Don't Miss!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ರೆಜಿಸ್ಟಾರ್ ಚಿತ್ರಗಳ ಸತತ ಸೋಲಿಗೆ ಕಾರಣ ಏನು?
ಕನ್ನಡ ಚಿತ್ರರಂಗದ ರಾಜ್ ಕಪೂರ್ ಎಂದೇ ಖ್ಯಾತರಾಗಿರುವ ಕನಸುಗಾರ ರವಿಚಂದ್ರನ್ ಚಿತ್ರಗಳು ಈ ರೀತಿ ಸೋಲಲು ಕಾರಣ ಏನಿರಬಹುದು? ಹೂವು, ಹಣ್ಣು, ದ್ರಾಕ್ಷಿ, ದಾಳಿಂಬೆ ಬಳಕೆ ಕಡಿಮೆಯಾಗಿದ್ದಾ? ರವಿಚಂದ್ರನ್ ಚಿತ್ರಗಳಲ್ಲಿ ವೈವಿಧ್ಯತೆ ಇಲ್ಲದಿರುವುದೇ? ಅಥವಾ ಹೊಟ್ಟೆ ಬೆಳೆಸಿಕೊಂಡಿದ್ದೇ? ಏನು ಎಂಬುದು ಗಾಂಧಿನಗರಕ್ಕೂ ಗೊತ್ತಾಗುತ್ತಿಲ್ಲ.
'ಏಕಾಂಗಿ' ಚಿತ್ರದಿಂದ ಈ ಸೋಲಿನ ಸರಮಾಲೆ ರವಿ ಅವರನ್ನು ಕಾಡುತ್ತಿದೆ. ರವಿ ತಮ್ಮ ಹಳೆಯ ಶೈಲಿಯನ್ನು ಬಿಟ್ಟಿದ್ದೇ ಇದಕ್ಕೆ ಕಾರಣವೇ? ಅಥವಾ ರವಿಗೆ ವಯಸ್ಸಾಯಿತೆ? ಹಾಗಿದ್ದರೆ ಹಿಂದಿ, ತೆಲುಗು, ತಮಿಳಿನಲ್ಲಿ ಅಮಿತಾಬ್, ಚಿರಂಜೀವಿ,ರಜನಿಕಾಂತ್ ಅವರಿಗೂ ವಯಸ್ಸಾಗಿಲ್ಲವೆ? ಅವರ ಚಿತ್ರಗಳೇಕೆ ಗಲ್ಲಾಪೆಟ್ಟಿಗೆಯಲ್ಲಿ ಇನ್ನೂ ಗುಲ್ಲೆಬ್ಬಿಸುತ್ತಿವೆ?
ಕ್ರೇಜಿಲೋಕ, ನರಸಿಂಹ ಚಿತ್ರಗಳ ಆಡಿಯೋ ರಿಲೀಸ್ ಆಗಿದೆ. ಪರಮಶಿವ ಇನ್ನೂ ಚಿತ್ರೀಕರಣ ಹಂತದಲ್ಲಿದೆ. ಇತ್ತೀಚೆಗೆ ತೆರೆಕಂಡಿದ್ದ ದಶಮುಖ ಚಿತ್ರ ಬಾಕ್ಸಾಫೀಸಲ್ಲಿ ಮಕಾಡೆ ಮಲಗಿದೆ. ರವಿ ಅವರ ಮುಂಬರುವ ಚಿತ್ರಗಳ ಬಗ್ಗೆಯೂ ಕುತೂಹಲ ಉಳಿದಿಲ್ಲ. ಏನಿದಕ್ಕೆಲ್ಲಾ ಕಾರಣ? ರವಿ ಚಿತ್ರಗಳು ಬಾಕ್ಸಾಫೀಸಲ್ಲಿ ಗೆಲ್ಲಬೇಕಾದರೆ ಏನು ಮಾಡಬೇಕು? ನಿಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ಕಾಮೆಂಟ್ ಬಾಕ್ಸಲ್ಲಿ ಹಾಕಿ. ರವಿಚಂದ್ರನ್ಗೆ ಸಹಾಯ ಮಾಡಿ. (ಒನ್ಇಂಡಿಯಾ ಕನ್ನಡ)