ಉದಯ ಟಿವಿ 2012 ಪ್ರಶಸ್ತಿ ಪ್ರಕಟ: ವಿನ್ನರ್ಸ್ ಲಿಸ್ಟ್
ಬೆಂಗಳೂರು ಅರಮನೆ ಮೈದಾನದಲ್ಲಿ ಭಾನುವಾರ (ಫೆ 3) ನಡೆದ ವರ್ಣರಂಜಿತ ಸಮಾರಂಭದಲ್ಲಿ 2012ರ ಸಾಲಿನ ಕನ್ನಡ ಚಿತ್ರಗಳಲ್ಲಿ ವಿವಿಧ ವಿಭಾಗಗಳಿಗೆ ಉದಯ ಟಿವಿ ನೀಡುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ಯಾಂಡಲ್ ವುಡ್ಡಿನ ಹಿರಿಯ ಮತ್ತು ಕಿರಿಯ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರಂಭಕ್ಕೆ ಮತ್ತಷ್ಟು ಕಳೆ ತಂದರು.
ವಿ ರವಿಚಂದ್ರನ್, ಶ್ರಿಯಾ ಶರನ್, ಉಪೇಂದ್ರ, ಗಣೇಶ್, ಎಸ್ ವಿ ರಾಜೇಂದ್ರ ಸಿಂಗ್ ಬಾಬು, ದ್ವಾರಕೀಶ್, ಪುನೀತ್ ರಾಜಕುಮಾರ್, ರಾಧಿಕಾ ಪಂಡಿತ್, ಶಿವರಾಜ್ ಕುಮಾರ್ ಮುಂತಾದ ಖ್ಯಾತ ಕಲಾವಿದರು ಸಮಾರಂಭಕ್ಕೆ ಸಾಕ್ಷಿಯಾದರು.
ಕಲಾ ಜಗತ್ತಿನ ಅಪ್ರತಿಮ ಸೇವೆಗಾಗಿ ಪಿ ಬಿ ಶ್ರೀನಿವಾಸ್, ದ್ವಾರಕೀಶ್, ಲಕ್ಷ್ಮಿ, ಎಸ್ ಜಾನಕಿ ಅವರಿಗೆ "Life Time Achivement Award" ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ಅತ್ಯುತ್ತಮ ನಟ, ನಟಿ, ಚಿತ್ರ, ಸಂಗೀತ ನಿರ್ದೇಶಕ ಮುಂತಾದ ಪ್ರಶಸ್ತಿ ಯಾರಿಗೆ ಒಲಿಯಿತು ? ಸ್ಲೈಡ್ ಕ್ಲಿಕ್ಕಿಸಿ
ಉದಯ ಟಿವಿ ಪ್ರಶಸ್ತಿ ನಿಮ್ಮ ಆಯ್ಕೆ ಕೂಡಾ ಇದೇ ಆಗಿತ್ತೇ ಅಥವಾ ನಿಮ್ಮ ನಿರೀಕ್ಷೆ ಬೇರೆ ಇತ್ತೇ?
ಉದಯ ಟಿವಿ ಪ್ರಶಸ್ತಿ ಪ್ರದಾನ ಸಮಾರಂಭದ ಗ್ಯಾಲರಿ

ಅತ್ಯುತ್ತಮ ನೃತ್ಯ ಸಂಯೋಜಕ
ಇಮ್ರಾನ್ ಸರ್ದಾರಿಯಾ (ಅಣ್ಣಾಬಾಂಡ್)
ಸ್ಪರ್ಧೆಯಲ್ಲಿದ್ದವರು
ಮುರುಳಿ (ಗೋವಿಂದಾಯ ನಮ:)
ಹರ್ಷ (ಚಿಂಗಾರಿ)
ಪಾಪ್ಪಿ ಲಕ್ಷ್ಮಿ (ರೋಮಿಯೊ)
ಕಾಳಿ (ಅಲೆಮಾರಿ)

