Don't Miss!
- News ಬಿಸಿಲಿನ ಶಾಖಕ್ಕೆ ಬೇಸತ್ತು ಎಸಿ ಹೆಲ್ಮೆಟ್ ಮೊರೆಹೋದ ಟ್ರಾಫಿಕ್ ಪೊಲೀಸರು-ಎಲ್ಲಿ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಯಶ್ ಇಮೇಜ್ ಗೆ ಡ್ಯಾಮೇಜ್ ಮಾಡುವ ಕೆಲಸವಿದು!'
ರಾಕಿಂಗ್ ಸ್ಟಾರ್ ಯಶ್ ಗೆ ಸಂಕಷ್ಟ ಎದುರಾಗಿದೆ. ಕಳೆದ ಒಂದು ವರ್ಷದಿಂದ ಬಾಡಿಗೆ ಕಟ್ಟದ ಆರೋಪ ನಟ ಯಶ್ ಮತ್ತು ಕುಟುಂಬದ ವಿರುದ್ಧ ಕೇಳಿ ಬಂದಿದೆ.
ಬಾಡಿಗೆ ಕೇಳೋಕೆ ಅಂತ ಮನೆಗೆ ಹೋದರೆ, ಮನೆ ಮಾಲೀಕರ ಮೇಲೆ ದಬ್ಬಾಳಿಕೆ ಮಾಡಿ 'ಗೆಟ್ ಔಟ್' ಅಂತ ಹೊರಗೆ ಕಳುಹಿಸಿ ಜೀವ ಬೆದರಿಕೆ ಹಾಕಿದ್ದಾರಂತೆ ಯಶ್ ತಾಯಿ ಪುಷ್ಪ. ಹಾಗಂತ ಮನೆ ಮಾಲೀಕರಾಗಿರುವ ಡಾ.ಮುನಿಪ್ರಸಾದ್ ಮತ್ತು ಡಾ.ವನಜಾ ಆರೋಪಿಸಿದ್ದಾರೆ. [ಬಯಲಾಯ್ತು ಯಶ್ ಕುಟುಂಬದ 'ಕಿರಾತಕ' ಮುಖ]
ಇದೇ ವಿಚಾರವಾಗಿ ಗಿರಿನಗರ ಪೊಲೀಸ್ ಸ್ಟೇಷನ್ ಮತ್ತು ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಟ ಯಶ್ ಮತ್ತು ಕುಟುಂಬದ ವಿರುದ್ಧ ದೂರು ದಾಖಲಾಗಿದೆ. ಇಷ್ಟೆಲ್ಲಾ ರಗಳೆಯ ನಂತ್ರ ''ಇದು ಯಶ್ ಇಮೇಜ್ ಗೆ ಮಾಡುತ್ತಿರುವ ಡ್ಯಾಮೇಜ್'' ಅಂತ ಯಶ್ ತಾಯಿ ಪುಷ್ಪ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ, ಪುಷ್ಪ ಅವರ ಪ್ರತಿಕ್ರಿಯೆ ಏನು? ಅದನ್ನ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....
''ನಮಗೆ ಗೊತ್ತಿಲ್ಲ''
''ನೋಟಿಸ್ ಕೊಟ್ಟಿದ್ದು ಅವರು. ಲಾಯರ್ ಹತ್ರ ಹೋಗಿ ಬಂದಿದ್ದೀವಿ. ಪೊಲೀಸ್ ಸ್ಟೇಷನ್ ಗೂ ಹೋಗಿ ಲೆಟರ್ ಕೊಟ್ಟು ಬಂದಿದ್ದೀವಿ. ಅವರು ನಮ್ಮ ಜೊತೆ ಚೆನ್ನಾಗೇ ಇದ್ದರು. ಈಗ ಯಾಕೆ ಹೀಗೆ ಮಾಡುತ್ತಿದ್ದಾರೆ ಅಂತ ನನಗೆ ಗೊತ್ತಿಲ್ಲ.'' ಅಂತ ಖಾಸಗಿ ವಾಹಿನಿಗಳಿಗೆ ಯಶ್ ತಾಯಿ ಪುಷ್ಪ ಹೇಳಿಕೆ ನೀಡಿದ್ದಾರೆ.
''ಮಗನ ಇಮೇಜ್ ಡ್ಯಾಮೇಜ್ ಮಾಡ್ತೀವಿ''
''ನಿಮ್ಮ ಮಗ ಸೆಲೆಬ್ರಿಟಿ. ನಾವು ಚಾನೆಲ್ ಗೆ ಹೋಗ್ತೀವಿ. ನಿಮ್ಮ ಮಗನಿಗೆ ಹೆಸರು ಬಂದಿದೆ. ಅವರ ಇಮೇಜ್ ನ ಡ್ಯಾಮೇಜ್ ಮಾಡ್ತೀವಿ. ನಿಮ್ಮ ಮನೆ ಪಾತ್ರೆಯೆಲ್ಲಾ ಆಚೆಗೆ ಹಾಕ್ತೀವಿ. ನಮ್ಮ ಕಡೆ ತುಂಬಾ ಜನ ಇದ್ದಾರೆ'' ಅಂತ ಮನೆ ಮಾಲೀಕರು ನಮಗೆ ಬೆದರಿಕೆ ಹಾಕಿದರು ಅಂತ ಹೇಳ್ತಾರೆ ಯಶ್ ತಾಯಿ ಪುಷ್ಪ. [ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?]
