Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ವೆನಿಲ್ಲಾ' ಸಿನಿಮಾದ ಸಾಹಿತ್ಯ ಸ್ಪರ್ಧೆಯಲ್ಲಿ ಗೆದ್ದ 4 ಯುವ ಸಾಹಿತಿಗಳು
ನಿರ್ದೇಶಕ ಜಯತೀರ್ಥ 'ಬ್ಯೂಟಿಫುಲ್ ಮನಸುಗಳು' ಸಿನಿಮಾದ ಯಶಸ್ಸಿನ ನಂತರ ಈಗ 'ವೆನಿಲ್ಲಾ' ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಪ್ರತಿ ಸಿನಿಮಾದಲ್ಲಿಯೂ ಯುವ ಚಿತ್ರ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಅವರು ಈ ಚಿತ್ರದಲ್ಲಿಯೂ ಆ ಕೆಲಸ ಮುಂದುವರೆಸಿದ್ದಾರೆ.
'ವೆನಿಲ್ಲಾ' ಚಿತ್ರಕ್ಕಾಗಿ ವಿಶೇಷವಾಗಿ ಒಂದು ಸಾಹಿತ್ಯ ಸ್ಪರ್ಧೆ ಏರ್ಪಿಸಲಾಗಿತ್ತು. ಒಂದು ಸಣ್ಣ ಟ್ಯೂನ್ ನೀಡಿ ಬೀಟ್ ಸಾಂಗ್ ಬರೆಯಲು ಹೇಳಲಾಗಿತ್ತು. ಈ ಸ್ಪರ್ಥೆಯಲ್ಲಿ 1400ಕ್ಕೂ ಹೆಚ್ಚು ಜನರು ಭಾಗವಯಿಸಿದ್ದರು. ಇದೀಗ ಇವರಲ್ಲಿ 4 ಜನರನ್ನು ವಿಜೇತರಾಗಿ ಆಯ್ಕೆ ಮಾಡಲಾಗಿದೆ.
'ವೆನಿಲ್ಲಾ' ಸಿನಿಮಾದ ಸಾಹಿತ್ಯ ಸ್ಪರ್ಧೆಯಲ್ಲಿ ಜಯಂತ್ ಕುಮಾರ್ ಟಿ.ವಿ, ವಿನಾಯಕ್ ಅರಳಸುಳಿ, ಅರ್ಜುನ್ ಲೂಯಿಸ್ ಮತ್ತು ಅರ್ಪಿತ.ಕೆ ಈ ನಾಲ್ಕು ಯುವ ಸಾಹಿತಿಗಳು ವಿಜೇತರಾಗಿದ್ದಾರೆ. ಈ ಆಯ್ಕೆಯ ಪ್ರಕ್ರಿಯೆಯನ್ನು ಖ್ಯಾತ ಸಾಹಿತಿಗಳಾದ ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಎ.ಪಿ.ಅರ್ಜುನ್ ಮಾಡಿದ್ದರು. ನಾಲ್ಕು ವಿಜೇತರ ಪೈಕಿ ಜಯಂತ್ ಕುಮಾರ್ ಟಿ.ವಿ ಮತ್ತು ಅರ್ಜುನ್ ಲೂಯಿಸ್ ಅವರ ಸಾಹಿತ್ಯವನ್ನು ಚಿತ್ರದ ಆಡಿಯೋದಲ್ಲಿ ಬಳಸಿಕೊಳ್ಳಲಾಗಿದೆ.
ಈ ಸ್ಪರ್ಧೆಯ ಬಗ್ಗೆ ಮಾತನಾಡಿರುವ ನಿರ್ದೇಶಕ ಜಯತೀರ್ಥ ''ನನ್ನ ಪ್ರಕಾರ ಸಾಹಿತ್ಯ ಬರೆದ 1400 ಜನರು ಕೂಡ ವಿಜೇತರು. ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿಯೂ ಪೆನ್ ಹಿಡಿದು ಸಾಹಿತ್ಯ ಬರೆಯಲು ಕುಳಿತುಕೊಳ್ಳುವ ಮನಸ್ಥಿತಿ ಇದೆಯಲ್ಲ.. ಆ ಮನಸ್ಥಿತಿಯೇ ಗೆಲುವಿನ ಸಂಕೇತ. ಹಾಗಾಗಿ ಎಲ್ಲರಿಗೂ ಅಭಿನಂದನೆ.'' ಎಂದು ಹೇಳಿದ್ದಾರೆ.