ಮರ್ಯಾದೆ ರಾಮಣ್ಣನ ರಾಜ್ಯಭಾರ ಒಮ್ಮೆ ನೋಡ್ರಣ್ಣ

ಕಥೆಯ ಬಗ್ಗೆ ಚಿಕ್ಕದಾಗಿ ಹೇಳುವುದಾದರೆ - ರಾಮ (ಕೋಮಲ್ ಕುಮಾರ್) ತನ್ನ ಐದು ಎಕರೆ ಜಮೀನನ್ನು ಮಾರಲು ಊರಿಗೆ ಟ್ರೈನ್ನಲ್ಲಿ ಬರುತ್ತಿರಬೇಕಾದರೆ ಅಪರ್ಣ (ನಿಶಾ ಶಾ) ಪರಿಚಯವಾಗುತ್ತದೆ. ಇಬ್ಬರೂ ಒಳ್ಳೆ ಸ್ನೇಹಿತರಾಗುತ್ತಾರೆ. ನಾಯಕ ದೇಸಾಯಿಯ ಬಂಗಲೆಗೆ ಬರುತ್ತಾನೆ. ಆತನಿಗೆ ಅಲ್ಲಿ ಒಳ್ಳೆ ಉಪಚಾರವೂ ಸಿಗುತ್ತೆ. 25 ವರ್ಷಗಳ ಹಿಂದೆ ನಾಯಕನ ತಂದೆ ತನ್ನ ಮಗನನ್ನು ಕೊಂದಿರುವ ವಿಷಯ ಗೊತ್ತಾದಾಗ ದೇಸಾಯಿ ಕಡೆಯವರು ರಾಮನ ಮೇಲೆ ಸೇಡು ತೀರಿಸಿ ಕೊಳ್ಳಲು ಕಾಯುತ್ತಿರುತ್ತಾರೆ.
ಇದನ್ನರಿತ ರಾಮ ಸಂದರ್ಭೋಚಿತವಾಗಿ ದೇಸಾಯಿ ಕುಟುಂಬಕ್ಕೆ ಹತ್ತಿರವಾಗುತ್ತಾನೆ. ಅಲ್ಲದೆ ಅಪರ್ಣಾ ಮತ್ತು ರಾಜೇಶ್ (ಧರ್ಮಾ) ಮದುವೆಗೂ ಸಹಾಯ ಮಾಡುತ್ತಾನೆ. ಆದರೂ ದೇಸಾಯಿ ಇವನ ಮೇಲೆ ಸೇಡು ತೀರಿಸಲು ಸೂಕ್ತ ಸಮಯ ಹುಡುಕುತ್ತಿರುತ್ತಾನೆ. ದೇಸಾಯಿ ಮನೆಯಲ್ಲಿ ರಾಮನಿಗೆ ಮುಂದೇನಾಗುತ್ತೆ? ದೇಸಾಯಿ ಕುಟುಂಬವನ್ನು ಯಾವ ರೀತಿಯಲ್ಲಿ ನಿಭಾಯಿಸುತ್ತಾನೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್.
ಚಿತ್ರದ ಪ್ಲಾಸ್ ಪಾಯಿಂಟ್
1. ಎಂ ಎಂ ಕೀರವಾಣಿ ಅವರ ಎರಡು ಹಾಡುಗಳು
2. ಆರ್ ಗಿರಿಯವರ ಕ್ಯಾಮರಾ ಕೈಚಳಕ
3. ಎಂದಿನಂತೆ ಹಿರಿಯ ನಟ ದೊಡ್ಡಣ್ಣ ಅವರ ಪ್ರಬುದ್ಧ ನಟನೆ
4. ಕೋಮಲ್ ಕುಮಾರ್ ಅವರ ಸೂಪರ್ ಅಭಿನಯ
5. ರಮೇಶ್ ಭಟ್, ಧರ್ಮಾ ಉತ್ತಮ ನಟನೆ
6. ಒಂದು ವಿಶೇಷ ಮತ್ತು ವಿಭಿನ್ನ ಪಾತ್ರಕ್ಕೆ ರಿಯಲ್ ಸ್ಟಾರ್ ಉಪ್ಪಿ ಡಿಫರೆಂಟ್ ಶೈಲಿಯಲ್ಲಿ ಧ್ವನಿ ನೀಡಿರುವುದು
ಚಿತ್ರದ ಮೈನಸ್ ಪಾಯಿಂಟ್
1. ಮೊದಲಾರ್ಧ ಬೋರೋ ಬೋರ್. ಕೋಮಲ್ ಅಭಿಮಾನಿಗಳ ತಾಳ್ಮೆ ಪರೀಕ್ಷಿಸಬಹುದು
2. ನಾಯಕಿ ನಿಶಾ 'ಹಿರೋಯಿನ್ ಮೆಟೀರಿಯಲ್' ಅಲ್ಲವೇ ಅಲ್ಲ
3. ಕೋಮಲ್ ಚಿತ್ರದಲ್ಲಿ ಕಾಮಿಡಿಗೆ ಪ್ರಾಮುಖ್ಯತೆ ಇದೆ ಎಂದು ನೀವು ಥಿಯೇಟರ್ ಹೋದರೆ ಅದಕ್ಕೆ ನಾವು ಜವಾಬ್ದಾರರಲ್ಲ
4. ತೆಲುಗು ಚಿತ್ರದ ಫ್ರೇಮ್ ಟು ಫ್ರೇಮ್ ರಿಮೇಕ್ ಮಾಡಿದ ನಿರ್ದೇಶಕ ಪತ್ತಿ ಗುರುಪ್ರಸಾದ್.
ಇಷ್ಟಕ್ಕೂ ಚಿತ್ರ ನೋಡಬೇಕೆ ಬೇಡವೆ?! ಮಾರ್ಯಾದೆ ರಾಮಣ್ಣನ ಪ್ಲಸ್ ಮತ್ತು ಮೈನಸ್ ಪಾಯಿಂಟುಗಳು ನಿಮ್ಮ ಮುಂದಿವೆ. ಆಯ್ಕೆ ನಿಮಗೇ ಬಿಟ್ಟಿದ್ದು. ಚಿತ್ರವನ್ನು ನೋಡದೆ ಇರುವವರು ಹೋಗಿ ನೋಡಿ. ಈಗಾಗಲೆ ನೋಡಿದ್ದರೆ ಮತ್ತೊಮ್ಮೆ ಹೋಗಿ ನೋಡಿ. ಮೊದಲಾರ್ಧ ಬೋರ್ ಹೊಡಿಸಿದರೂ ಇಂಟರ್ವಲ್ ನಂತರ ಚಿತ್ರದಲ್ಲಿ ಸ್ಪೀಡ್ ಇದೆ. ಕೋಮಲ್ ನಟನೆ ಮಸ್ತಾಗಿದೆ. ಹತ್ತರಲ್ಲಿ ಆರು ಅಂಕ ನೀಡಬಹುದು.


Click it and Unblock the Notifications











