ಚಲಾಯಿಸಲು ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಬಂದಿದ್ದಾರೆ.
ನಟ ಕಿಚ್ಚ ಸುದೀಪ್ ತಮ್ಮ ಪತ್ನಿ ಪ್ರಿಯ ಅವರ ಜೊತೆಯಲ್ಲಿ ಬಂದು ಮತಗಟ್ಟೆ ಸಂಖ್ಯೆ 175 ಬೊಮ್ಮನಹಳ್ಳಿಯಲ್ಲಿ ಮತಚಲಾಯಿಸಿದರು. ಇದೇ ವೇಳೆ ಮಾತನಾಡಿದ ಕಿಚ್ಚ "ಎಲ್ಲೆಡೆ ಮತದಾನ ಕಡಿಮೆಯಾಗಿದೆ ಎಂದು ಕೇಳ್ಪಟ್ಟೆ, ನಾನು ಪತ್ನಿ ಜೊತೆ ಮತದಾನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ದೂರಬೇಡಿ. ಇಂದೇ ಮತ ಚಲಾಯಿಸಿ, ಅಭಿವೃದ್ಧಿಗೆ ನಾಂದಿ ಹಾಡಿ ಎಂದರು.
ಹಕ್ಕು ಚಲಾಯಿಸಿದ ಕಿರುತೆರೆಯ ಕಲಾವಿದರು
ಮತದಾನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತದಾನ ಮಾಡಿದ ಕಿಚ್ಚ ಸುದೀಪ್ ಹಾಗೂ ಪತ್ನಿಗೆ ಪ್ರಿಯಾ ಅವರಿಗೆ ತುಳಸಿ ಗಿಡವನ್ನ ಉಡುಗೊರೆಯಾಗಿ ನೀಡಿಲಾಯ್ತು. ಕಳೆದ ಒಂದು ತಿಂಗಳಿನಿಂದ ಬಿ ಪ್ಯಾಕ್ ಸಂಸ್ಥೆ ಯಿಂದ ಗಿಡಗಳ ಹಂಚಿಕೆ ಮಾಡುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಬಿ ಪ್ಯಾಕ್ ಸಂಸ್ಥೆಯಿಂದ ಪ್ರಥಮ ಬಾರಿಗೆ ಮತ ಚಲಾಯಿಸುವವರಿಗೂ ಹಾಗೂ ಹಿರಿಯ ನಾಗರಿಕರಿಗೆ ಗಿಡಗಳನ್ನ ವಿತರಿಸಲಾಗುತ್ತಿದ್ದು, ೧೦೦೦ ತುಳಸಿ ಮತ್ತು ಹೂವಿನ ಗಿಡಗಳನ್ನ ಹಂಚಿಕೆ ಮಾಡಲಾಗುತ್ತಿದೆ. ಮತದಾನವನ್ನ ಜಾಗೃತಿ ಮಾಡಿಕೊಂಡು ಬಂದಿರುವ ಬಿ ಪ್ಯಾಕ್ ಸಂಸ್ಥೆ ಬಸವನಗುಡಿ, ಶಿವಾಜಿನಗರ, ಗೋವಿಂದ ರಾಜನಗರ , ಮಲ್ಲೇಶ್ವರಂ ಬಿಟಿಎಂ ಲೇಔಟ್ ನಲ್ಲಿ ಗಿಡಗಳನ್ನ ಹಂಚುತ್ತಿದ್ದಾರೆ.