Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪ್ಪನಿಗೆ ಪ್ರಿನ್ಸ್ ಮಹೇಶ್ ನೀಡಿದ 'ಶ್ರೀಮಂತ' ಉಡುಗೊರೆ
'ಆಗಡು' ಚಿತ್ರದ ಬಳಿಕ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯಿಸುತ್ತಿರುವ ಚಿತ್ರ 'ಶ್ರೀಮಂತುಡು'. ಸದ್ದಿಲ್ಲದೇ ಸೈಲೆಂಟಾಗಿ ಚಿತ್ರೀಕರಣ ನಡೆಸುತ್ತಿರುವ 'ಶ್ರೀಮಂತುಡು' ಚಿತ್ರದ ಫಸ್ಟ್ ಲುಕ್ ಟ್ರೈಲರ್ ಇಂದು ಬಿಡುಗಡೆ ಆಗಿದೆ.
'ಶ್ರೀಮಂತುಡು'...ಹೆಸರಿಗೆ ತಕ್ಕಂತೆ ಈ ಸಿನಿಮಾ ಶ್ರೀಮಂತವಾಗಿ ರೆಡಿಯಾಗಿದೆ. ಚಿನ್ನದ ಚಮಚವನ್ನ ಬಾಯಲ್ಲಿಟ್ಟುಕೊಂಡು ಬೆಳೆದ ಕೋಟ್ಯಾಧಿಪತಿ ಪಾತ್ರದಲ್ಲಿ ಮಹೇಶ್ ಬಾಬು ನಟಿಸಿದ್ದಾರೆ. 'ಶ್ರೀಮಂತುಡು' ಚಿತ್ರದ ಮೊದಲ ನೋಟದ ಝಲಕ್ ಇಲ್ಲಿದೆ ನೋಡಿ....
'ಶ್ರೀಮಂತುಡು' ಹೇಳಿ ಕೇಳಿ ಮಹೇಶ್ ಬಾಬು ಅಭಿನಯದ ಸಿನಿಮಾ. ಅಂದ್ಮೇಲೆ ಚಿತ್ರದಲ್ಲಿ ಡೈಲಾಗ್ ಪಂಚ್ ಇರಲೇಬೇಕು. ಈ ನಿರೀಕ್ಷೆ 'ಶ್ರೀಮಂತುಡು' ಚಿತ್ರದಲ್ಲಿ ಹುಸಿಯಾಗಿಲ್ಲ. ಮಹೇಶ್ ಬಾಬು ಇಮೇಜ್ ಗೆ ತಕ್ಕಂತೆ 'ಶ್ರೀಮಂತುಡು' ಚಿತ್ರದಲ್ಲಿ ಬೆಂಕಿ ಉಂಡೆಗಳಂತಹ ಡೈಲಾಗ್ಸ್ ಇವೆ. ಭರ್ಜರಿ ಆಕ್ಷನ್ ಕೂಡ ಇದೆ. [ಮಹೇಶ್ ಬಾಬು ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]
'ಆಗಡು' ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಐಟಂ ಹಾಡೊಂದ್ರಲ್ಲಿ ಕುಣಿದು ಹೋಗಿದ್ದ ಶೃತಿ ಹಾಸನ್, ಇದೇ ಮೊದಲ ಬಾರಿಗೆ ಪ್ರಿನ್ಸ್ ಗೆ ನಾಯಕಿಯಾಗಿದ್ದಾರೆ. ಸೂಪರ್ ಹಿಟ್ ಸಿನಿಮಾ 'ಮಿರ್ಚಿ'ಗೆ ಆಕ್ಷನ್ ಕಟ್ ಹೇಳಿದ್ದ ಕೊರಟಾಲ ಶಿವ, 'ಶ್ರೀಮಂತುಡು' ಚಿತ್ರದ ಸೂತ್ರಧಾರ.
ಹಲವು ವಿಶೇಷತೆಗಳಿಂದ ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ 'ಶ್ರೀಮಂತುಡು' ಚಿತ್ರದ ಟ್ರೈಲರ್ ಇಂದು ಬಿಡುಗಡೆ ಆಗಿದೆ. ಅದು ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ಹುಟ್ಟುಹಬ್ಬದ ಪ್ರಯುಕ್ತ. ಆ ಮೂಲಕ ಅಪ್ಪನಿಗೆ ಜನ್ಮದಿನದ ಶುಭಹಾರೈಸುತ್ತಾ, 'ಶ್ರೀಮಂತ' ಉಡುಗೊರೆ ನೀಡಿದ್ದಾರೆ ಪ್ರಿನ್ಸ್ ಮಹೇಶ್.