ಯಶ್ ಗೂ-ಇದಕ್ಕೂ ಟಚ್ ಇಲ್ಲ!
''ನಾವು ಇಲ್ಲಿಗೆ ಬಂದು ನಾಲ್ಕೈದು ವರ್ಷ ಆಯ್ತು. ಯಶ್ ಗೂ ಇದಕ್ಕೂ ಟಚ್ ಇಲ್ಲ. ಬಾಡಿಗೆ ತೆಗೆದುಕೊಳ್ಳುವುದಕ್ಕೆ ಅವರೇ ಬರ್ತಾಯಿಲ್ಲ. ಬಾಡಿಗೆ ಕೊಡುವುದಕ್ಕೆ ನಾವು ರೆಡಿ ಇದ್ದೀವಿ'' - ಯಶ್ ತಾಯಿ ಪುಷ್ಪ. [ಬಿಎಂಟಿಸಿ ಡ್ರೈವರ್ ಮಗ ರಾಕಿಂಗ್ ಸ್ಟಾರ್ ಯಶೋಗಾಥೆ]
''ಮನೆ ಖಾಲಿ ಮಾಡೋಕೆ ಆಗಲ್ಲ''
''ಗಲಾಟೆ ಶುರುಮಾಡಿದ್ದೇ ಅವರು. ನಾವಲ್ಲ. ಬಾಡಿಗೆ ಕಟ್ಟಿಲ್ಲ ಅನ್ನುವುದಕ್ಕೆ ಅವರು ದಾಖಲೆ ತೋರಿಸಲಿ. ನಾವೀಗ ಎಮರ್ಜೆನ್ಸಿಯಾಗಿ ಖಾಲಿ ಮಾಡೋಕೆ ಆಗಲ್ಲ. ನಮಗೂ ತೊಂದರೆ ಆಗುತ್ತೆ. ಅದಕ್ಕೆ ಟೈಮ್ ಕೇಳಿದ್ದೇವೆ. ಬಾಡಿಗೆ ಏನೇ ಇದ್ದರೂ ಕಟ್ಟಿ ಕೊಡುತ್ತೇವೆ'' - ಯಶ್ ತಾಯಿ ಪುಷ್ಪ.
ಕರ್ನಾಟಕದವರು ಚೀಪಂತೆ..!
''ಮನೆ ಮಾಲೀಕರು ಕರ್ನಾಟಕ ಜನತೆಯನ್ನ ಹೀನಾಯವಾಗಿ ಬೈದರು. ನೀವು ಚೀಪ್ ಮೆಂಟಾಲಿಟಿ ಜನ. ನಾವು ಆಂಧ್ರದವರು. ನಿಮ್ಮನ್ನ ಖಾಲಿ ಮಾಡಿಸೋದು ದೊಡ್ಡ ವಿಷಯ ಅಲ್ಲ ಅಂದ್ರು. ಅದಕ್ಕೆ ಗೆಟ್ ಔಟ್ ಅಂದಿದ್ದು ನಿಜ. ಈ ಕಿತ್ತಾಟ ಆರು ತಿಂಗಳಿನಿಂದ ನಡೆಯುತ್ತಿದೆ. ಬಾಡಿಗೆ ಕೊಡುತ್ತೇವೆ, ಪರಿಹಾರ ಮಾಡಿಕೊಳ್ಳೋಣ ಅಂದರೂ ಅವರು ರೆಡಿಯಿಲ್ಲ. ಕೋರ್ಟ್ ಗೆ ಹೋಗಿದ್ದಾರೆ. ಈಗ ಎಲ್ಲಾ ಚಾನೆಲ್ ಗಳಿಗೂ ಬಂದಿದ್ದಾರೆ'' - ಯಶ್ ತಾಯಿ ಪುಷ್ಪ.
ಕೋರ್ಟ್ ಗೆ ಹಾಜರಾಗುವಂತೆ ಸೂಚನೆ
ಬಾಡಿಗೆ ಕಟ್ಟದ ಆರೋಪದ ಮೇಲೆ ಮನೆ ಮಾಲೀಕರಾದ ಡಾ.ಮುನಿಪ್ರಸಾದ್ ಸಿಟಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಮನೆ ಅಗ್ರೀಮೆಂಟ್ ಯಶ್ ಅವರ ತಾಯಿ ಪುಷ್ಪ ಹೆಸರಿನಲ್ಲಿರುವ ಕಾರಣ, ಮುಂದಿನ ವಿಚಾರಣೆಯಂದು ಕೋರ್ಟ್ ಗೆ ಹಾಜರಾಗುವಂತೆ ಪುಷ್ಪ ಅವರಿಗೆ ಸಿಟಿ ಸಿವಿಲ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
21 ಲಕ್ಷ ರೂಪಾಯಿ ಕೊಡಬೇಕು..!
4 ಲಕ್ಷ ರೂಪಾಯಿ ಅಡ್ವಾನ್ಸ್ ಹಣ ಕಳೆದು, ಬರೋಬ್ಬರಿ 21,37,972 ರೂಪಾಯಿಗಳನ್ನ ಮನೆ ಮಾಲೀಕರಿಗೆ ಯಶ್ ಮತ್ತು ಕುಟುಂಬ ನೀಡಿ, ಮನೆ ಖಾಲಿ ಮಾಡಿಕೊಡಬೇಕು ಅನ್ನೋದು ಡಾ.ಮುನಿಪ್ರಸಾದ್ ಅವರ ಬೇಡಿಕೆ.