Don't Miss!
- News 2024ರ ಲೋಸಕಭೆ ಚುನಾವಣೆಗೆ ಮತ ಹಾಕುವುದು ಹೇಗೆ?
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರ್ಜುನ್ ಸರ್ಜಾ ಚಿತ್ರದಲ್ಲಿ ಪಾಂಡುರಂಗ ವಿಠಲ ಜಹಾಂಗೀರ್
ಈ ಚಿತ್ರಕ್ಕೆ ಜೀ ಕನ್ನಡ ವಾಹಿನಿಯ 'ಪಾಂಡುರಂಗ ವಿಠಲ' ಕಾಮಿಡಿ ಸೀರಿಯಲ್ ನ ಮುಖ್ಯ ಕಲಾವಿದ ಎಂ.ಎಸ್.ಜಹಾಂಗೀರ್ ಆರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಹಾಸ್ಯ ಧಾರಾವಾಹಿಗಳನ್ನು ನೋಡಿರುವ ಸರ್ಜಾ ಅವರು ಸ್ವತಃ ಕರೆ ಮಾಡಿ ತಮ್ಮ ಚಿತ್ರದಲ್ಲಿ ನಟಿಸುವಂತೆ ಆಹ್ವಾಹಿಸಿರುವುದು ವಿಶೇಷ.
ಇಷ್ಟು ದಿನ ಕಿರುತೆರೆಯಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ಜಹಾಂಗೀರ್ ಅವರು ಇದೀಗ ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ. ಅರ್ಜುನ್ ಸರ್ಜಾ ಚಿತ್ರದಲ್ಲಿ ಆಫರ್ ಸಿಕ್ಕ ಬಗ್ಗೆ ಜಹಾಂಗೀರ್ ಹೇಳಿದ್ದನ್ನು ಅವರದೇ ಮಾತುಗಳಲ್ಲಿ ಕೇಳಿ.
ಮೊದಲು ಸರ್ ಫೋನ್ ಮಾಡಿದರು. ಯಾರು ಎಂದು ಗೊತ್ತಾಗದೆ ಪಿಕ್ ಮಾಡಲಿಲ್ಲ. ಬಳಿಕ ಮೆಸೇಜ್ ಮಾಡಿದರು. ನಾನಪ್ಪಾ ಅರ್ಜುನ್ ಸರ್ಜಾ ಫೋನ್ ರಿಸೀವ್ ಮಾಡು ಎಂದರು. ತಮ್ಮ ಚಿತ್ರದಲ್ಲಿ ಅಭಿನಯಿಸುವಂತೆ ಕೇಳಿದರು. ಕೂಡಲೆ ಒಪ್ಪಿಕೊಂಡೆ ಎಂದರು.
ನನಗೆ ಮೊದಲೇ ಕಲರ್ ಇಲ್ಲ, ಲುಕ್ ಇಲ್ಲ. ತಲೆಯಲ್ಲಿ ಸ್ವಲ್ಪ ಕೂದಲು ಇದೆ ಅಷ್ಟೇ. ಇದೂ ಹೋದರೆ ಏನೇನು ಇರಲ್ಲ ಎಂದರು. ಒಟ್ಟಾರೆಯಾಗಿ ಈ ಚಿತ್ರದಲ್ಲಿ ಅವಕಾಶ ಸಿಕ್ಕಿರುವ ಬಗ್ಗೆ ಸಹಜವಾಗಿಯೇ ಅವರಿಗೆ ಖುಷಿಯಾಗಿತ್ತು. (ಒನ್ಇಂಡಿಯಾ ಕನ್ನಡ)