twitter
    For Quick Alerts
    ALLOW NOTIFICATIONS  
    For Daily Alerts

    ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಜನ್ಯ-ಭಟ್ರು: ಕಾರಣವೇನು?

    |

    ಪಂಚತಂತ್ರ ಮುಗಿಸಿದ ಯೋಗರಾಜ್ ಭಟ್ ಈಗ ಏನ್ಮಾಡ್ತಿದ್ದಾರೆ ಅಂತ ಹುಡುಕಿದ್ರೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಅರೇ ಮುಂಬೈನಲ್ಲಿ ಭಟ್ಟರು ಒಬ್ಬರೇ ಕಾಣಿಸಿಲ್ಲ, ಜೊತೆಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಕೂಡ ಇದ್ದಾರೆ.

    ಹಾಗಿದ್ರೆ, ಮುಂಬೈನಲ್ಲಿ ಏನ್ಮಾಡ್ತಿದ್ದಾರೆ ಎಂಬ ಪ್ರಶ್ನೆ ನಮಗೂ ಬಂತು. ಆಮೇಲೆ ಗೊತ್ತಾಯ್ತು ಇವರಿಬ್ಬರು ಮುಂಬೈಗೆ ಹೋಗಿರುವುದು ಹಾಡಿನ ಸಂಯೋಜನೆಗಾಗಿ ಅಂತ.

    ಹೌದು, ಯೋಗರಾಜ್ ಮತ್ತು ಅರ್ಜುನ್ ಜನ್ಯ ಈಗಾಗಲೇ ಗಾಳಿಪಟ 2 ಚಿತ್ರದ ಹಾಡಿನ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಮುಂಬೈನಲ್ಲಿರುವ ಜನ್ಯ ಸ್ಟುಡಿಯೋದಲ್ಲಿ ಇಬ್ಬರು ಭೇಟಿ ನೀಡಿ ಹಾಡುಗಳ ರಾಗ ಸಂಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ.

    yogaraj bhat and arjun janya went to mumbai

    ಅರೇ..ಅಭಿಮಾನಿಗಳಿಗಾಗಿ ಮತ್ತೆ 'ಗಾಳಿಪಟ' ಹಾರಿಸ್ತಾರಂತೆ ಭಟ್ಟರು! ಅರೇ..ಅಭಿಮಾನಿಗಳಿಗಾಗಿ ಮತ್ತೆ 'ಗಾಳಿಪಟ' ಹಾರಿಸ್ತಾರಂತೆ ಭಟ್ಟರು!

    ಹಾಡುಗಳ ರೆಕಾರ್ಡಿಂಗ್ ಮುಗಿದ ತಕ್ಷಣ ಶೂಟಿಂಗ್ ಶುರು ಮಾಡಲಿದ್ದಾರೆ ಭಟ್ಟರು. ಮುಂಗಾರು ಮಳೆ ಆರಂಭವಾದ ನಂತರ ಗಾಳಿಪಟ 2 ಸಿನಿಮಾ ಚಿತ್ರೀಕರಣ ಮಾಡುವುದಾಗಿ ಭಟ್ಟರು ನಿರ್ಧರಿಸಿದ್ದಾರೆ.

    ಅರ್ಜುನ್ ಜನ್ಯರ ಮೂರು ಆಸೆಯಲ್ಲಿ ಒಂದು ಆಸೆ ನೆರವೇರಿದೆ ಅರ್ಜುನ್ ಜನ್ಯರ ಮೂರು ಆಸೆಯಲ್ಲಿ ಒಂದು ಆಸೆ ನೆರವೇರಿದೆ

    ಇನ್ನುಳಿದಂತೆ ಗಾಳಿಪಟ 2 ಚಿತ್ರದಲ್ಲಿ ಶರಣ್, ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ, ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

    English summary
    Kannada director yogaraj bhat and magical composer arjun janya went to mumbai for recording songs of galipata 2.
    Saturday, May 4, 2019, 16:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X