twitter
    For Quick Alerts
    ALLOW NOTIFICATIONS  
    For Daily Alerts

    'ವೆನಿಲ್ಲಾ' ಸಿನಿಮಾದ ಸಾಹಿತ್ಯ ಸ್ಪರ್ಧೆಯಲ್ಲಿ ಗೆದ್ದ 4 ಯುವ ಸಾಹಿತಿಗಳು

    By Naveen
    |

    ನಿರ್ದೇಶಕ ಜಯತೀರ್ಥ 'ಬ್ಯೂಟಿಫುಲ್ ಮನಸುಗಳು' ಸಿನಿಮಾದ ಯಶಸ್ಸಿನ ನಂತರ ಈಗ 'ವೆನಿಲ್ಲಾ' ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಪ್ರತಿ ಸಿನಿಮಾದಲ್ಲಿಯೂ ಯುವ ಚಿತ್ರ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಅವರು ಈ ಚಿತ್ರದಲ್ಲಿಯೂ ಆ ಕೆಲಸ ಮುಂದುವರೆಸಿದ್ದಾರೆ.

    'ವೆನಿಲ್ಲಾ' ಚಿತ್ರಕ್ಕಾಗಿ ವಿಶೇಷವಾಗಿ ಒಂದು ಸಾಹಿತ್ಯ ಸ್ಪರ್ಧೆ ಏರ್ಪಿಸಲಾಗಿತ್ತು. ಒಂದು ಸಣ್ಣ ಟ್ಯೂನ್ ನೀಡಿ ಬೀಟ್ ಸಾಂಗ್ ಬರೆಯಲು ಹೇಳಲಾಗಿತ್ತು. ಈ ಸ್ಪರ್ಥೆಯಲ್ಲಿ 1400ಕ್ಕೂ ಹೆಚ್ಚು ಜನರು ಭಾಗವಯಿಸಿದ್ದರು. ಇದೀಗ ಇವರಲ್ಲಿ 4 ಜನರನ್ನು ವಿಜೇತರಾಗಿ ಆಯ್ಕೆ ಮಾಡಲಾಗಿದೆ.

    Vanilla kannada movie lyrics writing contest winners

    'ವೆನಿಲ್ಲಾ' ಸಿನಿಮಾದ ಸಾಹಿತ್ಯ ಸ್ಪರ್ಧೆಯಲ್ಲಿ ಜಯಂತ್ ಕುಮಾರ್ ಟಿ.ವಿ, ವಿನಾಯಕ್ ಅರಳಸುಳಿ, ಅರ್ಜುನ್ ಲೂಯಿಸ್ ಮತ್ತು ಅರ್ಪಿತ.ಕೆ ಈ ನಾಲ್ಕು ಯುವ ಸಾಹಿತಿಗಳು ವಿಜೇತರಾಗಿದ್ದಾರೆ. ಈ ಆಯ್ಕೆಯ ಪ್ರಕ್ರಿಯೆಯನ್ನು ಖ್ಯಾತ ಸಾಹಿತಿಗಳಾದ ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಎ.ಪಿ.ಅರ್ಜುನ್ ಮಾಡಿದ್ದರು. ನಾಲ್ಕು ವಿಜೇತರ ಪೈಕಿ ಜಯಂತ್ ಕುಮಾರ್ ಟಿ.ವಿ ಮತ್ತು ಅರ್ಜುನ್ ಲೂಯಿಸ್ ಅವರ ಸಾಹಿತ್ಯವನ್ನು ಚಿತ್ರದ ಆಡಿಯೋದಲ್ಲಿ ಬಳಸಿಕೊಳ್ಳಲಾಗಿದೆ.

    Vanilla kannada movie lyrics writing contest winners

    ಈ ಸ್ಪರ್ಧೆಯ ಬಗ್ಗೆ ಮಾತನಾಡಿರುವ ನಿರ್ದೇಶಕ ಜಯತೀರ್ಥ ''ನನ್ನ ಪ್ರಕಾರ ಸಾಹಿತ್ಯ ಬರೆದ 1400 ಜನರು ಕೂಡ ವಿಜೇತರು. ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿಯೂ ಪೆನ್ ಹಿಡಿದು ಸಾಹಿತ್ಯ ಬರೆಯಲು ಕುಳಿತುಕೊಳ್ಳುವ ಮನಸ್ಥಿತಿ ಇದೆಯಲ್ಲ.. ಆ ಮನಸ್ಥಿತಿಯೇ ಗೆಲುವಿನ ಸಂಕೇತ. ಹಾಗಾಗಿ ಎಲ್ಲರಿಗೂ ಅಭಿನಂದನೆ.'' ಎಂದು ಹೇಳಿದ್ದಾರೆ.

    English summary
    'Beautiful Manasugalu' movie fame director Jayatheertha's 'Vanilla' kannada movie lyrics writing contest winners announced.
    Thursday, January 4, 2018, 9:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X