ಸಾಹಿತ್ಯ-ನಾಟಕ ರಂಗದ ಮೂಗಿಗೆ ತುಪ್ಪ ಸವರಿದ ಯಡಿಯೂರಪ್ಪ ಬಜೆಟ್

ಸಿಎಂ ಹಾಗೂ ಸ್ವತಃ ಹಣಕಾಸು ಸಚಿವರೂ ಆಗಿರುವ ಯಡಿಯೂರಪ್ಪ ಅವರು ಇಂದು ಕರ್ನಾಟಕ ರಾಜ್ಯ ಬಜೆಟ್ 2021-22 ಅನ್ನು ವಿಧಾನಸೌಧದಲ್ಲಿ ಮಂಡಿಸಿದರು.

ಯಥಾವತ್ತು ಮಠಗಳು, ಜಾತಿ ಮಂಡಳಿಗಳು, ನಿಗಮಗಳಿಗೆ ಕೋಟ್ಯಂತರ ಹಣವನ್ನು ಬಜೆಟ್‌ನಲ್ಲಿ ಮೀಸಲಿಡಲಾಯಿತು. ಶಿಕ್ಷಣ, ಆರೋಗ್ಯ ಇನ್ನಿತರೆ ಪ್ರಮುಖ ಅಗತ್ಯಗಳಿಗೆ ಅನುದಾನಗಳನ್ನು ನೀಡಲಾಯಿತು. ಆದರೆ ಕೆಲವು ಕ್ಷೇತ್ರಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರೆ ಕೆಲವಕ್ಕೆ ಮೂಗಿಗೆ ತುಪ್ಪು ಸವರಲಾಯಿತು.

ಚಿತ್ರೋದ್ಯಮವನ್ನು ಈ ಬಜೆಟ್‌ನಲ್ಲಿ ನಿರ್ಮಲಕ್ಷಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಉಳಿದಂತೆ ಸಾಹಿತ್ಯ ಹಾಗೂ ನಾಟಕ ರಂಗಕ್ಕೆ ನಾಮ್‌ಕೆ ವಾಸ್ತೆ ಕಿರು ಯೋಜನೆಗಳನ್ನು ನೀಡಲಾಗಿದೆ.

Very Less Attention To Literature And Drama In Karantana Budget 2021

ಸಾಹಿತಿ ಎಸ್‌.ಎಲ್.ಭೈರಪ್ಪ ಅವರ ಕೃತಿ 'ಪರ್ವ' ಅನ್ನು ರಂಗಕ್ಕೆ ಅಳವಡಿಸಿ ರಾಜ್ಯದಾದ್ಯಂತ ವಿವಿಧ ರಂಗತಂಡಗಳ ಮೂಲಕ ಪ್ರದರ್ಶಿಸಲು ಒಂದು ಕೋಟಿ ರುಪಾಯಿ ಹಣವನ್ನು ನೀಡುವುದಾಗಿ ಬಜೆಟ್‌ನಲ್ಲಿ ಹೇಳಿದರು ಯಡಿಯೂರಪ್ಪ.

ಅದರ ನಂತರ ಬೆಂಗಳೂರಿನ ಮಲ್ಲತ್ತಹಳ್ಳಿ ರಂಗ ಚಟುವಟಿಕೆ ಹಾಗೂ ಸಾಹಿತ್ಯ ಚಟುವಟಿಕೆಗೆ ಎರಡು ಕೋಟಿ ರೂಪಾಯಿ ಹಣ ಮೀಸಲಿಡುವುದಾಗಿ ಹೇಳಿದ್ದಾರೆ ಯಡಿಯೂರಪ್ಪ.

Recommended Video

ರಸ್ತೆ ವಿಚಾರಕ್ಕೆ ಗ್ರಾಮಸ್ಥರೊಡನೆ ಕಚ್ಚಾಡಿಕೊಂಡ ಯಶ್ ತಂದೆ-ತಾಯಿ | Filmibeat Kannada

ಆದಿಕವಿ ಪಂಪನಿಂದ ಮುದ್ದಣನ ಕಾಲಘಟ್ಟದ ವರೆಗೆ ಎಲ್ಲ ಕೃತಿಗಳ ಡಿಜಲೀಕರಣ ಹಾಗೂ ಆನ್‌ಲೈನ್‌ನಲ್ಲಿ ಲಭ್ಯವಾಗಿಸಲು ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಜೊತೆಗೆ ಮುಂಬರುವ ಹಾವೇರಿ ಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರವು ಭರಪೂರ ನೆರವು ನೀಡುವುದಾಗಿ ಹೇಳಿದ್ದಾರೆ ಯಡಿಯೂರಪ್ಪ.

More from Filmibeat

English summary
In Karnataka Budget 2021-22 Yediyurappa gave very little attention to Literature and Drama.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X