Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಷಿಕೇಶದಲ್ಲಿ ಶವವಾಗಿ ಪತ್ತೆಯಾದ ಬಾಲನಟ ತೇಜ
ರಿಷಿಕೇಶದಲ್ಲಿನ ಸಾಯಿಘಾಟ್ ಬಳಿ ಆತನ ಮೃತದೇಹ ಪತ್ತೆಯಾಗಿದೆ. ಪಂಜಾಬ್ ನ ಅಮೃತಸರದ ಮಿರಿಪಿರಿ ಅಕಾಡೆಮಿಯಲ್ಲಿ ತೇಜ ಪಿಯುಸಿ ಮೊದಲನೇ ವರ್ಷ ಓದುತ್ತಿದ್ದಾರೆ. ಮಾರ್ಚ್ 5ರಂದು ಕಾಲೇಜಿನ 25 ಮಂದಿ ತಂಡದೊಂದಿಗೆ ರಿಷಿಕೇಶ್ ಗೆ ಪ್ರವಾಸಕ್ಕೆಂದು ಹೋಗಿದ್ದರು.
ಆ ಸಂದರ್ಭದಲ್ಲಿ ಅವರು ಗಂಗಾನದಿಯಲ್ಲಿ ಕಾಣೆಯಾಗಿದ್ದರು. ಆತನ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿದೆ. ಕಡೆಗೆ ಇಂದು (ಮಾ.12) ತೇಜ ಮೃತದೇಹ ಪತ್ತೆಯಾಗಿದೆ. ಶವಪರೀಕ್ಷೆ ಬಳಿಕ ಆತನ ದೇಹವನ್ನು ಹೈದರಾಬಾದಿನಲ್ಲಿರುವ ಪೋಷಕರ ಕೈಗೆ ಒಪ್ಪಿಸಲಾಗುತ್ತದೆ.
ತೆಲುಗಿನ ಮುರಾರಿ, ಕಥಾನಾಯಕುಡು ಹಾಗೂ ರಾಮದಂಡು ಚಿತ್ರಗಳಲ್ಲಿ ತೇಜ ಅಭಿನಯಿಸಿದ್ದಾರೆ. ಇವರ ತಂದೆ ಎನ್ ಶ್ರೀಧರ್ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ದೊಡ್ಡ ನಟನಾಗಬೇಕು ಎಂದು ಕನಸು ಕಂಡಿದ್ದ ತೇಜ ಹಠಾತ್ ನಿಧನದಿಂದ ಪೋಷಕರ ಅಳಲು ಮುಗಿಲು ಮುಟ್ಟಿದೆ.
ಚಿರಂಜೀವಿ ಅಭಿನಯದ 'ಇಂದ್ರ' ಚಿತ್ರದಲ್ಲಿ ಬಾಲನಟನಾಗಿ ತೊಡೆತಟ್ಟಿದ್ದ ತೇಜ ಅವರ ಅಮೋಘ ಅಭಿನಯ ಇನ್ನೂ ಪ್ರೇಕ್ಷಕರ ಕಣ್ಣಿಗೆ ಕಟ್ಟಿದಂತಿದೆ. ಛೇ ಹೀಗಾಗಬಾರದಿತ್ತು. ವಿಧಿಯಾಟ ಎಂಥ ಘೋರ ಅಲ್ಲವೆ?