ಅತ್ಯುತ್ತಮ ಸಾಹಸ ನಿರ್ದೇಶಕ
ರವಿ ವರ್ಮಾ (ಅಣ್ಣಾ ಬಾಂಡ್)
ಸ್ಪರ್ಧೆಯಲ್ಲಿದ್ದವರು
ರವಿವರ್ಮಾ (ಚಿಂಗಾರಿ, ಸಂಗೊಳ್ಳಿ ರಾಯಣ್ಣ, ಶಕ್ತಿ)
ಪಳನಿರಾಜ್ (ಭೀಮಾ ತೀರದಲ್ಲಿ, ಶಕ್ತಿ)
ರಾಮ್ ಲಕ್ಷಣ್ ( ಶಕ್ತಿ)

ಅತ್ಯುತ್ತಮ ಸಿನಿಮಾಟೋಗ್ರಾಫರ್
ಎಚ್ ಸಿ ವೇಣು (ಚಿಂಗಾರಿ)
ಸ್ಪರ್ಧೆಯಲ್ಲಿದ್ದವರು
ಸಿನಿಟೆಕ್ ಸೂರಿ (ಕಾಲಾಯ ತಸ್ಮೈ ನಮ:)
ರಮೇಶ್ ಬಾಬು (ಸಂಗೊಳ್ಳಿ ರಾಯಣ್ಣ)
ಎಚ್ ಸಿ ವೇಣು (ಕಠಾರಿವೀರ ಸುರಸುಂದರಾಂಗಿ)
ಸತ್ಯ ಹೆಗ್ಡೆ (ಅಣ್ಣಾಬಾಂಡ್)

ಅತ್ಯುತ್ತಮ ಸಂಕಲನಕಾರ
ರಾಜ್ ಕೀರ್ತಿ (ಕಲ್ಪನಾ)
ಸ್ಪರ್ಧೆಯಲ್ಲಿದ್ದವರು
ದೀಪು ಎಸ್ ಕುಮಾರ್ (ಸಂಗೊಳ್ಳಿ ರಾಯಣ್ಣ, ಅಣ್ಣಾಬಾಂಡ್)
ಕೆ ಎಂ ಪ್ರಕಾಶ್ (ಅಲೆಮಾರಿ)
ಸನತ್ ಕುಮಾರ್ (ಡ್ರಾಮಾ)

ಅತ್ಯುತ್ತಮ ಸಂಭಾಷಣೆ
ಎಂ ಎಸ್ ರಮೇಶ್ ( ಭೀಮಾ ತೀರದಲ್ಲಿ)
ಸ್ಪರ್ಧೆಯಲ್ಲಿದ್ದವರು
ವಿಜಯ್ ಪ್ರಸಾದ್ (ಸಿದ್ಲಿಂಗು)
ಉಪೇಂದ್ರ (ಕಠಾರಿವೀರ ಸುರಸುಂದರಾಂಗಿ)
ಎ ಪಿ ಅರ್ಜುನ್ (ಅದ್ದೂರಿ)
ಅಗ್ನಿ ಶ್ರೀಧರ್ (ಎದೆಗಾರಿಕೆ)

ಅತ್ಯುತ್ತಮ ಸಾಹಿತ್ಯ
ಯೋಗರಾಜ್ ಭಟ್ (ಡ್ರಾಮಾ)
ಸ್ಪರ್ಧೆಯಲ್ಲಿದ್ದವರು
ಅರಸು (ಸಿದ್ಲಿಂಗು)
ಎ ಪಿ ಅರ್ಜುನ್ (ಅದ್ದೂರಿ)
ಯೋಗರಾಜ್ ಭಟ್ (ಅಣ್ಣಾಬಾಂಡ್)
ಕವಿರಾಜ್ (ರೋಮಿಯೊ)

ಅತ್ಯುತ್ತಮ ಗಾಯಕಿ
ಇಂದು ನಾಗರಾಜ್ (ಗೋವಿಂದಾಯ ನಮ:)
ಸ್ಪರ್ಧೆಯಲ್ಲಿದ್ದವರು
ಸುನಿತಾ ಭೋಪರಾಜ್ (ಕಠಾರಿವೀರ ಸುರಸುಂದರಾಂಗಿ)
ಶ್ರೇಯಾ ಘೋಷಾಲ್ (ರೋಮಿಯೊ, ಅಲೆಮಾರಿ)
ವಾಣಿ ಹರಿಕೃಷ್ಣ (ಅದ್ದೂರಿ)

