ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಜನ್ಯ-ಭಟ್ರು: ಕಾರಣವೇನು?
ಪಂಚತಂತ್ರ ಮುಗಿಸಿದ ಯೋಗರಾಜ್ ಭಟ್ ಈಗ ಏನ್ಮಾಡ್ತಿದ್ದಾರೆ ಅಂತ ಹುಡುಕಿದ್ರೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಅರೇ ಮುಂಬೈನಲ್ಲಿ ಭಟ್ಟರು ಒಬ್ಬರೇ ಕಾಣಿಸಿಲ್ಲ, ಜೊತೆಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಕೂಡ ಇದ್ದಾರೆ.
ಹಾಗಿದ್ರೆ, ಮುಂಬೈನಲ್ಲಿ ಏನ್ಮಾಡ್ತಿದ್ದಾರೆ ಎಂಬ ಪ್ರಶ್ನೆ ನಮಗೂ ಬಂತು. ಆಮೇಲೆ ಗೊತ್ತಾಯ್ತು ಇವರಿಬ್ಬರು ಮುಂಬೈಗೆ ಹೋಗಿರುವುದು ಹಾಡಿನ ಸಂಯೋಜನೆಗಾಗಿ ಅಂತ.
ಹೌದು, ಯೋಗರಾಜ್ ಮತ್ತು ಅರ್ಜುನ್ ಜನ್ಯ ಈಗಾಗಲೇ ಗಾಳಿಪಟ 2 ಚಿತ್ರದ ಹಾಡಿನ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಮುಂಬೈನಲ್ಲಿರುವ ಜನ್ಯ ಸ್ಟುಡಿಯೋದಲ್ಲಿ ಇಬ್ಬರು ಭೇಟಿ ನೀಡಿ ಹಾಡುಗಳ ರಾಗ ಸಂಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ.

ಹಾಡುಗಳ ರೆಕಾರ್ಡಿಂಗ್ ಮುಗಿದ ತಕ್ಷಣ ಶೂಟಿಂಗ್ ಶುರು ಮಾಡಲಿದ್ದಾರೆ ಭಟ್ಟರು. ಮುಂಗಾರು ಮಳೆ ಆರಂಭವಾದ ನಂತರ ಗಾಳಿಪಟ 2 ಸಿನಿಮಾ ಚಿತ್ರೀಕರಣ ಮಾಡುವುದಾಗಿ ಭಟ್ಟರು ನಿರ್ಧರಿಸಿದ್ದಾರೆ.
ಇನ್ನುಳಿದಂತೆ ಗಾಳಿಪಟ 2 ಚಿತ್ರದಲ್ಲಿ ಶರಣ್, ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ, ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











