Don't Miss!
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೊಲೀಸರಿಗೆ ಮಾತ್ರ 'ಸಿದ್ದಾರ್ಥ' ಸ್ಪೆಷಲ್ ಶೋ
ರಾಜ್ಯದಾದ್ಯಂತ ಮೂಲೆ ಮೂಲೆಯಲ್ಲೂ 'ಸಿದ್ದಾರ್ಥ'ನ ಅಬ್ಬರ ಜೋರಾಗಿದೆ. ರಿಲೀಸ್ ಆದ್ಮೇಲೆ ಕರ್ನಾಟಕದ ಎಲ್ಲಾ ಕಡೆ ಭರ್ಜರಿ ಪ್ರಚಾರ ಮಾಡುತ್ತಿರುವ 'ಸಿದ್ದಾರ್ಥ' ಚಿತ್ರತಂಡ, ನಿನ್ನೆಯಷ್ಟೇ ಟ್ರಾಫಿಕ್ ಡೇ ಪ್ರಯುಕ್ತ ಕಬ್ಬನ್ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು.
ನಟ ರಮೇಶ್ ಅರವಿಂದ್, ನಿರ್ಮಾಪಕ-ನಟ ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಅಪೂರ್ವ ಸೇರಿದಂತೆ ಇಡೀ 'ಸಿದ್ದಾರ್ಥ' ತಂಡ ಸ್ವಂತ ಇಚ್ಛೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು. [ವಿನಯ್ ಈಗ 'ಮೆಗಾ 3G ಪವರ್ ಸ್ಟಾರ್']
ಇದರೊಂದಿಗೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆಗೂ ಮಾತನಾಡಿದ ರಾಘಣ್ಣ, ಪೊಲೀಸರಿಗಾಗಿ ಒಂದು ವಿಶೇಷ ಉಡುಗೊರೆ ನೀಡುವುದಕ್ಕೆ ನಿರ್ಧರಿಸಿದ್ದಾರೆ. ಪ್ರತಿನಿತ್ಯ ಒಂದಲ್ಲಾ ಒಂದು ಕ್ರೈಂ, ಟೆನ್ಷನ್ ನಲ್ಲೇ ಕಾಲ ಕಳೆಯುತ್ತಿರುವ ಪೊಲೀಸರಿಗೆ ಕೊಂಚ ಮನರಂಜನೆ ಸಿಗಬೇಕು ಅಂತ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ 'ಸಿದ್ದಾರ್ಥ' ಚಿತ್ರದ ವಿಶೇಷ ಪ್ರದರ್ಶನವನ್ನ ಹಮ್ಮಿಕೊಂಡಿದ್ದಾರೆ. ['ಸಿದ್ದಾರ್ಥ' ವಿಮರ್ಶೆ: ಅಣ್ಣಾವ್ರ ಹೆಸರುಳಿಸಿದ ಮೊಮ್ಮಗ]
ಇದೇ ಶನಿವಾರ ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಬೆಳ್ಳಗ್ಗೆ 10.15 ಕ್ಕೆ (ಮಾರ್ನಿಂಗ್ ಶೋ) ಪೊಲೀಸರಿಗಾಗಿ ಸ್ಪೆಷಲ್ ಶೋ ನಡೆಯಲಿದೆ. ಪೊಲೀಸರು ಅವರ ಕುಟುಂಬದ ಸಮೇತ 'ಸಿದ್ದಾರ್ಥ' ಚಿತ್ರವನ್ನ ವೀಕ್ಷಿಸಬಹುದು. ['ಸಿದ್ದಾರ್ಥ'ನಿಗಾಗಿ ಫಿನ್ ಲ್ಯಾಂಡ್ ನಿಂದ ಬಂದ ಮಿ.ಹೆರ್ರಿ!]
ಪೊಲೀಸರ ಬಗ್ಗೆ ಅಪಾರ ಗೌರವ ಹೊಂದಿರುವ ರಾಜ್ ಕುಟುಂಬ, ಪೊಲೀಸರು ತಮ್ಮ ಕುಟುಂಬದೊಂದಿಗೆ ಕೆಲ ಹೊತ್ತಾದರೂ ಸಮಯ ಕಳೆಯಲಿ ಅಂತ ಈ ಪ್ರಯತ್ನ ಮಾಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತೆ ಅಂತ ನೋಡೋಣ. (ಫಿಲ್ಮಿಬೀಟ್ ಕನ್ನಡ)