ಸುಮಲತಾ ಸ್ಪರ್ಧೆಯಿಂದ ಚಿತ್ರರಂಗ ಇಬ್ಭಾಗ ಆಯ್ತಾ.? ಅಂಬಿ ಪತ್ನಿ ಹೇಳಿದ್ದೇನು?

Recommended Video

Lok Sabha Elections 2019 : : ಮಂಡ್ಯದಲ್ಲಿ ಅಂಬಿ ಪತ್ನಿ ಶಕ್ತಿ ಪ್ರದರ್ಶನ | FILMIBEAT KANNADA

ಚಿತ್ರರಂಗದಲ್ಲಿ ಏನೇ ಸಮಸ್ಯೆಯಾದರೂ ಅಂತಿಮವಾಗಿ ಅದನ್ನ ಬಗೆಹರಿಸುತ್ತಿದಿದ್ದು ರೆಬೆಲ್ ಸ್ಟಾರ್ ಅಂಬರೀಶ್. ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಅಂಬರೀಶ್ ಮನೆ ಒಂದು ರೀತಿ ಹೆಡ್ ಅಫೀಸ್ ಆಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಅಂಬಿ ಇರೋವರೆಗೂ ಒಗ್ಗಟ್ಟಾಗಿದ್ದ ಕನ್ನಡ ಚಿತ್ರರಂಗ ಈಗ ಸುಮಲತಾ ಅವರ ಚುನಾವಣೆ ಸ್ಪರ್ಧೆಯಿಂದ ಇಬ್ಬಾಗವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ಮಾಡಿರುವುದರಿಂದ ಕೆಲವು ಕಲಾವಿದರಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂದು ಚರ್ಚೆಯಾಗ್ತಿದೆ. ಸುಮಲತಾ ಅವರಿಗೆ ಬೆಂಬಲವಾಗಿ ದರ್ಶನ್ ಮತ್ತು ಯಶ್ ಮಾತ್ರ ನಿಂತಿದ್ದಾರೆ. ಉಳಿದವರು ಸುಮಲತಾ ಅವರಿಂದ ದೂರ ಉಳಿಯಲು ಅದೇ ಕಾರಣ ಎಂಬ ಊಹಾಪೋಹಗಳು ಹರಿದಾಡುತ್ತಿದೆ.

ಈ ಬಗ್ಗೆ ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅವರನ್ನ ಪ್ರಶ್ನಿಸಿದಾಗ, ಅವರು ಅದನ್ನ ತಳ್ಳಿ ಹಾಕಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಸಂವಾದಲ್ಲಿ ಮಾತನಾಡಿದ ಅಂಬಿ ಪತ್ನಿ ಚಿತ್ರರಂಗ ಇಬ್ಬಾಗವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ. ಮುಂದೆ ಓದಿ.....

ಇಂಡಸ್ಟ್ರಿ ಇಬ್ಭಾಗವಾಗಿಲ್ಲ

ಇಂಡಸ್ಟ್ರಿ ಇಬ್ಭಾಗವಾಗಿಲ್ಲ

ಮಾಧ್ಯಮ ಸಂವಾದಲ್ಲಿ ನಿಮ್ಮಿಂದ ಇಂಡಸ್ಟ್ರಿ ಇಬ್ಭಾಗವಾಯ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ 'ಇಂಡಸ್ಟ್ರಿ ಯಾವುದೇ ಕಾರಣಕ್ಕೂ ಇಬ್ಭಾಗವಾಗಿಲ್ಲ' ಎಂದು ಸ್ಪಷ್ಟನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರ 'ಚಿತ್ರರಂಗವನ್ನ ರಾಜಕೀಯಕ್ಕೆ ಹೋಲಿಸುವುದು ಸರಿಯಿಲ್ಲ' ಎಂದು ಊಹಾಪೋಹಗಳಿಗೆ ತೆರೆ ಎಳೆದರು.