ಅತ್ಯುತ್ತಮ ಗಾಯಕ
ಸಾಧು ಕೋಕಿಲಾ (ಎದೆಗಾರಿಕೆ)
ಸ್ಪರ್ಧೆಯಲ್ಲಿದ್ದವರು
ಹರಿಕೃಷ್ಣ (ಅದ್ದೂರಿ, ಅಣ್ಣಾಬಾಂಡ್, ಡ್ರಾಮಾ)
ಅರ್ಜುನ್ ಜನ್ಯಾ (Rambo)

ಅತ್ಯುತ್ತಮ ಖಳನಟ
ಸುಚೇಂದ್ರ ಪ್ರಸಾದ್ (ಭೀಮಾ ತೀರದಲ್ಲಿ)
ಸ್ಪರ್ಧೆಯಲ್ಲಿದ್ದವರು
ರವಿಶಂಕರ್ (ಶಿವಾ)
ಜಾಕಿ ಶ್ರಾಫ್ (ಅಣ್ಣಾಬಾಂಡ್)
ಚಸ್ವಾ (ಸಿದ್ಲಿಂಗು)
ದೇವ್ ಗಿಲ್ (ಸಾಗರ್)

ಅತ್ಯುತ್ತಮ ಸಂಗೀತ ನಿರ್ದೇಶಕ
ಹರಿಕೃಷ್ಣ (ಅದ್ದೂರಿ)
ಸ್ಪರ್ಧೆಯಲ್ಲಿದ್ದವರು
ಗುರುಕಿರಣ್ (ಗೋವಿಂದಾಯ ನಮ:)
ಅನೂಪ್ ಸೀಳನ್ (ಸಿದ್ಲಿಂಗು)
ಹರಿಕೃಷ್ಣ (ಡ್ರಾಮಾ)
ಅರ್ಜುನ ಜನ್ಯಾ (Rambo)

ಅತ್ಯುತ್ತಮ ನಿರ್ದೇಶಕ
ಎ ಪಿ ಅರ್ಜುನ್ (ಅದ್ದೂರಿ)
ಸ್ಪರ್ಧೆಯಲ್ಲಿದ್ದವರು
ಓಂ ಪ್ರಕಾಶ್ ರಾವ್ (ಭೀಮಾ ತೀರದಲ್ಲಿ)
ನಾಗಣ್ಣ (ಸಂಗೊಳ್ಳಿ ರಾಯಣ್ಣ)
ಯೋಗರಾಜ್ ಭಟ್ (ಡ್ರಾಮಾ)
ಸುಮನಾ ಕಿತ್ತೂರು (ಎದೆಗಾರಿಕೆ)

ಅತ್ಯುತ್ತಮ ಚಿತ್ರ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಸ್ಪರ್ಧೆಯಲ್ಲಿದ್ದ ಚಿತ್ರಗಳು
ಡ್ರಾಮಾ
ಎದೆಗಾರಿಕೆ
ಅದ್ದೂರಿ
ಭೀಮಾ ತೀರದಲ್ಲಿ

ಅತ್ಯುತ್ತಮ ನಟಿ
ರಾಧಿಕಾ ಪಂಡಿತ್ (ಅದ್ದೂರಿ)
ಸ್ಪರ್ಧೆಯಲ್ಲಿದ್ದವರು
ರಾಧಿಕಾ ಪಂಡಿತ್ (ಡ್ರಾಮಾ)
ರಮ್ಯಾ (ಕಠಾರಿವೀರ ಸುರಸುಂದರಾಂಗಿ)
ಭಾವನಾ (ಭಾಗೀರಥಿ)
ಪ್ರಿಯಾಮಣಿ (ಚಾರುಲತಾ)

ಅತ್ಯುತ್ತಮ ನಟ
ಉಪೇಂದ್ರ (ಕಲ್ಪನಾ)
ಸ್ಪರ್ಧೆಯಲ್ಲಿದ್ದವರು
ದರ್ಶನ್ (ಸಂಗೊಳ್ಳಿ ರಾಯಣ್ಣ)
ಯೋಗೀಶ್ (ಸಿದ್ಲಿಂಗು)
ವಿಜಯ್ (ಭೀಮಾ ತೀರದಲ್ಲಿ)
ಪುನೀತ್ ರಾಜಕುಮಾರ್ (ಅಣ್ಣಾ ಬಾಂಡ್)


Click it and Unblock the Notifications











