ಯೋಗರಾಜ್ ಭಟ್ರ 'ಗರಡಿ' ಮುಕ್ತಾಯ: ಇನ್ನೇನಿದ್ರೂ ಥಿಯೇಟರ್ನಲ್ಲೇ ಆಟ!
ಯೋಗರಾಜ್ ಭಟ್ ನಿರ್ದೇಶಿಸುತ್ತಿರೋ ಹೊಸ ಸಿನಿಮಾ 'ಗರಡಿ'. ಯಶಸ್ ಸೂರ್ಯ ಬಹಳ ದಿನಗಳ ಬಳಿಕ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾ ಕಂಪ್ಲೀಟ್ ಆಗಿದೆ. ಯೋಗರಾಜ್ ಭಟ್ ಅಂದುಕೊಂಡ ಸಮಯದಲ್ಲೇ ಸಿನಿಮಾ ಮುಗಿಸಿದ್ದಾರೆ.
ಅಂದ್ಹಾಗೆ ಈ ಸಿನಿಮಾವನ್ನು ಸಚಿವ ಬಿ.ಸಿ.ಪಾಟೀಲ್ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣ ಮಾಡುತ್ತಿದ್ದಾರೆ. ರಾಮೋಹಳ್ಳಿಯ ಜಿ.ವಿ.ಅಯ್ಯರ್ ಸ್ಟುಡಿಯೋದಲ್ಲಿ ಗರಡಿಮನೆ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿತ್ತು. ಸಿನಿಮಾ ಕೊನೆಯ ಭಾಗದ ಚಿತ್ರೀಕರಣವನ್ನು ಈ ಗರಡಿ ಮನೆ ಸೆಟ್ನಲ್ಲಿಯೇ ಶೂಟ್ ಮಾಡಲಾಗಿದೆ.

'ಗರಡಿ' ಸಿನಿಮಾವನ್ನು ಸುಮಾರು 70 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ವಿಶೇಷ ಅಂದ್ರೆ, ಈ ಸಿನಿಮಾದಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಹೀರೊ ಯಶಸ್ ಸೂರ್ಯ ಅವರ ತಂದೆಯಾಗಿ ನಟಿಸಿದ್ದಾರೆ.
ಯಶಸ್ ಸೂರ್ಯ ಜೊತೆ ಸೋನಾಲ್ ಮೊಂತೆರೊ, ರವಿಶಂಕರ್, ಬಿ.ಸಿ.ಪಾಟೀಲ್, ಸುಜಯ್ ಬೇಲೂರು, ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದ್ಹಾಗೆ 'ಗರಡಿ' ಮನೆ ಹಳೇ ಮೈಸೂರು ಭಾಗದಲ್ಲಿ ಕಥೆ. ಈ ಸಿನಿಮಾದಲ್ಲಿ ಕಥೆಯ ಜೊತೆ ಜೊತೆಗೆ ದೇಸಿ ಕ್ರೀಡೆಗೂ ಹೆಚ್ಚು ಒತ್ತು ನೀಡಲಾಗುತ್ತಿದೆ. ಹೀಗಾಗಿಯೇ ಈ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾಗಿ ನಿರ್ದೇಶಕ ಯೋಗರಾಜ್ ಭಟ್ ಮಾಹಿತಿ ನೀಡಿದ್ದಾರೆ.
'ಗರಡಿ' ಸಿನಿಮಾ ಮತ್ತೊಂದು ವಿಶೇಷತೆ ಅಂದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶಸ್ ಸೂರ್ಯ ಈ ಚಿತ್ರದಲ್ಲಿ ಪೈಲ್ವಾನ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇಂತಹ ಪಾತ್ರದಲ್ಲಿ ನಟಿಸೋಕೆ ಸಾಕಷ್ಟು ಪೂರ್ವ ತಯಾರಿಯನ್ನೂ ಯಶಸ್ ಮಾಡಿಕೊಂಡಿದ್ದರು.

'ಗರಡಿ' ಮುಕ್ತಾಯದ ಹಂತದಲ್ಲಿಯೇ ಸಿನಿಮಾ ಭರ್ಜರಿ ಬ್ಯುಸಿನೆಸ್ ಮಾಡಿದೆ. ಈ ಸಿನಿಮಾದ ಆಡಿಯೋ ರೈಟ್ಸ್ ಅನ್ನು ಸರಿಗಮಪ ಕಂಪನಿ ಬರೋಬ್ಬರಿ ಒಂದು ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎಂದು ಬಿಸಿ ಪಾಟೀಲ್ ಅವರೇ ಹೇಳಿದ್ದಾರೆ. ಇನ್ನು ಡಬ್ಬಿಂಗ್ ಹಾಗೂ ರಿಮೇಕ್ ರೈಟ್ಸ್ಗೂ ಡಿಮ್ಯಾಂಡ್ ಇದ್ಯಂತೆ.


Click it and Unblock the Notifications











