Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಶ್ಚಿತಾರ್ಥದ ವಜ್ರದುಂಗುರಕ್ಕೆ ಯಶ್ ಫೆವಿಕಾಲ್
ಅಂತೂ-ಇಂತೂ 'ರಾಕಿಂಗ್' ಜೋಡಿಯ ನಿಶ್ಚಿತಾರ್ಥ ಗಣ್ಯಾತೀ ಗಣ್ಯರ ಸಮ್ಮುಖದಲ್ಲಿ ಸಂಪನ್ನವಾಗಿದೆ. 'ನವ ವಧುವಿನಂತೆ' ಕಂಗೊಳಿಸುತ್ತಿದ್ದ ಗೋವಾ ಪಣಜಿಯ ತಾಜ್ ವಿವಾಂತ ಹೋಟೆಲ್ ನ ಹೂವಿನ ಮಂಟಪದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಎಂಗೇಜ್ ಆಗಿದ್ದಾರೆ.
ಜೀವನದಲ್ಲಿ ಒಂದೇ ಬಾರಿ ಬರುವ ಈ ಸುಮಧುರ ಕ್ಷಣವನ್ನು ಮಿಸ್ ಮಾಡಿಕೊಳ್ಳಲು ಬಯಸದ, ಯಶ್ ಮತ್ತು ರಾಧಿಕಾ ಅವರು ತಮ್ಮಿಷ್ಟದಂತೆ ನಿಶ್ಚಿತಾರ್ಥ ವೇದಿಕೆ ಸಿದ್ಧಪಡಿಸಿದ್ದಾರೆ. ತಾವಿಬ್ಬರು ಏನೂ ಅಂದುಕೊಂಡಿದ್ದರೋ ಅದೇ ತರ ಪರಸ್ಪರ ವಜ್ರದುಂಗರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.[ಚಿತ್ರಪಟ: ಎಂಗೇಜ್ ಆದ ಮಿ.ಅಂಡ್.ಮಿಸಸ್ ರಾಮಾಚಾರಿ]
ಅಂದಹಾಗೆ ಯಶ್ ಅವರಿಗೆ ರಾಧಿಕಾ ಪಂಡಿತ್ ಅವರು ಉಂಗುರ ತೊಡಿಸಿದ ನಂತರ, "ಈ ಉಂಗುರವನ್ನು ಯಾವತ್ತಿಗೂ ತೆಗಿಲೇಬಾರದು ಅಂತ ಆರ್ಡರ್ ಬೇರೆ ಮಾಡಿದ್ದಾರೆ. ಅದಕ್ಕೆ ಯಶ್ ಅವರು ಕೂಡ ಹೋ ಹೋ..ಆಯ್ತು, ಆಯ್ತು ಫೆವಿಕಾಲ್ ಹಾಕಿ ಅಂಟಿಸಿಕೊಳ್ಳುತ್ತೇನೆ" ಎಂದಿದ್ದಾರೆ.
ಇದನ್ನು ಕಂಡಾಗ, ಇವರಿಬ್ಬರು ಎಷ್ಟು ಚೆಂದದ ಜೋಡಿ, ಮುಂದೆ ಎಷ್ಟು ಅನ್ಯೋನ್ಯವಾಗಿರಬಹುದು ಅಂತ ಒಂದ್ಸಾರಿ ಎಲ್ಲರ ಮನಸ್ಸಿಗೆ ಬರೋದು ಖಂಡಿತ. ಇವರಿಬ್ಬರದು ಅನ್ ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ. ಹಾಗೆ ಆಫ್ ಸ್ಕ್ರೀನ್ ನಲ್ಲೂ ಇವರು ತುಂಬಾ ಮುದ್ದು-ಮುದ್ದಾಗಿ ವರ್ತಿಸುತ್ತಾರೆ.[ಟ್ವೀಟ್ಸ್ : ಯಶ್ -ರಾಧಿಕಾ ರಾಕಿಂಗ್ ಜೋಡಿ ನೂರ್ಕಾಲ ಬಾಳಿ]
ಮಾತ್ರವಲ್ಲದೇ ಇವತ್ತು ನಿಶ್ಚಿತಾರ್ಥ ಆದ ಕೂಡಲೇ ಯಶ್ ಅವರು ರಾಧಿಕಾ ಅವರನ್ನು ಎತ್ತಿಕೊಂಡು ಬಂದು ಅಭಿಮಾನಿಗಳಿಗೆ ಮೀಟ್ ಮಾಡಿಸಿದ್ದಾರೆ. ನಂತರ ಅಭಿಮಾನಿಗಳತ್ತ ಇಬ್ಬರು ಕೈ ಬೀಸಿ ನಮಸ್ಕರಿಸುವ ಮೂಲಕ ಮುಖ ತೋರಿಸಿ ವಾಪಸಾಗಿದ್ದಾರೆ.
