twitter
    For Quick Alerts
    ALLOW NOTIFICATIONS  
    For Daily Alerts

    ಸಂಭಾಷಣೆ ಚತುರ ಕುಣಿಗಲ್ ನಾಗಭೂಷಣ್ ಕಣ್ಮರೆ

    By Mahesh
    |

    Veteran actor Kunigal Nagabhushan Passes away
    ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ಕುಣಿಗಲ್ ನಾಗಭೂಷಣ್ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಿನ್ನೆ ಮಧ್ಯರಾತ್ರಿ ನಂತರ ಸುಮಾರು 1.30 ರ ಹೊತ್ತಿಗೆ ಅವರ ದೇಹಾಂತ್ಯವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಾಗಭೂಷಣ್ ಅವರ ಬಲಗಾಲಿಗೆ ಮಧುಮೇಹದಿಂದ ಕತ್ತರಿ ಬಿದ್ದಿತ್ತು. ಹಲವು ಆಂಗಾಂಗ ವೈಫಲ್ಯ, ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ನಾಗಭೂಷಣ್ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲಾಗದೆ ಹಲವು ದಿನಗಳ ಕಾಲ ನಾಗಭೂಷಣ್ ಅವರು ಕಷ್ಟಪಟ್ಟಿದ್ದರು.

    ಆಶೀರ್ವಾದ, ಬಾಳು ಸೇರಿದಂತೆ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದ ನಾಗಭೂಷಣ್ ಅವರು 250ಕ್ಕೂ ಅಧಿಕ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. 500ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ನಾಗಭೂಷಣ್ ಅವರು ಜನಮೆಚ್ಚುಗೆ ಗಳಿಸಿದ್ದ ಪ್ರತಿಭೆ.

    1945 ಡಿಸೆಂಬರ್ 6 ರಂದು ಜನಸಿದ್ದ ನಾಗಭೂಷಣ್ ಅವರ ಪತ್ನಿ, ಪುತ್ರ ಕೂಡಾ ಒಂದೆರಡು ಚಲನಚಿತ್ರ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಸರಳ ಸಂಭಾಷಣೆ ಮೂಲಕ ಚಿತ್ರಗಳತ್ತ ಜನರನ್ನು ಆಕರ್ಷಿಸುತ್ತಿದ್ದರು ಇವರ ಸಾವಿನಿಂದ ಚಿತ್ರರಂಗ ಬಡವಾಗಿದೆ ಎಂದು ಹಿರಿಯ ನಟ ಶಿವರಾಮ್ ಪ್ರತಿಕ್ರಿಯಿಸಿದ್ದಾರೆ.

    English summary
    Veteran Kannada actor Kunigal Nagabhushan Passed away in the wee hours today. Kunigala Nagabhushan acted in more than 250 films and was dialogue writer for 450 films
    Monday, June 24, 2013, 10:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X