Don't Miss!
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- News ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ಕಾರಣ ಏನು?
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮರಿ ಸಿಂಹ ದತ್ತು ಪಡೆದು ತಂದೆ ಹೆಸರಿಟ್ಟ ನಟ ವಸಿಷ್ಠ ಸಿಂಹ
ಸಿನಿಮಾ ಕಲಾವಿದರು ಪ್ರಾಣಿಗಳನ್ನು ದತ್ತು ಪಡೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಲಾವಿದರು ಪ್ರಾಣಿಗಳನ್ನು ದತ್ತು ಪಡೆದು ಜಾಗೃತಿ ಮೂಡಿಸುವುದಲ್ಲದೇ ಮಾದರಿಯಾಗುತ್ತಿದ್ದಾರೆ.
ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದ್ದು ನಟ ವಸಿಷ್ಠ ಸಿಂಹ. ಹೊಸ ವರ್ಷದ ಪ್ರಯುಕ್ತ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದ ವಸಿಷ್ಠ ಮೂರು ತಿಂಗಳ ಸಿಂಹದ ಮರಿಯನ್ನು ದತ್ತು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಣೇಶ ಹಬ್ಬದಂದು 'ಪಾರ್ವತಿ' ದತ್ತು ಪಡೆದ ನಟ ಶಿವರಾಜ್ ಕುಮಾರ್
ವಿಶೇಷ ಅಂದ್ರೆ ಈ ಸಿಂಹದ ಮರಿಗೆ ತಮ್ಮ ತಂದೆಯ ಹೆಸರು 'ವಿಜಯ ನರಸಿಂಹ' ಎಂದು ನಾಮಕರಣ ಮಾಡಿದ್ದಾರೆ. ಒಂದು ವರ್ಷಗಳ ಅವಧಿಗೆ ಸಿಂಹದ ಮರಿಯನ್ನು ವಸಿಷ್ಠ ದತ್ತು ಪಡೆದುಕೊಂಡಿದ್ದಾರೆ.
ಸಿಂಹದ ಮರಿಯನ್ನು ವಸಿಷ್ಠ ಸಿಂಹ ದತ್ತು ಪಡೆದ ವಿಚಾರ ತಿಳಿಯುತ್ತಿದ್ದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ವಸಿಷ್ಠ ಸಿಂಹ ಸಹ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲೂ ಸಿನಿಮಾ ಮಾಡ್ತಿದ್ದಾರೆ. 'ಓದೆಲ ರೈಲ್ವೇ ಸ್ಟೇಷನ್' ಎಂಬ ತೆಲುಗು ಚಿತ್ರದಲ್ಲಿ ವಸಿಷ್ಠ ನಾಯಕನಾಗಿದ್ದು, ಹೊಸ ವರ್ಷದ ಪ್ರಯುಕ್ತ ಪೋಸ್ಟರ್ ಸಹ ಬಿಡುಗಡೆಯಾಗಿದೆ.
ಕರಿ ಚಿರತೆ ದತ್ತು ಪಡೆದ 'ಬಜಾರ್' ನಟ ಧನ್ವೀರ್
Recommended Video
ವಸಿಷ್ಠ ಸಿಂಹ ಅವರಿಗೂ ಮೊದಲು ನಟ ಧನ್ವೀರ್ ಗೌಡ ಮೈಸೂರು ಮೃಗಾಲಯದಲ್ಲಿ ಕರಿ ಚಿರತೆ ದತ್ತು ಪಡೆದಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಮೈಸೂರಿನ ಮೃಗಾಯಲದಲ್ಲಿ ಪಾರ್ವತಿ ಎಂಬ ಆನೆ ಮರಿಯನ್ನು ದತ್ತು ಪಡೆದಿದ್ದರು.