Don't Miss!
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- News ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಯಜಮಾನ' ಮಾಸ್ ಪ್ರೇಕ್ಷಕರಿಗೆ ಮಹಾರಾಜ.. ಕ್ಲಾಸ್ ಪ್ರೇಕ್ಷಕರಿಗೆ ಮನೆ ಹುಡುಗ
ಶಿವನಂದಿಯ ಗೀತೆಯೊಂದಿಗೆ ಭರ್ಜರಿ ಎಂಟ್ರಿ ಕೊಡುವ ದರ್ಶನ್ ಹಾಗೂ ಈ ಹಾಡಿನಲ್ಲಿ ವಿನೋದ್ ಪ್ರಭಾಕರ್, ಪ್ರಜ್ವಲ್ ದೇವರಾಜ್, ಪ್ರೇಮ್, ಚಿರು ಸರ್ಜಾ ಅವರು ದರ್ಶನ್ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಕಿರಿಕ್ ಪಾರ್ಟಿಯ ರಶ್ಮಿಕಾ ಮಂದಣ್ಣ ಕ್ಯೂಟಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ದೇವದುರ್ಗದಲ್ಲಿ ಎಂಬುದೊಂದು ಹಳ್ಳಿ, ಆ ಹಳ್ಳಿಯ ಹಿರಿಯನಾಗಿ ಹಾಗೂ ಕಾವೇರಿ (ರಶ್ಮಿಕಾ) ಅಪ್ಪನಾಗಿ ನಟಿಸಿದ್ದಾರೆ. ಮೊಟ್ಟಮೊದಲ ಬಾರಿಗೆ ರಶ್ಮಿಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. 'ಒಂದು ಮುಂಜಾನೆ..' ಹಾಡಿನಲ್ಲಿ ದರ್ಶನ್ ಹಾಗೂ ರಶ್ಮಿಕಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಅವರ ಡೈಲಾಗೆ "ಕಾವೇರಿನು ನಂದೆ ಹಾಗೂ ಬೆಂಜ಼ು ಕಾರು ನಂದೆ" ಆಗಾಗ ಕೇಳಿಬರುತ್ತದೆ. ಇನ್ನೋಬ್ಬ ಬೆಡಗಿ ಗಂಗಾ (ತಾನ್ಯ ಹೋಪ್) ಅವರು ಪತ್ರಕರ್ತೆಯಾಗಿ ಅಭಿನಯಿಸಿದ್ದಾರೆ.
'ಯಜಮಾನ'ನ ಪ್ಲಸ್ ಗಳೇನು? ಮೈನಸ್ ಗಳೇನು?
ಮಿಠಾಯಿ ಸೂರಿಯಾಗಿ ಧನಂಜಯ ಅಭಿನಯ ಚೆನ್ನಾಗಿದೆ ಹಾಗೂ ಪ್ರಾರಂಭದಿಂದ ಕೊನೆಯವರೆಗೂ ದರ್ಶನ್ ಅವರಿಗೆ ಪೈಪೋಟಿ ಕೊಟ್ಟಿದ್ದಾರೆ. ರವಿಶಂಕರ್ ಹಾಗೂ ಠಾಕೂರ್ ಸಿಂಗ್ ಚಿತ್ರದಲ್ಲಿ ವಿಲನ್ ಗಳಾಗಿ ಬೊಬ್ಬಿರಿದು ಅಬ್ಬರಿಸಿದ್ದಾರೆ. ಅಡುಗೆ ಎಣ್ಣೆಯ ತಯಾರಿಕೆ, ಕೊಳ್ಳುವಿಕೆ ಒಂದಿಷ್ಟು ಮಾಫಿಯವೇ ಚಿತ್ರದ ಒಂದು ಎಳೆಯಷ್ಟೇ. ಇನ್ನೂ ದತ್ತಣ್ಣ, ಸಾಧು ಕೋಕಿಲ, ಕೆ.ಆರ್.ಪೇಟೆ ಶಿವು, ಮಂಡ್ಯ ರಮೇಶ್ ಹೀಗೆ ತಾರಾಗಾಣವೇ ಚಿತ್ರಕ್ಕಿದೆ.
