ಹೆಸರು ಹೇಳದೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸುಮಲತಾ ವಾಗ್ದಾಳಿ
ಸಂಸದೆ ಸುಮಲತಾ-ಸಂಸದ ಪ್ರತಾಪ್ ಸಿಂಹ ನಡುವಿನ ಶೀಥಲ ಸಮರ ಮುಂದುವರೆದಿದೆ. ಇಂದು (ನವೆಂಬರ್ 24) ಮದ್ದೂರಿನ ಹೊಟ್ಟೆಗೌಡನ ದೊಡ್ಡಿಯಲ್ಲಿ ನಡೆದ ಅಂಬಿ ಗುಡಿ ಅನಾವರಣ ಕಾರ್ಯಕ್ರಮದಲ್ಲಿ ಸುಮಲತಾ ಅವರು ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದ್ದಾರೆ.
Recommended Video
''ಅಂಬಿ ಹೆಸರು ಹೇಳದೆ ಮಾತನಾಡಲು ಬರುವುದಿಲ್ಲ'' ಎಂದಿದ್ದವರಿಗೆ ಹೇಳುತ್ತಿದ್ದೇನೆ, ನಾನು ಅಂಬಿ ಹೆಸರು ಯಾಕೆ ಬಳಸಬಾರದು, ನನ್ನ ಹೆಸರಲ್ಲೇ ಅಂಬಿ ಹೆಸರಿದೆ' ಎಂದರು ಅಬ್ಬರಿಸಿದರು ಸುಮಲತಾ.
'ಅಂಬಿ ಹೆಸರೇ ನನ್ನ ಸ್ಫೂರ್ತಿ, ಅಂಬರೀಶ್ ಹೆಸರೇ ನನ್ನ ಧೈರ್ಯ' ಎಂದ ಸುಮಲತಾ ಪರೋಕ್ಷವಾಗಿ ಪ್ರತಾಪ್ ಸಿಂಹ ಹೇಳಿಕಗೆ ಟಾಂಗ್ ನೀಡಿದರು.

ಮಂಡ್ಯ ಸಂಸದೆ ಸುಮಲತಾ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಏನೇ ಕೆಲಸ ಇದ್ದರೂ ನನ್ನ ಬಳಿ ಹೇಳಿ ಎಂದು ಪ್ರತಾಪ್ ಸಿಂಹ ಫೋನಿನಲ್ಲಿ ಹೇಳುತ್ತಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಇದಕ್ಕೆ ಸಂಸದೆ ಸುಮಲತಾ, 'ಅಂಬರೀಶ್ ಇದ್ದಾಗ ತುಟಿ ಬಿಚ್ಚಲು ಹೆದರುತ್ತಿದ್ದವರೆಲ್ಲಾ ಈಗ ಮಾತನಾಡುತ್ತಿದ್ದಾರೆ' ಎಂದು ಸುಮಲತಾ ಹೇಳಿದ್ದರು.
ಅಂಬರೀಶ್ ಅವರ ಎರಡನೇ ಪುಣ್ಯಸ್ಮರಣೆಯಾದ ಇಂದು ಸಂಸದ ಪ್ರತಾಪ್ ಸಿಂಹ ಇಂದು ಅಂಬರೀಶ್ ಅವರನ್ನು ನೆನೆಸಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications











