Don't Miss!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- News Snake Video: ವಿಮಾನದಲ್ಲಿ ಹಾವು ಬಿಟ್ಟ ವ್ಯಕ್ತಿ: ಬೆಂಗಳೂರಿನಲ್ಲಿ ಬಂಧನ- ಶಿವಪುರಿಯಲ್ಲಿ ಅಪರೂಪದ ಹಾವು ಪತ್ತೆ!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮ್ಮೂರಿಗೆ ಬರ್ತಿದೆ 'ಹೆಬ್ಬುಲಿ': ಯಾವಾಗ, ಎಲ್ಲೆಲ್ಲಿ?
ಕಿಚ್ಚ ಸುದೀಪ್ ಇಷ್ಟರಲ್ಲೇ ನಿಮ್ಮೂರಿಗೆ ಭೇಟಿ ನೀಡುತ್ತಿದ್ದಾರೆ. ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಕಿಚ್ಚನಿಗೆ ಖುಷಿ ತಂದಿದೆ. ಹೀಗಾಗಿ, ಈ ಖುಷಿಯನ್ನ ಹಂಚಿಕೊಳ್ಳಲು ನಿಮ್ಮೂರಿನ ಚಿತ್ರಮಂದಿರಗಳಿಗೆ 'ಹೆಬ್ಬುಲಿ' ತಂಡ ಭೇಟಿ ಕೊಡುತ್ತಿದೆ.
ಮಾರ್ಚ್ 6 ರಿಂದ ಕರ್ನಾಟಕ ರಾಜ್ಯಾದ್ಯಂತ 'ಹೆಬ್ಬುಲಿ' ವಿಜಯಯಾತ್ರೆ ಶುರುವಾಗಲಿದ್ದು, ಸುದೀಪ್ ಮತ್ತು ಚಿತ್ರತಂಡ 'ಹೆಬ್ಬುಲಿ' ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ಅಂದ್ಹಾಗೆ, ಹೆಬ್ಬುಲಿ ಟೀಮ್, ಯಾವಾಗ, ಎಲ್ಲೆಲ್ಲಿ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಮುಂದೆ ಓದಿ.....
ಮಾರ್ಚ್ 6 ರಂದು 'ಹೆಬ್ಬುಲಿ'ಯಾತ್ರೆ
ಮಾರ್ಚ್ 6 ರಂದು ರಾಜ್ಯಾದ್ಯಂತ 'ಹೆಬ್ಬುಲಿ' ಯಾತ್ರೆ ಶುರುವಾಗಲಿದ್ದು, ಮೊದಲ ದಿನ ತುಮಕೂರು, ಚಿತ್ರದುರ್ಗ, ಬಳ್ಳಾರಿ, ದಾವಣೆಗೆರೆಗೆ ಕಿಚ್ಚ ಸುದೀಪ್ ಅಂಡ್ ಟೀಮ್ ಭೇಟಿ ನೀಡಲಿದೆ.
7 ರಂದು ಮಂಗಳವಾರ
ಎರಡನೇ ದಿನ (ಮಾರ್ಚ್ 7) ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಚಿತ್ರಮಂದಿರಗಳಿಗೆ 'ಹೆಬ್ಬುಲಿ' ಚಿತ್ರತಂಡ ಭೇಟಿ ನೀಡಲಿದೆ. ಹೀಗಾಗಿ, ಕಿಚ್ಚನ ಅಭಿಮಾನಿಗಳಲ್ಲಿ ಸಂತಸ ಹೆಚ್ಚಾಗಿದೆ.
ಮೂರನೇ ದಿನ
'ಹೆಬ್ಬುಲಿ' ಗೆಲುವಿನ ಯಾತ್ರೆ ಮೂರನೇ ದಿನ ಶಿವಮೊಗ್ಗದ ಕಡೆ ಸಾಗಲಿದೆ. ಶಿವಮೊಗ್ಗ, ಅರಸಿಕೆರೆ, ಹಾಸನ ಜಿಲ್ಲೆಗಳಲ್ಲಿ ಸುದೀಪ್ ಅಂಡ್ ಟೀಮ್ ಅಭಿಮಾನಿಗಳ ಭೇಟಿ ಮಾಡಲಿದ್ದಾರೆ.
ಕೊನೆಯ ದಿನ
ಮಾರ್ಚ್ 9, ನಾಲ್ಕನೇ ದಿನ ಹಾಗೂ ಕೊನೆಯ ದಿನ 'ಹೆಬ್ಬುಲಿ' ಚಿತ್ರತಂಡ ಮೈಸೂರು ಹಾಗೂ ಮಂಡ್ಯ ನಗರಗಳಿಗೆ ಭೇಟಿ ನೀಡಲಿದೆ. ಈ ಮೂಲಕ 'ಹೆಬ್ಬುಲಿ' ಚಿತ್ರದ ಗೆಲುವಿನ ಖುಷಿಯನ್ನ ರಾಜ್ಯಾದ್ಯಂತ ಹಂಚಿಕೊಳ್ಳಲಿದ್ದಾರೆ.
'ಹೆಬ್ಬುಲಿ' 11ನೇ ದಿನ ಭರ್ಜರಿ ಪ್ರದರ್ಶನ
ಫೆಬ್ರವರಿ 23 ರಂದು ಬಿಡುಗಡೆಯಾಗಿದ್ದ 'ಹೆಬ್ಬುಲಿ' ಬಾಕ್ಸ್ ಅಫೀಸ್ ನ ಎಲ್ಲ ದಾಖಲೆಗಳನ್ನ ಪುಡಿ ಪುಡಿ ಮಾಡಿ 11 ದಿನ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ಕೃಷ್ಣ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸುದೀಪ್, ರವಿಚಂದ್ರನ್, ಅಮಲಾ ಪೌಲ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.