''ಯಜಮಾನ' ಚೆನ್ನಾಗಿಲ್ಲ ಅಂತ ಒಬ್ಬರೂ ಹೇಳಿಯೇ ಇಲ್ಲ'' - ಶೈಲಜಾ ನಾಗ್
ಬಸಣ್ಣಿ ಹಾಡು ಮಾಸ್ ಪ್ರೇಕ್ಷಕರಿಗೆ ಕಿಕ್ ನೀಡುತ್ತದೆ ಹಾಗೂ ಉಳಿದೆಲ್ಲ ಹಾಡುಗಳು ಅದ್ಭುತವಾಗಿ ಮೂಡಿಬಂದಿದೆ. ಚಿತ್ರದ ಸಂಗೀತ ಹಾಗೂ ನಿರ್ದೇಶನ ಮಾಡಿರುವ ಹರಿಕೃಷ್ಣ ಚಿತ್ರದಲ್ಲಿ ಗೆದ್ದಿದ್ದಾರೆ. ದರ್ಶನ್ ಅವರ ಹಲವಾರು ಡೈಲಾಗ್ ಗಳು ಚೆಪ್ಪಾಳೆ ಹಾಗೂ ವಿಜ಼ಲ್ ಗಿಟ್ಟಿಸಿವೆ. ಚೇತನ್ ಹಾಗೂ ಹರಿಕೃಷ್ಣ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಶ್ರೀಷ ಕೂದುವಳ್ಳಿಯವರು ತಮ್ಮ ಕ್ಯಾಮೆರಾದಲ್ಲಿ ಹಳ್ಳಿಯ ಸೊಗಡನ್ನು ಸೆರೆಹಿಡಿದಿದ್ದಾರೆ. ಚಿತ್ರದುದ್ದಕ್ಕೂ ಹಲವಾರು ಸೆಟ್ಗಳನ್ನು ಹಾಗೂ ಬೃಹತ್ ನಂದಿಯ ವಿಗ್ರಹವನ್ನು ತಮ್ಮ ಕಲೆಯ ಮೂಲಕ ಚಿತ್ರಕ್ಕೆ ಮೆರಗು ನೀಡಿದ್ದಾರೆ ಶಶಿಧರ ಅಡಪ.
ಒಟ್ಟಾರೆ, ಹೇಳುವುದಾದರೆ ಚಿತ್ರವು ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಗೆ ರಂಜಿಸುವಲ್ಲಿ ಯಶಸ್ವಯಾಗಿದೆ. ಸಾಧು ಅವರು ನಗೆಗಡಲಿನಲ್ಲಿ ತೇಲಿಸುತ್ತದೆ. ಅದ್ಭುತವಾದ ಫೈಟ್ಸ್ ಗಳು ಮಾಸ್ ಪ್ರೇಕ್ಷಕರ ಕಣ್ಣಿಗೆ ಮುದ್ದ ನೀಡುತ್ತವೆ. " ಹೇ ಕ್ಯಾಡಬರೀಸ್ .. ಆನೆ ನಡೆದದ್ದೇ ದಾರಿ..ತಾಕತ್ತಿದ್ದರೆ ಕಟ್ಟಿಹಾಕು" ಡೈಲಾಗ್ ಅಭಿಮಾನಿಗಳ ಫೇವರೇಟ್. ಒಂದಿಷ್ಟು ಹಳ್ಳಿಗರಿಗೆ ಒಗ್ಗಟ್ಟಿನ ಮಂತ್ರ ಹಾಗೂ ತಾವು ಬೆಳೆದ ಬೆಳೆಗಳಿಗೆ ಮಧ್ಯವರ್ತಿಗಳಿಲ್ಲದೇ ತಮ್ಮ ಕಸುಬಿಗೆ ತಾವೇ "ಯಜಮಾನ" ರಾಗಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.
ಇವುಗಳ ಜೊತೆಗೆ ಒಂದಿಷ್ಟು ಸ್ಕ್ರೀನ್ ಪ್ಲೇನಲ್ಲಿ ಹಿಡಿತಸಾಧಿಸಬಹುದಿತ್ತು. ಪಕ್ಕ ಪೈಸಾವಸೂಲ್, ಕಮರ್ಷಿಯಲ್ ಜಾಗೂ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಈ ಯಜಮಾನ.