Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬಿ ನಂತರ ಯಶ್: 'ರಾಜಾಹುಲಿ' ಬಗ್ಗೆ ಮೈಸೂರು 'ಸಿಂಹ' ಹೀಗೆ ಹೇಳಿದ್ದೇಕೆ?
ರೆಬೆಲ್ ಸ್ಟಾರ್ ಅಂಬರೀಶ್ ಅವರ ವ್ಯಕ್ತಿತ್ವ ಎಲ್ಲರಿಗೂ ಗೊತ್ತಿದೆ. ನೇರ ನುಡಿ, ನೇರ ವ್ಯಕ್ತಿತ್ವ, ಕಷ್ಟ ಅಂತ ಬಂದವರಿಗೆ ಸಹಾಯ ಮಾಡುವುದು, ಇಷ್ಟವಾಗದವರನ್ನ ದೂರು ಇಡುವುದು ಇದೆಲ್ಲವೂ ಅಂಬಿ ಸ್ವಭಾವ.
ಅಂಬರೀಶ್ ಏನೇ ಬೈಯ್ದರೂ ಪ್ರೀತಿಯಿಂದ ಅಂತಿದ್ರು ಅವರ ಅಭಿಮಾನಿಗಳು. ಯಾವುದೇ ವೇದಿಕೆಯಾಗಿರಬಹುದು, ಯಾವುದೇ ಮಾಧ್ಯಮವಾಗಿರುವುದು, ಎದುರುಗಡೆ ಯಾರೇ ಇರಬಹುದು ಅವರು ಮಾತನಾಡೋ ಶೈಲಿ ಬದಲಾಗುತ್ತಿರಲಿಲ್ಲ.
'ಕನ್ನಡದ ಕೋಟ್ಯಧಿಪತಿ' ಶೋ ವಿರುದ್ಧ ಪ್ರತಾಪ್ ಸಿಂಹ ಪತ್ನಿ ಅಸಮಾಧಾನ
ಇಂತಹ ಅಂಬರೀಶ್ ನಂತರ ನಟ ಯಶ್ ಆ ರೀತಿ ಸ್ವಭಾವ ಹೊಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ.....
ಯಾರಿಗೂ ಕ್ಯಾರೇ ಅನ್ನದ ನಟ
''ಅಂಬರೀಶಣ್ಣನ ನಂತರ ಯಾರಿಗೂ ಕ್ಯಾರೇ ಅನ್ನದೆ ತನಗನಿಸಿದ್ದನ್ನು ನೇರವಾಗಿ ಹೇಳುವ, ಮಾಧ್ಯಮಗಳಿಗೂ ಮಂಗಳಾರತಿ ಮಾಡುವ ಏಕಮಾತ್ರ ವ್ಯಕ್ತಿ ಯಶ್'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ದರ್ಶನ್ ಭೇಟಿ ನಂತರ 'ಕರಿಯ'ನ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದೇನು.?
ಈ ವಿಷ್ಯ ಹೇಳಲು ಕಾರಣವೇನು?
ಸಂಸದ ಪ್ರತಾಪ್ ಸಿಂಹ ಅವರು ಯಶ್ ಬಗ್ಗೆ ಹೀಗೆ ಹೇಳಲು ಕಾರಣ, ಐಟಿ ವಿಚಾರಣೆ ಬಳಿಕ ಯಶ್ ಮಾತನಾಡಿದ ರೀತಿ. ಐಟಿ ರೇಡ್ ಬಳಿಕ ಯಶ್ ವಿಚಾರಣೆಗೆಂದು ಅಧಿಕಾರಿಗಳು ನೋಟಿಸ್ ನೀಡಿದ್ದರು. ಹಾಗಾಗಿ, ವಿಚಾರಣೆಗೆ ಹಾಜರಾದ ಯಶ್ ನಂತರ ಮಾಧ್ಯಮದವರ ನಡೆಯನ್ನ ಪ್ರಶ್ನಿಸಿದರು. ಈ ಡೇರಿಂಗ್ ಮಾತುಗಳನ್ನ ಕೇಳಿ ಸಂಸದರು ಹೀಗೆ ಹೇಳಿದ್ದಾರೆ.
ದರ್ಶನ್ ಭೇಟಿ ನಂತರ 'ಕರಿಯ'ನ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದೇನು.?
ಯಶ್ ಹೇಗೆ ಮಾತಾಡಿದ್ರು
''ಯಾವುದೇ ಸರಿಯಾದ ಮಾಹಿತಿ ಇಲ್ಲದೇ, ವೈಯಕ್ತಿವಾಗಿ ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ. ಆ ಒಂದು ಮಾಧ್ಯಮ ನನ್ನನ್ನು ಟಾರ್ಗೆಟ್ ಮಾಡಿದೆ. ಇದನ್ನೆಲ್ಲಾ ಜನರು ನೋಡ್ತಿದ್ದಾರೆ. ಸುಮ್ಮನೆ ತೇಜೋವಧೆ ಮಾಡಿದ್ರೆ ಸುಮ್ಮನೆ ಇರೋರಲ್ಲ ನಾವು'' ಎಂದು ಖಾರವಾಗಿ ಮಾತನಾಡಿದ್ರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಅಂಬಿ ಮಾತುಗಳು ನೆನಪಾಗುತ್ತೆ
ಹಾಗ್ನೋಡಿದ್ರೆ, ಮಾಧ್ಯಮದವರು ಕೇಳೋ ಪ್ರಶ್ನೆಗಳಿಗೆ ಡೇರಿಂಗ್ ಆಗಿ ಉತ್ತರ ಕೊಡ್ತಿದ್ದ ನಟ ಅಂದಾಕ್ಷಣ ಮೊದಲು ನೆನಪಾಗುವುದು ಅಂಬರೀಶ್. ಯಾವುದಕ್ಕೂ ಯಾರಿಗೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮಾಧ್ಯಮದವರು ಅಷ್ಟೇ ಅಂಬಿಯ ರೆಬೆಲ್ ಮಾತುಗಳನ್ನ ಹಾಗೇಯೇ ಸ್ವೀಕರಿಸುತ್ತಿದ್ದರು. ಈಗ ಯಶ್ ಅವರ ಸ್ವಭಾವವೂ ಅದೇ ರೀತಿ ಕಾಣ್ತಿದೆ ಎಂಬುದು ಪ್ರತಾಪ್ ಸಿಂಹ ಅವರ ಅಭಿಪ್ರಾಯ