Don't Miss!
- Finance ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ ಸೇವೆ ಆರಂಭ, ದಿನಾಂಕ ವಿವರ
- News ವಿ ಸೋಮಣ್ಣಗೆ ಎದುರಾಯ್ತು ಸಂಕಷ್ಟ: ಕೈ ನಾಯಕರ ಸಂಪರ್ಕದಲ್ಲಿರುವ ಮಾಧುಸ್ವಾಮಿ: ಕಾಂಗ್ರೆಸ್ ಸೇರ್ಪಡೆ?
- Automobiles ರಾಂಗ್ ರೂಟ್ನಲ್ಲಿ ಬಂದು ಪ್ರಶ್ನಿಸಿದ ಬೈಕ್ ಸವಾರನಿಗೆ ಥಳಿಸಿದ ಕಾರು ಚಾಲಕ: ವಿಡಿಯೋ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Sports IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ತಾಂಡವ್' ವೆಬ್ ಸರಣಿ ನಿರ್ಮಾಪಕರಿಗಾಗಿ ಪೊಲೀಸರ ಹುಡುಕಾಟ
ಹಿಂದು ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ 'ತಾಂಡವ್' ವೆಬ್ ಸರಣಿ ಮೇಲೆ ಹೊರಿಸಲಾಗಿದ್ದು. ಈಗಾಗಲೇ ದೂರು ಸಹ ದಾಖಲಾಗಿದೆ.
ಇಂದು ಉತ್ತರ ಪ್ರದೇಶ ಪೊಲೀಸರು ಮುಂಬೈಗೆ ಬಂದು 'ತಾಂಡವ್' ವೆಬ್ ಸರಣಿಯ ನಿರ್ಮಾಪಕರ ಕಚೇರಿಗೆ ಭೇಟಿ ನೀಡಿ ನೊಟೀಸ್ ನೀಡಲು ಯತ್ನಿಸಿದರಾದರೂ ನಿರ್ಮಾಪಕ ಕೈಗೆ ಸಿಕ್ಕಿಲ್ಲ. ಅವರು ಕಚೇರಿಯನ್ನು ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂಬುದು ಗೊತ್ತಾಗಿದೆ.
ಮಿರ್ಜಾಪುರ್ ನಿರ್ಮಾಪಕರಿಗೆ ನೊಟೀಸ್ ನೀಡಿದ ಸುಪ್ರೀಂಕೋರ್ಟ್
ನೊಟೀಸ್ ನೀಡುವ ಯತ್ನ ಮಾಡಿದ ಬಳಿಕ ಮಾತನಾಡಿದ ಪೊಲೀಸ್ ಅಧಿಕಾರಿ, ನಿರ್ಮಾಪಕ ಹಿಮಾಂಶು ಮೆಹ್ರಾ ಸಂಪರ್ಕ ಮಾಡಲು ಯತ್ನಿಸುತ್ತಿದ್ದೇವೆ ಆದರೆ ಸಾಧ್ಯವಾಗಿಲ್ಲ' ಎಂದು ಹೇಳಿದ್ದಾರೆ. ಇದೇ ದಿನ 'ತಾಂಡವ್' ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಗೆ ನೊಟೀಸ್ ಅನ್ನು ನೀಡಿದೆ ಪೊಲೀಸ್ ತಂಡ.
ಉತ್ತರ ಪ್ರದೇಶದಲ್ಲಿ ದೂರು ದಾಖಲು
'ತಾಂಡವ್' ವೆಬ್ ಸರಣಿಯಲ್ಲಿ ಹಿಂದು ಭಾವನೆಗಳಿಗೆ ಧಕ್ಕೆ ತರುವಂತಹಾ ದೃಶ್ಯಗಳು ಇವೆ ಎಂದು ಆರೋಪ ಮಾಡಲಾಗಿದ್ದು, ಕೆಲವರು ಉತ್ತರ ಪ್ರದೇಶದಲ್ಲಿ ದೂರು ದಾಖಲಿಸಿದ್ದು, ಎಫ್ಐಆರ್ ಸಹ ದಾಖಲಾಗಿದೆ.
ರಾಜಕೀಯ ವಿಷಯ ವಸ್ತು ಆಧರಿಸಿದ 'ತಾಂಡವ್'
'ತಾಂಡವ್' ವೆಬ್ ಸರಣಿಯು ರಾಜಕೀಯ ವಿಷಯವಸ್ತು ಆಧರಿಸಿದ ವೆಬ್ ಸರಣಿ ಆಗಿದ್ದು. ಜೆಎನ್ಯು ವಿದ್ಯಾರ್ಥಿ ಚಳವಳಿಯ ಕತನವನ್ನೂ ವೆಬ್ ಸರಣಿ ಒಳಗೊಂಡಿದೆ. 'ತಾಂಡವ್' ನ ಹಲವು ದೃಶ್ಯಗಳು ಪ್ರಸ್ತುತ ರಾಜಕೀಯದ ಕೆಲವು ಸನ್ನಿವೇಶಗಳನ್ನು ನೆನಪಿಸುತ್ತವೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ನಡೆದ ಕೆಲವು ಘಟನೆಗಳನ್ನು ವೆಬ್ ಸರಣಿ ನೆನಪಿಸುತ್ತದೆ.
ಮಿರ್ಜಾಪುರ ವೆಬ್ ಸರಣಿ ವಿರುದ್ಧ ಮಿರ್ಜಾಪುರದಲ್ಲಿ ದೂರು ದಾಖಲು
ಕ್ಷಮೆ ಕೇಳಿದ 'ತಾಂಡವ್' ವೆಬ್ ಸರಣಿ ತಂಡ
'ತಾಂಡವ್' ವಿರುದ್ಧ ದೂರು ದಾಖಲಾಗುತ್ತಿದ್ದಂತೆ, ತಾಂಡವ್ ವೆಬ್ ಸರಣಿ ತಂಡವು ಅಧಿಕೃತ ಕ್ಷಮಾಪಣೆಯನ್ನು ಕೇಳಿದೆ. ಅಷ್ಟೇ ಅಲ್ಲದೆ ಕೆಲವು ದೃಶ್ಯಗಳನ್ನು ತೆಗೆಯುವುದಾಗಿ ಸಹ ಹೇಳಿದೆ. ದೇವತೆ ಶಿವ ನ ಕುರಿತಾಗಿ ಇದ್ದ ದೃಶ್ಯವನ್ನು ತೆಗೆದಿದೆ.
ಮಿರ್ಜಾಪುರ್ ವಿರುದ್ಧವೂ ದೂರು ದಾಖಲು
ಅಮೆಜಾನ್ ನ ಮತ್ತೊಂದು ವೆಬ್ ಸರಣಿ 'ಮಿರ್ಜಾಪುರ್' ವಿರುದ್ಧ ಸಹ ದೂರು ದಾಖಲಾಗಿದ್ದು, ಸುಪ್ರೀಂಕೋರ್ಟ್ ಇಂದು ಮಿರ್ಜಾಪುರ್ ನಿರ್ಮಾಪಕರಿಗೆ ನೊಟೀಸ್ ಜಾರಿ ಮಾಡಿದೆ. ಉತ್ತರ ಪ್ರದೇಶದ ಮಿರ್ಜಾಪುರವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.