ಇವಾಗ್ಲೆ ರಾಧಿಕಾ ಅವರನ್ನು ಯಶ್ ಇಷ್ಟು ಜೋಪಾನ ಮಾಡ್ತಾರೆ ಅಂತಾದ್ರೆ, ಇನ್ನು ಜೀವನ ಪೂರ್ತಿ ಅದ್ಯಾವ ರೀತಿ ನೋಡಿಕೊಳ್ಳಬಹುದು ಅಲ್ವಾ.?. ಅದೇನೇ ಇರಲಿ ಒಟ್ನಲ್ಲಿ ಮುದ್ದಾದ ಜೋಡಿ ಇಂದು ಅಧೀಕೃತವಾಗಿ ರಿಂಗ್ ಬದಲಾಯಿಸಿಕೊಂಡಿದ್ದು, ಸಾವಿರಾರು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.[ಯಶ್-ರಾಧಿಕಾ ನಿಶ್ಚಿತಾರ್ಥಕ್ಕೆ ಕೋಟಿ ವೆಚ್ಚದಲ್ಲಿ ರೆಡಿಯಾದ ವೇದಿಕೆ]
ಇನ್ನು ನಿರ್ದೇಶಕ ಯೋಗರಾಜ್ ಭಟ್ ಅವರು ಇವರಿಬ್ಬರಿಗಾಗಿ ಒಂದು ಹಾಡನ್ನೇ ಬರೆದಿದ್ದಾರೆ. ಅಣ್ತಮ್ಮ ಹಾಡಿನ ಟ್ಯೂನ್ ಬಳಸಿಕೊಂಡು 'ರಂಗೂ ರಂಗೂ ಎಂಗೇಜ್ಮೆಂಟು, ಕೊನೆಗೂ ಮಾಡ್ಕೊಂಡು ಬಿಟ್ಟ ಅಣ್ತಮ್ಮ'..ಅಣ್ತಮ್ಮ.., ಹೂವಿನಂತ ಹುಡುಗಿ ಕೈಗೆ ಉಂಗುರ ತೊಡಿಸಿಬಿಟ್ಟ...ಅಣ್ತಮ್ಮ..ಅಣ್ತಮ್ಮ...'ಸಾವ್ರ ವರ್ಷದಿಂದ ಪ್ರೀತ್ಸೋರು ಒಬ್ರನೊಬ್ರು, ನೋಡಗಂಟ ನೋಡಿ ಉಂಗುರ ಹಾಕ್ಕೊಂಡು ಬಿಟ್ರು.., ಜೋಡಿ ಏಕ್ದಂ ಸೂಪರ್', ಅಂತ ಭಟ್ರು ಸೂಪರ್-ಡೂಪರ್ ಆಗಿ ನವ ಜೋಡಿಗೆ ಒಂದು ಹಾಡನ್ನೇ ಬರೆದರು. ಇದಕ್ಕೆ ಯಶ್ ಮತ್ತು ರಾಧಿಕಾ ಫುಲ್ ಖುಷ್ ಆದ್ರು ಅಂತ ನಾವು ಬೇರೆ ಹೇಳಬೇಕಿಲ್ಲ ತಾನೆ.