Don't Miss!
- News ಮೈತ್ರಿ ಹೆಸರಿನಲ್ಲಿ ಬೆನ್ನಿಗೆ ಚೂರಿ ಹಾಕಿದರು; ಎಚ್.ಡಿ. ಕುಮಾರಸ್ವಾಮಿ ಆಕ್ರೋಶ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರವಿಮರ್ಶೆ: ಜೊತೆಯಾಗಿ, ಹಿತವಾಗಿ
ಕೆಲವು ಪ್ರಶ್ನೆಗಳಿಗೆ ಉತ್ತರ ಇರುವುದಿಲ್ಲ. ಅಂದುಕೊಂಡದ್ದು ಆಗದೇ, ಅದು ಇನ್ನೇನೋ ಆಗುತ್ತದೆ. ಬದುಕು ಬರಡಾಗಿ, ಜೀವನ ಸಾಕಾಗಿ ಇನ್ನೇನು ಎಲ್ಲ ಮುಗಿದು ಹೋಯಿತು ಎನ್ನುವ ಹೊತ್ತಿಗೆ ಒಂದು ಆಶಾಕಿರಣ ಕಣ್ಣಮುಂದೆ ಗೋಚರವಾಗುತ್ತದೆ.
ಇನ್ನೇನು ಕತ್ತಲು ಆವರಿಸಿತು ಎನ್ನುವ ಹೊತ್ತಿಗೆ ಆಕೆಯ ಮುಂದೆ ಆತ ಪ್ರತ್ಯಕ್ಷವಾಗುತ್ತಾನೆ. ಆದರೆ, ಆಕೆಗೆ ತನ್ನ ಮಗನೇ ಸರ್ವಸ್ವವಾಗಿರುತ್ತಾನೆ. ತಾಯಿ-ಮಗನ ಸೆಂಟಿಮೆಂಟ್ ಪುಟಗಳ ಮಧ್ಯೆ ಇನ್ನೊಬ್ಬ ವ್ಯಕ್ತಿಯ ಆಗಮನ ಇಬ್ಬರಿಗೂ ಇಷ್ಟವಿರುವುದಿಲ್ಲ...
ಮಗನನ್ನು ಪಕ್ಕದ ಮನೆ ಹುಡುಗಿ ಪ್ರೀತಿಸುತ್ತಿರುತ್ತಾಳೆ. ಅವನಿಗೆ ಅದು ಇಷ್ಟವಿರುವುದಿಲ್ಲ. ಕಾರಣ ತಾಯಿಯ ಪ್ರೀತಿ. ಹೀಗಿರುವಾಗ ಒಂದು ದಿನ ಆ ತಾಯಿಯ ಕೊಲೆಯಾಗುತ್ತದೆ! ಅಲ್ಲಿಂದ ಹೀಗೂ ಉಂಠೇ!! ನಿರ್ದೇಶಕ ಶ್ರೀನಿವಾಸ್ ಕತೆಯನ್ನು ಒಂದು ಹಂತಕ್ಕೆ ಚೆನ್ನಾಗಿಯೇ ಮಾಡಿದ್ದಾರೆ. ಅದರ ಎಳೆ ವಿಶಾಲವಾಗಿದೆ.
ಮಲೆನಾಡ ಮಧ್ಯಭಾಗದಲ್ಲಿ ಚಿತ್ರೀಕರಣ ಮಾಡಿ, ಕಣ್ಣಿಗೆ ಹಬ್ಬದೂಟ ಹಾಕಿಸುತ್ತಾರೆ. ಆದರೆ, ತಾಯಿಯ ಪಾತ್ರ ಮಾಡಿರುವ ತಾರಾ ಅವರನ್ನು ಹೊರತಾಗಿ ಯಾರೊಬ್ಬರೂ ಪಾತ್ರಕ್ಕೆ ನ್ಯಾಯ ಒದಗಿಸಿಲ್ಲ. ಹಾಗೆನ್ನುವ ಬದಲು- ನಾಯಕ-ನಾಯಕಿ- ವಿಲನ್ ಎಲ್ಲರೂ ಹೊಸಬರು.
ನಾಯಕಿ ತೇಜಸ್ವಿನಿ ನಗುವುದನ್ನೇ ನಟನೆ ಎಂದುಕೊಂಡಿದ್ದಾಳೆ. ನಾಯಕ ಥೇಟ್ ವಿಲನ್ ಥರ ಕಾಣುತ್ತಾರೆ. ಸಿಡುಕು ರೋಗದ ವಿಲನ್ ಪೋಷಕ ನಟನಂತೆ ಅಭಿನಯಿಸಿದ್ದಾನೆ! ಇಡೀ ಚಿತ್ರವನ್ನು ನೋಡಿಸಿಕೊಂಡು ಹೋಗುವುದು ತಾಯಿಯ ಪಾತ್ರ. ತಾರಾ ಇಲ್ಲಿ ಅಳತೆ ಮೀರಿ ತೆಳ್ಳಗಾಗಿದ್ದಾರೆ.
ಜೈಜಗದೀಶ್, ನೀನಾಸಂ ಅಶ್ವತ್ಥ್, ರಾಮಕೃಷ್ಣ, ಶಂಕರ್ ಅಶ್ವತ್ಥ್ ನಟನೆಯಲ್ಲಿ ತಪ್ಪು ಹುಡುಕುವುದು ಕಷ್ಟ. ದೇವಾ ಸಂಗೀತದಲ್ಲಿ ಎರಡು ಹಾಡುಗಳು ಮಧುರವಾಗಿದೆ. ಛಾಯಾಗ್ರಹಣ ಹಸಿರ ತೋರಣ.