ಚಿತ್ರರಂಗದಲ್ಲಿ ಪಕ್ಷ ಇಲ್ಲ

ಚಿತ್ರರಂಗದಲ್ಲಿ ಪಕ್ಷ ಇಲ್ಲ

''ಚಿತ್ರರಂಗದಲ್ಲಿ ನಾವು ಪಕ್ಷಗಳನ್ನ ಮಾಡಿಕೊಂಡಿಲ್ಲ. ಅಲ್ಲಿ ಚುನಾವಣೆ ನಡೆಯಲ್ಲ. ಅದಕ್ಕೂ ಮಿಗಿಲಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವುದು. ಹಾಗಾಗಿ, ಇಲ್ಲಿ ಇಂಡಸ್ಟ್ರಿಯಲ್ಲಿ ಭಿನ್ನಾಭಿಪ್ರಾಯವಾಗಿದೆ ಎಂಬ ಮಾತೇ ಬರಲ್ಲ'' ಎಂದು ಹೇಳುವ ಮೂಲಕ ಇದೆಲ್ಲಾ ವದಂತಿಗಳು ಅಷ್ಟೇ ಎಂದರು.

ಸುಮಲತಾ ಎದುರಾಳಿಯೂ ಚಿತ್ರರಂಗದವರೇ

ಸುಮಲತಾ ಎದುರಾಳಿಯೂ ಚಿತ್ರರಂಗದವರೇ

ಅಂದ್ಹಾಗೆ, ಈ ಪ್ರಶ್ನೆ ಮೂಡಲ ಕಾರಣ ಮಂಡ್ಯದಲ್ಲಿ ಸುಮಲತಾ ಎದುರು ಸ್ಪರ್ಧೆ ಮಾಡಿರುವುದು ನಿಖಿಲ್ ಕುಮಾರ್ ಕೂಡ ಒಬ್ಬ ನಟ. ಅವರ ತಂದೆ ಎಚ್ ಡಿ ಕುಮಾರಸ್ವಾಮಿ ಓರ್ವ ನಿರ್ಮಾಪಕರಾಗಿದ್ದಾರೆ. ಇಂಡಸ್ಟ್ರಿಯಲ್ಲಿ ಕೆಲವು ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಜೆಡಿಎಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಇದು ಸಹಜವಾಗಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎಂದು ಹೇಳಲಾಗ್ತಿದೆ.

ಸುದೀಪ್ ಬರಲ್ಲ, ಶಿವಣ್ಣನೂ ಬರಲ್ಲ

ಸುದೀಪ್ ಬರಲ್ಲ, ಶಿವಣ್ಣನೂ ಬರಲ್ಲ

ಹಾಗ್ನೋಡಿದ್ರೆ, ಕಿಚ್ಚ ಸುದೀಪ್ ಅವರು ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡ್ತಾರೆ ಎಂಬ ಮಾತು ಜೋರಾಗಿತ್ತು. ಆದ್ರೆ, ಸುಮಲತಾಗೆ ಶುಭಕೋರಿದ ಸುದೀಪ್ ಪ್ರಚಾರಕ್ಕೆ ಬರಲ್ಲ ಎಂದುಬಿಟ್ಟರು. ಅದೇ ರೀತಿ ಶಿವರಾಜ್ ಕುಮಾರ್ ಕೂಡ ಪ್ರಚಾರಕ್ಕೆ ಬರ್ತಾರೆ ಎಂಬ ನಿರೀಕ್ಷೆ ಇತ್ತು. ಕೊನೆಗೆ ಶಿವಣ್ಣ, ಪುನೀತ್ ರಾಜ್ ಕುಮಾರ್ ನಾವು ಬರಲ್ಲ ಎಂದರು. ಅಲ್ಲಿಗೆ ಈ ಅಂತೆ-ಕಂತೆಗಳಿಗೆ ಮತ್ತಷ್ಟು ಜೀವ ಬಂತು. ಆದ್ರೀಗ, ಅಂಬರೀಶ್ ಪತ್ನಿ ಈ ರೀತಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದ್ದಾರೆ.

More from Filmibeat

English summary
'there is no differential in film industry' said sumalatha she has contest independent candidate in mandya lok sabha election.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X