Don't Miss!
- Automobiles ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೂಜಾಗಾಂಧಿ ತಂದೆ ಪವನ್ ಗಾಂಧಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ
ನಟಿ ಪೂಜಾ ಗಾಂಧಿ ಅವರ ತಂದೆ ಪವನ್ ಗಾಂಧಿ ವಿರುದ್ಧ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಪವನ್ ಗಾಂಧಿ ವಿರುದ್ಧ ಬೆಂಗಳೂರಿನ 27ನೇ ಎಸಿಎಂಎಂ ಕೋರ್ಟ್ ನಲ್ಲಿ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಗುರುವಾರದಂದು ಪವನ್ ಗಾಂಧಿಯನ್ನು ಬಂಧಿಸಿ ಕರೆತರುವಂತೆ ವಾರೆಂಟ್ ಜಾರಿಗೊಳಿಸಿದೆ.
ಎಲ್ಲಿ ಹೋದರು ಪೂಜಾ ಗಾಂಧಿ ಸಹೋದರಿ ರಾಧಿಕಾ ಗಾಂಧಿ.?
ಆದೀಶ್ವರ್ ಎಲೆಕ್ಟ್ರಾನಿಕ್ ಶೋರೊಂಗೆ ಭೇಟಿ ನೀಡಿದ್ದ ಪವನ್, ಉಡುಗೊರೆಯ ವಸ್ತುಗಳನ್ನು ಖರೀದಿಸಿ 8 ಲಕ್ಷ ಮೌಲ್ಯದ ಚೆಕ್ನ್ನು ನೀಡಿದ್ದರು. ಆದರೆ ಬ್ಯಾಂಕ್ ಅಕೌಂಟ್ ನಲ್ಲಿ ಹಣವಿಲ್ಲದ ಕಾರಣದಿಂದಾಗಿ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ಪ್ರಶ್ನಿಸಲು ಆದೀಶ್ವರ್ ಶೋರೂಂನ ಸಿಬ್ಬಂದಿ ಪವನ್ ಗಾಂಧಿಗೆ ಫೋನ್ ಮಾಡಿದ್ದಾರೆ. ಆದರೆ, ಪೂಜಾಗಾಂಧಿ ಮನೆಯವರು ಕರೆ ಸ್ವೀಕರಿಸಿಲ್ಲ.
ಜೊತೆಗೆ ಬನಶಂಕರಿಯ ಅಪಾರ್ಟ್ ಮೆಂಟ್ ಬಳಿ ವಿಚಾರಿಸಿದಾಗ, ಪವನ್ಗಾಂಧಿ ಮೂರು ತಿಂಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇದಾದ ಬಳಿಕ, ಅನಿವಾರ್ಯವಾಗಿ ಶೋರೂಂ ಆಡಳಿತ ಮಂಡಳಿಯು ಕೋರ್ಟ್ಮೊರೆ ಹೋಗಿದೆ.
ಪ್ರಕರಣ ದಾಖಲಿಸಿಕೊಂಡಿದ್ದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಮೂರು ಬಾರಿ ವಾರೆಂಟ್ ಹಿಡಿದು, ಬನಶಂಕರಿಯ ಅಪಾರ್ಟ್ಮೆಂಟ್ ಗೆ ಹೋಗಿ ಬಂದಿದ್ದಾರೆ. ಈಗ ಕೋರ್ಟ್ ಆದೇಶದಂತೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ಪವನ್ ಗಾಂಧಿ ಅವರು ಸಂಸಾರ ಸಮೇತ ಮುಂಬೈಗೆ ಶಿಫ್ಟ್ ಆಗಿರುವ ಸಾಧ್ಯತೆ ಕಂಡು ಬಂದಿದೆ.