'ಅಂಬಿಗೆ ವಿಷ್ಣು ಕೇವಲ ಸ್ನೇಹಿತರಾಗಿರಲಿಲ್ಲ, ಪ್ರಾಣವೇ ಆಗಿದ್ದರು'- ಸುಮಲತಾ
ಡಾ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಸ್ನೇಹ ಇಡೀ ಚಿತ್ರರಂಗಕ್ಕೆ ಮಾದರಿ. ಫ್ರೆಂಡ್ಸ್ ಹೇಗಿರಬೇಕು ಅಂದ್ರೆ ವಿಷ್ಣು-ಅಂಬಿಯಂತಿರಬೇಕು ಎನ್ನುತ್ತಾರೆ ಎಲ್ಲರೂ. ಈ ಇಬ್ಬರು ಮಹಾನ್ ಕಲಾವಿದರು ಇಂದು ನಮ್ಮೊಂದಿಗೆ ಇಲ್ಲ. ಆದರೆ, ಅವರ ನೆನಪುಗಳು ಸದಾ ಚಿರಸ್ಮರಣೀಯವಾಗಿದೆ.
ಇಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬ. ವಿಷ್ಣುದಾದ ಜನುಮದಿನಕ್ಕೆ ಇಡೀ ಸ್ಯಾಂಡಲ್ವುಡ್ ಶುಭಕೋರಿದೆ. ಅಂಬರೀಶ್ ಅವರ ಪತ್ನಿ, ವಿಷ್ಣುವರ್ಧನ್ ಅವರ ಸ್ನೇಹಿತೆಯೂ ಆಗಿದ್ದ ಸುಮಲತಾ ಸಹ ದಾದಾರನ್ನು ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ....

ವಿಷ್ಣು ಅಂದರೆ ಸ್ನೇಹ
''ವಿಷ್ಣು ಅಂದರೆ ಸ್ನೇಹ, ಅವರೊಂದಿಗೆ ಕಳೆದ ಪ್ರತಿಯೊಂದು ಕ್ಷಣ ಸಂತೋಷದ ಅವಿಸ್ಮರಣೀಯ ಅನುಭವ. ನಿಷ್ಕಲ್ಮಶ, ಮಗುವಿನಂತಹ ಮನಸ್ಸು ಅವರದು'' ಎಂದು ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅವರು ವಿಷ್ಣುವರ್ಧನ್ ಅವರನ್ನು ಸ್ಮರಿಸಿದ್ದಾರೆ.

ಅವರಿಬ್ಬರೂ ಸದಾ ಅಮರ
''ಅಂಬಿಗೆ ವಿಷ್ಣು ಕೇವಲ ಸ್ನೇಹಿತರಾಗಿರಲಿಲ್ಲ, ಅವರ ಪ್ರಾಣವೇ ಆಗಿದ್ದರು. ಅವರಿಬ್ಬರೂ ಸದಾ ಅಮರ. ನಮ್ಮ ಪ್ರೀತಿಯ ವಿಷ್ಣುವಿಗೆ ಹುಟ್ಟು ಹಬ್ಬದ ಶುಭಾಶಯಗಳು'' ಎಂದು ಸುಮಲತಾ ಶುಭಕೋರಿದ್ದಾರೆ. ಜೊತೆಗೆ ವಿಷ್ಣುವರ್ಧನ್, ಅಂಬರೀಶ್ ಅವರು ಆತ್ಮೀಯವಾಗಿದ್ದ ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ದರ್ಶನ್ ಶುಭಾಶಯ
''ಅಭಿನಯ ಭಾರ್ಗವ, ನಮ್ಮೆಲರ ನಲ್ಮೆಯ ಸಾಹಸ ಸಿಂಹ ಡಾ|| ವಿಷ್ಣು ಸರ್ ರವರ 70ನೇ ವರ್ಷದ ಹುಟ್ಟುಹಬ್ಬದ ಸವಿನೆನಪಿನಲ್ಲಿ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು'' ಎಂದು ಟ್ವೀಟ್ ಮಾಡಿದ್ದಾರೆ.

ಸತೀಶ್ ನೀನಾಸಂ
''ಲೆಕ್ಕವಿಲ್ಲದಷ್ಟು ನಿಮ್ಮ ಹಾಡುಗಳು ನನ್ನ ಅಚ್ಚುಮೆಚ್ಚು,ಬಾಲ್ಯದಿಂದ ನಿಮ್ಮೆಲ್ಲ ಸಿನಿಮಾಗಳು ನಮಗೆ ಟ್ರೆಂಡು...'' ಎಂದು ನಟ ಸತೀಶ್ ನೀನಾಸಂ ವಿಶ್ ಮಾಡಿದ್ದಾರೆ.


Click it and Unblock the Notifications











