Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪೇಂದ್ರ ಅವರಿಗೆ ತುಂಬಾ ವಿಶಾಲ ಹೃದಯ ಇದೆಯಂತೆ
'ರಂಗಿತರಂಗ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಂಗಳೂರಿನ ಚೆಲುವೆ ಹೊಸ ಪ್ರತಿಭೆ ನಟಿ ಅವಂತಿಕಾ ಶೆಟ್ಟಿ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ 'ಕಲ್ಪನಾ-2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಇದೇ ಫಿಲ್ಮಿಬೀಟಲ್ಲಿ ನಾವು ನಿಮಗೆ ಹೇಳಿದ್ವಿ ತಾನೇ.
ಇದೀಗ ತಮಿಳಿನ ರಿಮೇಕ್ ಚಿತ್ರ 'ಕಲ್ಪನಾ-2' ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ನಟಿ ಅವಂತಿಕಾ ಶೆಟ್ಟಿ ಅವರು ಉಪೇಂದ್ರ ಅವರ ಜೊತೆ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವಂತಿಕಾ ಅವರು ಪರ್ತಕರ್ತೆಯ ಪಾತ್ರದಲ್ಲಿ ಮಿಂಚಿದ್ದಾರೆ.['ಕಲ್ಪನಾ 2' ಸಿನಿಮಾ ಉಪ್ಪಿಗೆ, ಬಿಗ್ ಚಾಲೆಂಜ್ ಅಂತೆ..!]
ತಮಿಳಿನಲ್ಲಿ ನಟಿ ತಾಪ್ಸಿ ಪನ್ನು ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಅವಂತಿಕಾ ಅವರು ಮಾಡುತ್ತಿದ್ದು, ಉಪೇಂದ್ರ ಅವರ ಜೊತೆಗೆ ಎರಡು ಹಂತಗಳ ಶೂಟಿಂಗ್ ಮುಗಿಸಿರುವ ನಟಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
'ನಾನಿನ್ನೂ ಪ್ರಿಯಾಮಣಿ ಅವರನ್ನು ಭೇಟಿ ಮಾಡಿಲ್ಲ, ಸದ್ಯಕ್ಕೆ ಚಿತ್ರೀಕರಣದ ಪಾತ್ರವೆಲ್ಲವೂ ಉಪೇಂದ್ರ ಅವರ ಜೊತೆಗಿತ್ತು. ಇಡೀ ಸೆಟ್ ನಲ್ಲಿ ಎಲ್ಲರೂ ಕನ್ನಡದಲ್ಲಿ ಮಾತನಾಡುತ್ತಿದ್ದರಿಂದ ನನಗೆ ಸಂವಹನ ಸ್ವಲ್ಪ ಕಷ್ಟ ಆಯ್ತು. 'ರಂಗಿತರಂಗ'ದಲ್ಲಾದರೆ ನಾನು ತುಳು ಮಾತನಾಡಿ ಬಚಾವಾದೆ' ಎಂದಿದ್ದಾರೆ.[ಉಪ್ಪಿ ಜೊತೆ 'ರಂಗಿ' ಬೆಡಗಿ ಅವಂತಿಕಾ ಶೆಟ್ಟಿ ಡ್ಯುಯೆಟ್ ಹಾಡ್ತಾರಾ?]
'ಈ ಪಾತ್ರ ಮಾಡುವುದು ಅಷ್ಟೇನೂ ಕಷ್ಟ ಆಗಲಿಲ್ಲ ಎನ್ನುವ ಅವಂತಿಕಾ ನಟ ಉಪೇಂದ್ರ ಅವರನ್ನು ಮನಸಾರೆ ಹೊಗಳಿದ್ದಾರೆ. 'ಉಪೇಂದ್ರ ಅವರು ವಿಶಾಲ ಹೃದಯಿ. ಚಿತ್ರೀಕರಣಕ್ಕೆ ಅವರು ಹೆಚ್ಚಿನ ಶ್ರಮ ವಹಿಸುತ್ತಾರೆ' ಎನ್ನುತ್ತಾರೆ.
ನಿರ್ದೇಶಕ ಅನಂತರಾಜು ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ಈ ಸಿನಿಮಾವನ್ನು ಅತ್ಯಂತ ಶೀಘ್ರದಲ್ಲಿ ಮುಗಿಸುವ ಆತುರದಲ್ಲಿದ್ದಾರೆ.