Just In
Don't Miss!
- Sports
ಐಪಿಎಲ್ 2021: ಸಿಎಸ್ಕೆ ಉಳಿಸಿಕೊಂಡಿರುವ, ಕೈ ಬಿಟ್ಟಿರುವ ಆಟಗಾರರ ಪಟ್ಟಿ
- Automobiles
ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್
- News
ಕೃಷಿ ಕಾಯ್ದೆಗಳ ಕಥೆ: ರೈತರಿಗೆ ಸಮಾಧಾನ ನೀಡದ "ಸಂಧಾನ" ಸಭೆಗಳ ಸಾಲು!
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 20ರ ಚಿನ್ನ, ಬೆಳ್ಳಿ ದರ
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಖ್ಯಾತ ಹಾಸ್ಯನಟ ಎಂ.ಎಸ್ ನಾರಾಯಣ ವಿಧಿವಶ
ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಎಂ.ಎಸ್ ನಾರಾಯಣ ಎಂದೇ ಖ್ಯಾತರಾಗಿದ್ದ ಮೈಲವರಪು ಸೂರ್ಯ ನಾರಾಯಣ (63) ಶುಕ್ರವಾರ (ಜ.23) ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಒಂದು ವಾರದಿಂದ ಹೈದರಾಬಾದಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಟ, ನಿರ್ದೇಶಕರಾಗಿಯೂ ಅವರು ಕೆಲಸ ಮಾಡಿದ್ದು ಹಾಸ್ಯನಟರಾಗಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದರು. ತೆಲುಗಿನ ಹಾಸ್ಯನಟರಲ್ಲಿ ತಮ್ಮದೇ ಆದಂತಹ ವರ್ಚಸ್ಸು ಇದ್ದಂತಹ ನಟ. ಇದುವರೆಗೂ ಅವರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ['ಬೆಟ್ಟದ ಹುಲಿ' ಖ್ಯಾತಿಯ ಕೆ ಜಾನಕಿರಾಮ್ ವಿಧಿವಶ]
ಬೆಳ್ಳಿಪರದೆಯ ಮೇಲೆ ಅವರ ಪ್ರವೇಶವಾಗುತ್ತಿದ್ದಂತೆ ಚಿತ್ರಮಂದಿರದಲ್ಲಿ ಹಾಸ್ಯದ ಹೊನಲು ಹರಿಯುತ್ತಿತ್ತು. ತಮ್ಮದೇ ಆದಂತಹ ಕಾಮಿಕ್ ಟೈಮಿಂಗ್ ಹಾಗೂ ಮುಖಭಾವನೆಯ ಚಮತ್ಕಾರಿಕ ಡೈಲಾಗ್ ಗಳಿಗೆ ಹೆಸರಾಗಿದ್ದರು. ಜನವರಿ 19ರಂದು ಹೃದಯಾಘಾತಕ್ಕೆ ಒಳಗಾಗಿದ್ದ ಅವರು ಆಂಧ್ರದ ಭೀಮವರಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಹೈದರಾಬಾದಿನ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ತೆಲುಗು ಚಿತ್ರರಂಗದಲ್ಲಿ ಬ್ರಹ್ಮಾನಂದಂ, ಸುನಿಲ್, ಧರ್ಮವರಪು ಸುಬ್ರಹ್ಮಣ್ಯಂನಂತಹ ಕಾಮಿಡಿ ನಟರ ದೊಡ್ಡ ಪರಂಪರೆಯೇ ಇದೆ. ಎಂಎಸ್ಎನ್ ನಿಧನದಿಂದ ಆ ಪರಂಪರೆಯ ಒಂದು ಕೊಂಡಿ ಕಳಚಿಬಿದ್ದಂತಾಗಿದೆ. 'ದೂಕುಡು' (ಕನ್ನಡದಲ್ಲಿ 'ಪವರ್ ***') ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಂಧ್ರಪ್ರದೇಶ ಸರ್ಕಾರದ ಪ್ರತಿಷ್ಠಿತ ನಂದಿ ಪ್ರಶಸ್ತಿಯನ್ನೂ ಪಡೆದ ಅತ್ಯುತ್ತಮ ಹಾಸ್ಯನಟ ನಾರಾಯಣ. [ಪವರ್ *** ಚಿತ್ರ ವಿಮರ್ಶೆ]
ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಅಪಾರ ಅಭಿಮಾನಿ ಬಳಗವನ್ನು ಎಂ.ಎಸ್ ನಾರಾಯಣ ಅಗಲಿದ್ದಾರೆ. ಒಬ್ಬ ಮಹಾನ್ ಹಾಸ್ಯನಟನನ್ನು ಕಳೆದುಕೊಂಡಿರುವ ಟಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ. ಕನ್ನಡದ ಸತ್ಯ ಇನ್ ಲವ್ ಚಿತ್ರದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ. (ಏಜೆನ್ಸೀಸ್)